May 16, 2024

MALNAD TV

HEART OF COFFEE CITY

ಅರ್ಜಿ ಹಾಕದಿದ್ದರೆ ಉಚಿತ ಕರೆಂಟ್ ಇಲ್ಲ : ಸಚಿವ ಜಾರ್ಜ್

1 min read

 

ಅರ್ಜಿ ಹಾಕೋದಕ್ಕೆ ಜುಲೈ 20-25ರವರೆಗೂ ಟೈಂ ಇದೆ. ಅರ್ಜಿ ಹಾಕಬಹುದು. ಅರ್ಜಿ ಹಾಕದವರಿಗೆ ಫ್ರೀ ವಿದ್ಯುತ್ ಸಿಗುವುದಿಲ್ಲ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಗೃಹಜ್ಯೋತಿ ಯೋಜನೆ ಕೆಲಸ ಚೆನ್ನಾಗಿ ಆಗುತ್ತಿದೆ. ಜನ ಕೂಡ 86.5 ಲಕ್ಷ ಅರ್ಜಿ ಹಾಕಿದ್ದಾರೆ.‌ ಇಂದಿನಿಂದ ಎಲ್ಲರಿಗೂ ಫ್ರೀ ಕರೆಂಟ್ ಸಿಗಲಿದೆ ಎಂದರು. ಈ ತಿಂಗಳ ಕೊನೆಯಲ್ಲಿ ಎಲ್ಲರಿಗೂ ಬಿಲ್ ಬರುತ್ತೆ. ಜೂನ್ ತಿಂಗಳಿನದ್ದು ಜುಲೈಗೆ ಬರಲಿದೆ.‌ ಎಲಿಜಬಲ್ ಇರೋ ಎಲ್ಲರಿಗೂ ಆಗಸ್ಟ್ 1ಕ್ಕೆ ಬಿಲ್ ಬರಲಿದ್ದು. ಉಚಿತ ಕರೆಂಟ್ ಸಿಗಲಿದೆ ಎಂದರು.‌ ಅರ್ಜಿ ಹಾಕದವರು ಬೇಗ ಅರ್ಜಿ ಹಾಕಬೇಕು. ಸರ್ವರ್ ಬ್ಯುಸಿ ಇದ್ದರೆ, ಕೆಇಬಿ ಆಫೀಸ್ಸಿಗೂ ಹೋಗಿ ಅರ್ಜಿ ಕೊಡಬಹುದು‌. ಆದರೆ, ಈಗ ಅಷ್ಟು ಸರ್ವರ್ ಸಮಸ್ಯೆ ಇಲ್ಲ. ಪ್ರೆಷರ್ ಕಡಿಮೆ ಆಗಿದೆ.‌ ಅರ್ಜಿ ಹಾಕದವರಿಗೆ ಟೈಂ ಬಾಂಡ್ ಕೊಟ್ಟಿಲ್ಲ.‌ ಆದರೆ, ಅರ್ಜಿ ಹಾಕದಿದ್ದರೆ ಫ್ರೀ ಕರೆಂಟ್ ಇರಲ್ಲ, ಅರ್ಜಿ ಹಾಕಬೇಕಲೇ ಎಂದರು.‌ ಅರ್ಜಿ ಹಾಕೋದು ಲೇಟ್ ಮಾಡಿದರೆ, ಸೌಲಭ್ಯ ಸಿಗೋದು ಲೇಟ್ ಆಗುತ್ತೆ.ಅರ್ಜಿ ಹಾಕದಿದ್ದರೆ ಮುಂದಿನ ತಿಂಗಳ ಬಿಲ್ ನಲ್ಲಿ ಬರಲ್ಲ. ಹಣ ಕಟ್ಟಬೇಕು.‌ ಹಾಗಾಗಿ, ಎಲ್ಲರೂ ಆದಷ್ಟು ಬೇಗ ಅರ್ಜಿ ಹಾಕೋದು ಒಳ್ಳೆಯದು.‌ ಅರ್ಜಿ ಹಾಕದವರಿಗೆ ಫ್ರೀ ಇಲ್ಲ… ಅರ್ಜಿಯನ್ನೇ ಹಾಕಿಲ್ಲ. ಹೇಗೆ ಫ್ರೀ ಕೊಡೋದು ಎಂದರು.ಇನ್ನೂ ಟೈಂ ಇದೆ, ಬೇಗ ಅರ್ಜಿ ಹಾಕಲಿ, ಜುಲೈ 25ರವರಗೂ ಅರ್ಜಿ ಹಾಕಬಹುದು. ಆದರೆ, ಅರ್ಜಿ ಹಾಕಿದ ಎಲ್ಲರಿಗೂ ಇಂದಿನಿಂದ ಫ್ರೀ ಕರೆಂಟ್ ಎಂದಿದ್ದಾರೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!