April 29, 2024

MALNAD TV

HEART OF COFFEE CITY

ವಿಶ್ವಕರ್ಮ ಸಮಾಜ ಸಂಘಟಿತರಾಗಬೇಕು : ಶಿವಸುಜ್ಞಾನ ತೀರ್ಥಶ್ರೀ

1 min read

 ವಿಶ್ವಕರ್ಮ ಸಮುದಾಯ ಸಂಘಟಿತರಾಗದ ಕಾರಣದಿಂದ ಇಂದು ಸರ್ಕಾರದ ಹಲವು ಸೌಲಭ್ಯಗಳಿಂದ ವಂಚಿತರಾಗಿದ್ದೇವೆಂದು ಹಾಸನ ಜಿಲ್ಲೆ ಅರಮಾದನ ಹಳ್ಳಿ ವಿಶ್ವ ಬ್ರಾಹ್ಮಣ ಮಹಾ ಸಂಸ್ಥಾನ ಮಠದ ಪರಮ ಪೂಜ್ಯ ಜಗದ್ಗುರು ಅನಂತ ಶ್ರೀ ವಿಭೂಷಿತ ಶಿವ ಸುಜ್ಞಾನ ತೀರ್ಥ ಮಹಾ ಸ್ವಾಮಿಗಳು ವಿಷಾಧ ವ್ಯಕ್ತಪಡಿಸಿದರು.ಅವರು ಇಂದು ನಗರದ ಕುವೆಂಪು ಕಲಾಮಂದಿರದಲ್ಲಿ ಏರ್ಪಡಿಸಿದ್ದ ಜಿಲ್ಲಾ ವಿಶ್ವಕರ್ಮ ಸೇವಾ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದರು.ಸಂಘಟನೆ ಕೇವಲ ಒಂದು ತಾಲ್ಲೂಕು ಹೋಬಳಿಗೆ ಸೀಮಿತವಾಗದೆ ಇಂದು ಜಿಲ್ಲಾ ಮಟ್ಟದಲ್ಲಿ ವಿಶ್ವಕರ್ಮ ಸೇವಾ ಸಂಘ ಸ್ಥಾಪನೆಯಾಗುತ್ತಿರುವುದು ಶ್ಲಾಘನೀಯ ಎಂದ ಅವರು ಬಹುಸಂಖ್ಯಾತ ಸಮಾಜದ ಸಂಘಟನೆಗಳು ಆ ಜನಾಂಗದ ರಾಜಕಾರಣಿಗಳ ಬಲದಿಂದ ಸರ್ಕಾರದ ಸೌಲಭ್ಯಗಳನ್ನು ಪಡೆದು ಸಮಾಜದ ತುತ್ತ ತುದಿಗೆ ಹೋಗಿದ್ದಾರೆ, ಸರ್ಕಾರ ಈ ದೊಡ್ಡ ಸಮುದಾಯಗಳನ್ನು ಓಲೈಸಿಕೊಳ್ಳಲು ಎಲ್ಲಾ ರೀತಿಯ ಸೌಲಭ್ಯಗಳನ್ನು ಕೊಡುತ್ತಿರುವುದನ್ನು ನಾವಿಂದು ಕಾಣುತ್ತಿದ್ದೇವೆ ಎಂದರು.ಹಿಂದೆ ಕೆ.ಪಿ ನಂಜುಂಡಿ ನೇತೃತ್ವದಲ್ಲಿ ಸಂಘಟನೆಯನ್ನು ಸ್ಥಾಪಿಸಿ ಬೃಹತ್ ಸಮಾವೇಶ ಆಚರಿಸುವ ಮೂಲಕ ಮೊದಲು ಮಠಗಳು ಸಮಾಜವನ್ನು ಕೊಂಡೊಯ್ಯುವ ನಿಟ್ಟಿನಲ್ಲಿ ಸಾಮಾಜಿಕ ಸಾಮರಸ್ಯ ಮೂಡಿಸಬೇಕು ಎಂಬುದು ಅದರ ಆಶಯವಾಗಿದ್ದು, ಹೋರಾಟ ನಡೆಸಿದರೂ ಸೀಮಿತ ಸೌಲಭ್ಯಗಳು ದೊರಕಿದವು. ವಿಶ್ವಕರ್ಮ ಅಭಿವೃದ್ಧಿ ನಿಗಮ, ಸರ್ಕಾರದ ವತಿಯಿಂದ ವಿಶ್ವಕರ್ಮ ಜಯಂತಿ ಮಹೋತ್ಸವ, ಜಕಣಾಚಾರ್ಯರ ಜನ್ಮದಿನಾಚರಣೆ ಬಿಟ್ಟರೆ ಬೇರೇನೂ ಸಿಗಲಿಲ್ಲ ಎಂದು ಹೇಳಿದರು.ಪ್ರಾಚೀನ ಕಾಲದಿಂದ ಬಂದ ವಿಶ್ವಕರ್ಮ ಪರಂಪರೆಯನ್ನು ನಾವು ಇಂದು ಉಳಿಸುವತ್ತ ಚಿಂತನೆ ಮಾಡಬೇಕಿದೆ. ಪಂಚ ಶಿಲ್ಪಗಳಿಂದ ವಿಗ್ರಹ ನಿರ್ಮಾಣ ಮಾಡುವುದು ನಮ್ಮ ಸುಮುದಾಯದ ಶಾಸ್ತ್ರ. ಆಧ್ಯಯನ ಮಾಡಿ ಜಗತ್ಪ್ರಸಿದ್ಧವಾಗಿವೆ. ಇದನ್ನು ಮರೆತು ಕೇವಲ ನಮಗೆ ವೃತ್ತಿ ಬೇಕು ಎನ್ನುವಂತವರಾಗಿದ್ದರಿಂದ ಎಲ್ಲೂ ಮಾನ್ಯತೆ ಇಲ್ಲದಂತಾಗಿದೆ. ಶಾಸ್ತ್ರ ಅಧ್ಯಯನದ ಮೂಲಕ ಪೂರ್ವಜರು ಶಿಲ್ಪಗಳನ್ನು ತಯಾರು ಮಾಡುತ್ತಿದ್ದರಿಂದ ಜಗತ್ ವಿಖ್ಯಾತರಾಗಿ ಗೌರವ ಲಭಿಸಿತು ಎಂದು ಸ್ಪಷ್ಟಪಡಿಸಿದರು.ಇಂದು ನಮ್ಮ ಸಮುದಾಯದ ಕೆಲವರು ತಮ್ಮ ಮಡಿವಂತಿಕೆಗಳಿಂದಾಗಿ ಸಂಘಟನೆಗಳಿಂದ ದೂರವಾಗುತ್ತರುವುದು ನೋವುಂಟು ಮಾಡುತ್ತಿದೆ. ಪಂಚ ಮುಖದಿಂದ ಬಂದ ವಿಶ್ವಕರ್ಮನ ಪಂಚ ವೇದಗಳ ಅಧ್ಯಯನದಿಂದಾಗಿ ಗೌರವಗಳು ಸಮಾಜದಲ್ಲಿ ಲಭಿಸುತ್ತಿವೆ, ಇಂದು ನಾವು ವೃತ್ತಿಗೆ ಸೀಮಿತರಾಗದೆ ಪೂರ್ವಜರಿಂದ ಬಂದ ಈ ನಮ್ಮ ಸಂಸ್ಕøತಿಯನ್ನು ಬೆಳೆಸಲು ಪ್ರತಿಯೊಬ್ಬರು ಶ್ರಮಿಸಬೇಕೆಂದು ಕರೆ ಕೊಟ್ಟರು.

ಚನ್ನಗಿರಿ ತಾಲ್ಲೂಕಿನ ವಿಶ್ವಕರ್ಮ ಮಾನವ ಸಂಸ್ಥಾನ ಸಾವಿತ್ರಿ ಪೀಠ ಕಾಶಿ ಮಠದ ಪರಮ ಪೂಜ್ಯ ಅಷ್ಟೋತ್ತರ ಶತಶ್ರೀ ಶಂಕರಾತ್ಮಾನಂದ ಸರಸ್ವತಿ ಮಹಾಸ್ವಾಮಿ ಮಾತನಾಡಿ ಸಂಘಗಳು ಕೇವಲ ಹೆಸರಿಗೆ ಮಾತ್ರ ಸ್ಥಾಪಿತವಾಗದೇ ಸಮಾಜದಲ್ಲಿರುವ ಬಡವರ ಸೇವೆಗೆ ಮುಂದಾಗುವುದರ ಮೂಲಕ ಸಮುದಾಯದ ಜನರಲ್ಲಿ ಜಾಗೃತಿ ಮೂಡಿಸಿ ಸರ್ಕಾರದ ಗಮನ ಸೆಳೆಯಲು ಪಕ್ಷಾತೀತವಾಗಿ ಹೋರಾಟ ಮಾಡಬೇಕು ಎಂದು ಕರೆ ನೀಡಿದರು.ಇಂದು ಎಲ್ಲಾ ಸಮುದಾಯಗಳ ಜಾತಿ ಜನಾಂಗಗಳಲ್ಲಿ ಒಂದೊಂದು ಸಂಘಟನೆಗಳಿದ್ದರೆ ರಾಜ್ಯ ಮಟ್ಟದಲ್ಲಿ ನೂರಾರು ಸಂಘಟನೆಗಳಿವೆ ಆದರೆ ವಿಶ್ವಕರ್ಮ ಸಮಾಜ ಸಂಘಟನೆ ಸ್ಥಾಪಿಸುವಲ್ಲಿ ಜನಾಂಗದಲ್ಲಿರುವ ವೈಮಸ್ಸೇ ಕಾರಣ ವೈಯಕ್ತಿಕ ಹಿತಾಸಕ್ತಿಗಿಂತ ಸಮುದಾಯದ ಒಳತಿಗೆ ದುಡಿಯಬೇಕು ಇಲ್ಲವಾದರೆ ಸರ್ಕಾರ ಗುರ್ತಿಸುವುದಿಲ್ಲ ಎಂದು ವಿಷಾಧಿಸಿದರು.ಈ ವರೆಗೆ ಅಧಿಕಾರಕ್ಕೆ ಬಂದ ಸರ್ಕಾರಗಳು ವಿಶ್ವಕರ್ಮ ಸಮುದಾಯವನ್ನು ಊಟಕ್ಕೆ ಬೇಕಾದ ಉಪ್ಪಿನಕಾಯಿಯಂತೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ ವಿನಹಾ ಸಮುದಾಯ ಪ್ರಾಚೀನ ಶಿಲ್ಪಗಳನ್ನು ಕೊಟ್ಟ ಕೊಡುಗೆಗಳು ಇದ್ದರೂ ಪ್ರಚಲಿತಕ್ಕೆ ಬರುವಲ್ಲಿ ಆಗಿಲ್ಲ ಆದ್ದರಿಂದ ಸಂಘಟಿತ ಪ್ರಯತ್ನ ಅಗತ್ಯ ಎಂದು ಹೇಳಿದರು.ಹಂಪಿ, ಬೇಲೂರು, ಹಳೇಬೀಡು, ಐಹೊಳೆ, ಪಟ್ಟದಕಲ್ಲು, ಮಹಾರಾಷ್ಟ್ರದ ಅಜಂತ, ಎಲ್ಲೋರ ಕೈಲಾಸನಾಥ ದೇವಾಲಯದಲ್ಲಿ ಕೆತ್ತಲಾಗಿರುವ ಏಕ ಶಿಲಾ ವಿಗ್ರಹ ನಮ್ಮ ಪೂರ್ವಜರು ಕೊಟ್ಟ ಇತಿಹಾಸ ಎಂದು ಶ್ಲಾಘಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕ ಹೆಚ್.ಡಿ ತಮ್ಮಯ್ಯ ಹಿಂದುತ್ವವನ್ನು ಯಾರಿಗೂ ಗುತ್ತಿಗೆ ಕೊಟ್ಟಿಲ್ಲ. ಪೆÇೀಷಕರು ತಮ್ಮ ತಮ್ಮ ಮನೆಗಳಲ್ಲಿ ಹಿಂದೂ ಧರ್ಮದ ಸಂಸ್ಕಾರ, ಸಂಸ್ಕøತಿ ಹಾಗೂ ಆಚರಣೆಗಳನ್ನು ಮಕ್ಕಳಿಗೆ ಕಲಿಸಿಕೊಟ್ಟರೆ ತಂತಾನೆ ಹಿಂದುತ್ವ ಉಳಿಯುತ್ತದೆ ಎಂದು ಅಭಿಪ್ರಾಯಿಸಿದರು.

ಸಂಸ್ಕಾರ, ಸಂಸ್ಕøತಿ ಬರಿ ಓದಿನಿಂದ ಬರವಂತಹದ್ದಲ್ಲ. ಮನೆಗಳಲ್ಲಿ ಪೆÇೀಷಕರು ನಮ್ಮ ಧರ್ಮಸಂಸ್ಕಾರ, ಸಂಸ್ಕøತಿ ಕಲಿಸಿಕೊಡಬೇಕಾಗುತ್ತದೆ. ಹಿಂದುತ್ವವನ್ನು ಗುತ್ತಿಗೆ ಪಡೆದು ನಮ್ಮ ಧರ್ಮ ಸಂಸ್ಕøತಿ ಉಳಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು.ಮರದ ಕೊರಡಿಗೆ ವಿಗ್ರಹ ರೂಪಕೊಡುವ, ಕಲ್ಲುಬಂಡೆಯನ್ನು ಶಿಲ್ಪ ಮಾಡುವ, ಮಹಿಳೆಯರ ಆಕರ್ಷಣೀಯ ಒಡವೆಗಳನ್ನು ಅಂದವಾಗಿ ಮಾಡಿಕೊಡುವ ವಿಶ್ವ ಕರ್ಮ ಸಮುದಾಯ ಇತರರಿಗಿಂದ ಒಂದು ಪಟ್ಟು ಮೇಲು ಎಂದುಹೇಳಿದರು. ಸುವರ್ಣಾಕಾರರರಿಗೆ ಆಗುತ್ತಿರುವ ಶೋಷಣೆಯನ್ನು ತಪ್ಪಿಸುವ ಪ್ರಯತ್ನ ಮಾಡಲಾಗುವುದು.ರಿಜಿಸ್ಟ್ರರ್ ಆಗಿರುವ ವಿಶ್ವ ಕರ್ಮ ಸೇವಾ ಸಂಘಕ್ಕೆ ಸಭಾಂಗಣ ನಿರ್ಮಿಸಲು ನಗರದ ಹೊರವಲಯದಲ್ಲಿ 5 ಎಕರೆ ಜಾಗ ಗುರುತಿಸಿ ಸಮುದಾಯ ಭವನ ನಿರ್ಮಿಸುವ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

ಕರ್ನಾಟಕ ರಾಜ್ಯ ವಿಶ್ವಕರ್ಮ ಅಭಿವೃದ್ಧಿ ನಿಗಮದ ನಿರ್ದೇಶಕ ರಮೇಶ್‍ಕಡಿದಾಳ್ ಪ್ರಾಸ್ತಾವಿಸಿ, ಜಿಲ್ಲೆಯಲ್ಲಿ 35 ಸಾವಿರ ಜನಸಂಖ್ಯೆಯ ಹೊಂದಿರುವ ವಿಶ್ವ ಕರ್ಮ ಸಮುದಾಯಕ್ಕೆ ಒಂದು ರಾಜಕೀಯ ಪ್ರಾತಿನಿಧ್ಯ ಇಲ್ಲದಾಗಿದೆ.ಸರಕಾರ ನಮ್ಮನ್ನು ಈವರೆಗೂ ಗುರುತಿಸಿಲ್ಲ. ನಿಗಮದ ಯೋಜನೆಗೆ ಸಮರ್ಪಕ ಅನುದಾನ ನೀಡುತ್ತಿಲ್ಲ. ಹೀಗಾಗಿ ವಿಶ್ವಕರ್ಮ ಸೇವಾ ಸಂಘ ಅಸ್ತಿತ್ವಕ್ಕೆ ತಂದಿದ್ದು ಅದರ ಮೂಲಕ ಒತ್ತಡ ಹಾಕಿ ನಮ್ಮ ಬೇಡಿಕೆಗೆ ಆಗ್ರಹಿಸಲಾಗುವುದು ಎಂದರು.
ವಿಶ್ವ ಕರ್ಮ ಸೇವಾ ಸಂಘದ ಅಧ್ಯಕ್ಷ ಚೇತನ್‍ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಝೀ ಟಿವಿ ಕನ್ನಡ ವಾಹಿನಿಯಲ್ಲಿ ಸರಿಗಮಪ ಕಾರ್ಯಕ್ರಮದಲ್ಲಿ ವಿಜೇತರಾದ ಗಾಯಕಿ ಪ್ರಗತಿ ಬಸವರಾಜ ಬಡಿಗೇರ ಅವರನ್ನು ಸನ್ಮಾನಿಸಲಾಯಿತು. ದಾನಿಗಳಾದ ಲತಾವಿಶೇಷ್ ಮತ್ತು ಡಾ.ಎಂ.ಪಿ. ನಾಗರಾಜ್, ಸಂಘದ ಪ್ರಧಾನ ಕಾರ್ಯದರ್ಶಿ ಮಂಜುನಾಥ, ಉಪಾಧ್ಯಕ್ಷ ಉಮೇಶಾಚಾರ್ಯ, ಮುಖಂಡರಾದ ಭಾಸ್ಕರಾಚಾರ್ಯ, ರತ್ನಾಕರ ಚಾರ್ಯ, ಮುಂಟೇಲಿಂಗಾಚಾರ್, ಮಹೇಂದ್ರಚಾರ್, ದೇವೇಂದ್ರಚಾರ್ ಮತ್ತಿತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಜಿಲ್ಲಾ ವಿಶ್ವಕರ್ಮ ಸೇವಾ ಸಂಘದ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಲಾಯಿತು. ಸಂಘದ ಉಪಾಧ್ಯಕ್ಷ ಉಮೇಶಾಚಾರ್ಯ ಸ್ವಾಗತಿಸಿ, ಬಾಸ್ಕರ್ ನಿರೂಪಿಸಿ, ಮಂಜುನಾಥ್ ವಂದಿಸಿದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!