April 29, 2024

MALNAD TV

HEART OF COFFEE CITY

ಸರ್ವ ಧರ್ಮೀಯರು ಶಾಂತಿ ಸೌಹಾರ್ಧತೆಯಿಂದ ಬದುಕಲಿ : ತಮ್ಮಯ್ಯ

1 min read

ಚಿಕ್ಕಮಗಳೂರು.- ಕ್ಷೇತ್ರದಲ್ಲಿ ಜನತೆ ನೆಮ್ಮದಿ ಶಾಂತಿಯಿಂದ ಬದುಕುವ ವಾತಾವರಣ ನಿರ್ಮಾಣ ಮಾಡುವಂತೆ ಭಗವಂತನಲ್ಲಿ ಪ್ರಾರ್ಥಸುತ್ತೇನೆ ಎಂದು ಶಾಸಕ ಹೆಚ್.ಡಿ ತಮ್ಮಯ್ಯ ಹೇಳಿದರು.
ಅವರು ಇಂದು ಈದ್ಗಾ ಮೈದಾನದಲ್ಲಿ ಬಕ್ರೀದ್ ಹಬ್ಬದ ಅಂಗವಾಗಿ ನಡೆದ ಪ್ರಾರ್ಥನೆಯಲ್ಲಿ ಭಾಗವಹಿಸಿ ಮುಸ್ಲಿಂ ಬಾಂಧವರಿಗೆ ಶುಭಾಷಯ ಕೋರಿ ಮಾತನಾಡಿದರು.ಕೃಷಿ ಅವಲಂಬಿತ ಕುಟುಂಬಗಳಿಗೆ ಮಳೆ-ಬೆಳೆ ಚನ್ನಾಗಿ ಕರುಣಿಸಲಿ ಎಂದು ಆ ದೇವರಲ್ಲಿ ಪ್ರಾರ್ಥಸುವುದರ ಜೊತೆಗೆ ಭಾರತ ಒಂದು ವಿವಿಧ ಸಮುದಾಯದ ಸಾಂಸ್ಕøತಿಕ ರಾಷ್ಟ್ರವಾಗಿದ್ದು, ಸರ್ವ ಧರ್ಮೀಯರು ಶಾಂತಿ-ಸೌಹಾರ್ಧದಿಂದ ಬದುಕಲಿ ಎಂದು ಹಾರೈಸಿದರು.‘ರಘುಪತಿ ರಾಘವ ರಾಜಾರಾಂ ಪತೀತ ಪಾವನ ಸೀತಾ ರಾಂ’ ಎಂಬ ಮಹಾತ್ಮಾ ಗಾಂಧಿಯವರ ಗೀತೆಯನ್ನು ಹಾಡುವ ಮೂಲಕ ಎಲ್ಲರೂ ಒಂದೇ ಎಂಬ ಭಾವನೆ ಬೆಳೆಯಲಿ ಎಂದು ಮುಸ್ಲಿಂ ಸಮುದಾಯದ ಧಾರ್ಮಿಕ ಮುಖಂಡರಲ್ಲಿ ಮನವಿ ಮಾಡಿದರು.ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ಮಾತನಾಡಿ ಅತ್ಯಂತ ಸಂತೋಷದಿಂದ ಪ್ರೀತಿಯಿಂದ ಸಡಗರ ಸಭ್ರಮದೊಂದಿಗೆ ಬಕ್ರೀದ್ ಆಚರಣೆ ಸಂದರ್ಭದಲ್ಲಿ ಮೊದಲು ಶುಭಾಷಯ ಕೋರಿ ಭಗವಂತ ಸರ್ವರಿಗೂ ಒಳ್ಳೆಯದನ್ನು ಮಾಡಲಿ ಎಂದು ಹಾರೈಸಿದರು.ಭಾರತದಲ್ಲಿ ಸ್ನೇಹಜೀವಿಗಳು ವಸುದೈವ ಕುಟುಂಬಕಂ ನನ್ನದು ಸಾಮರಸ್ಯದ ಬದುಕಿನಲ್ಲಿ ನಾವೆಲ್ಲಾ ಇಲ್ಲಿ ಸೇರಿದ್ದೇವೆ ಭಾವೈಕ್ಯತೆಯನ್ನು ಪ್ರಪಂಚಕ್ಕೆ ಸಾರಿದ ರಾಷ್ಟ್ರ ಭಾರತ ಹಿಂದೂ ಕ್ರೈಸ್ತ ಮುಸಲ್ಮಾನ ಪಾರಸಿಕ ಜೈನರುದ್ಯಾನ ಸರ್ವ ಜನಾಂಗದ ಶಾಂತಿಯ ತೋಟ ಎಂಬ ಕುವೆಂಪುರವರ ನಡಿಯಂತೆ ಬದುಕಬೇಕೆಂದು ಕರೆ ಕೊಟ್ಟರು.

 

ಸಾಮರಸ್ಯದ ಬದುಕು ಇಂದು ಪ್ರಪಂಚಕ್ಕೆ ಬೇಕಾಗಿದೆ ಭಾರತ ದೇಶ ಜಾತ್ಯಾತೀತ ಸುಂದರ ನಾಡಾಗಿದೆ ಸಂತ ಶಿಶುನಾಳ ಶರೀಫರು ಇಡೀ ನಾಡಿಗೆ ತತ್ವ ಪದಗಳ ಮೂಲಕ ಹಿಂದೂ-ಮುಸ್ಲಿಂ ಭಾವೈಕ್ಯತೆಯ ಬಗ್ಗೆ ಜನ ಜಾಗೃತಿ ಮೂಡಿಸಿದ ಮಹಾನ್ ವ್ಯಕ್ತಿಯಾಗಿದ್ದಾರೆ ನಮ್ಮ ಧರ್ಮವನ್ನು ಗೌರವಿಸಿದಂತೆ ಇನ್ನೊಂದು ಧರ್ಮದ ಆಚರಣೆಗಳನ್ನು ಗೌರವಿಸಿದಾಗ ಮಾತ್ರ ಸಾಮರಸ್ಯ ಕಾಣಲು ಸಾಧ್ಯ ಎಂದು ವಿಶ್ಲೇಷಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ಮುಸ್ಲಿಂ ಸಮುದಾಯದ ವಿವಿಧ ಮಸೀದಿಗಳ ಧಾರ್ಮಿಕ ಗುರುಗಳು ಭಾಗವಹಿಸಿದ್ದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!