ಕಾಫಿನಾಡ ನೂತನ ಎಸ್ಪಿಯಾಗಿ ವಿಕ್ರಂ ಅಮಟೆ ಅಧಿಕಾರ ಸ್ವೀಕಾರ
1 min readಕಳೆದ ಒಂದು ವರ್ಷದಿಂದ ಚಿಕ್ಕಮಗಳೂರು ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಉಮಾಪ್ರಶಾಂತ್ ದಾವಣಗೆರೆ ಜಿಲ್ಲೆಗೆ ವರ್ಗಾವಣೆಯಾಗಿದ್ದು, ಚಿಕ್ಕಮಗಳೂರು ನೂತನ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಂ ಅಮಟೆ ಅಧಿಕಾರ ಸ್ವೀಕರಿಸಿದ್ದಾರೆ. ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಎಸ್ಪಿ ಉಮಾಪ್ರಶಾಂತ್ ಅವರಿಂದ ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು, ನಾನು ಈ ಹಿಂದೆ ಚಾಮರಾಜನಗರ, ಮೈಸೂರು, ದಕ್ಷಿಣ ಕನ್ನಡ, ಬೆಳಗಾವಿ, ಶಿವಮೊಗ್ಗದಲ್ಲಿ ಕೆಲಸ ಮಾಡಿದ್ದೇನೆ. ಚಿಕ್ಕಮಗಳೂರಿನಲ್ಲಿ ಒಳ್ಳೆಯ ಟೀಂ ಇದೆ. ಪೊಲೀಸ್ ಕೆಲಸ ಕೂಡ ಒಂದು ರೀತಿ ಟೀಂ ವರ್ಕ್. ನಾನು ಜನಸ್ನೇಹಿ ಪೊಲೀಸ್ಗೆ ಹೆಚ್ಚು ಆಧ್ಯತೆ ನೀಡುತ್ತೇನೆ. ಕಾನೂನು ಸುವ್ಯವಸ್ಥೆ ಬಗ್ಗೆ ಹೆಚ್ಚು ಗಮನ ನೀಡುತ್ತೇನೆ. ಸಮಾಜದಲ್ಲಿ ಶಾಂತಿ ನೆಲೆಸಲು ಜನರ ಸಹಕಾರ ಕೂಡ ಮುಖ್ಯ. ಕಾನೂನು ಸುವ್ಯವಸ್ಥೆ ಜೊತೆ ಅನೈತಿಕ ಚಟುವಟಿಕೆಗೆ ಬ್ರೇಕ್ ಹಾಕೋದು ನನ್ನ ಉದ್ದೇಶ. ದತ್ತಜಯಂತಿ ಬಂದೋಬಸ್ತ್ಗೆ ನಾನು ನಾಲ್ಕೈದು ವರ್ಷ ಚಿಕ್ಕಮಗಳೂರಿಗೆ ಬಂದಿದ್ದೇನೆ ಎಂದರು. ಇದೇ ವೇಳೆ ಅಧಿಕಾರ ಹಸ್ತಾಂತರಿಸಿ ಮಾತನಾಡಿದ ಉಮಾಪ್ರಶಾಂತ್, ಈ ಜಿಲ್ಲೆ ನನಗೊಂದು ವಿಶೇಷ ಜಿಲ್ಲೆ ಅನ್ನಿಸಿದೆ. ಇದು ಮಲೆನಾಡು, ಬಯಲುಸೀಮೆ ಎಲ್ಲಾ ಹೊಂದಿರುವ ಜಿಲ್ಲೆ. ಕ್ರೈಂ ಕೂಡ ಡಿಫರೆಂಟ್ ರೀತಿ ಇದೆ. ದತ್ತಪೀಠ, ಎಲೆಕ್ಷನ್ ಎಲ್ಲಾ ಬಂದೋಬಸ್ತ್ ಕೂಡ ಚೆನ್ನಾಗಿ ಆಗಿದೆ. ಚಿಕ್ಕಮಗಳೂರು ಜನರು ಹಾಗೂ ಸಿಬ್ಬಂದಿಗಳಿಂದ ಎಲ್ಲಾ ಕೆಲಸ ಸುಗಮವಾಗಿ ಆಗಿದೆ. ಅಧಿಕಾರಿಗಳು ಸಾಮಥ್ರ್ಯ ಹಾಗೂ ಆತ್ಮವಿಶ್ವಾಸದಿಂದ ಎಲ್ಲಾ ಸನ್ನಿವೇಶವನ್ನು ಧೈರ್ಯದಿಂದ ಎದುರಿಸಿ ಕೆಲಸ ಮಾಡಿದ್ದಾರೆ. ಎಲ್ಲರ ಸಹಕಾರದಿಂದ ನಮಗೆ ಒಳ್ಳೆ ಕೆಲಸ ಮಾಡಲು ಸಾಧ್ಯವಾಗಿದೆ ಎಂದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g