ಜಿಲ್ಲಾಡಳಿತ ಸರ್ಕಾರಕ್ಕೆ ಸಲ್ಲಿಸಿರುವ ಪ್ರಸ್ತಾವನೆ ಜನ ವಿರೋಧಿ ಹಾಗೂ ಕಾನೂನು ಬಾಹಿರ ವಿಜಯ್ ಕುಮಾರ್ ಆರೋಪ
1 min readಚಿಕ್ಕಮಗಳೂರು : 15 ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಯಲ್ಲಿ ಗ್ರಾಮದ ಜನರು ಗ್ರಾಮ ಪಂಚಾಯಿತಿ ಚುನಾವಣೆ ಬಹಿಷ್ಕಾರಿಸಿದ್ದರು. ಇದರಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಗಮನ ಹರಿಸಿ ಸಮಸ್ಯೆ ಬಗೆ ಹರಿಸುವ ಭರವಸೆ ನೀಡಿವೆ. ಭರವಸೆಯೆ ಅಂತಿಮ ಎಂದು ಚುನಾವಣೆ ಪ್ರೇರಿತ ರಾಜಕಾರಣಿಗಳು ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುವ ಮೂಲಕ ಚುನಾವಣೆ ನಡೆಯುವಂತೆ ಮಾಡಿದ್ದಾರೆ. ಇದರಿಂದ ಹೋರಾಟದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ ಎಂದು ಮುಳ್ಳಯ್ಯನಗಿರಿ ಸಂರಕ್ಷಿತ ಮೀಸಲು ಪ್ರದೇಶ ವಿರೋಧಿ ಹೋರಾಟ ವೇದಿಕೆಯ ಸಂಚಾಲಕರಾದ ವಿಜಯ್ ಕುಮಾರ್ ಹೇಳಿದ್ರು.
ಸುದ್ದಿಗೋಷ್ಟಿಯ ನಂತರ ಮಾತನಾಡಿದ ಅವರು ಮುಳ್ಳಯ್ಯನ ಗಿರಿ ತಪ್ಪಲಿನ ಜನ ವಸತಿ ಪ್ರದೇಶಗಳನ್ನು ಜಿಲ್ಲಾಡಳಿತ ಅರಣ್ಯಿಕರಣ ಮಾಡಲು ಹೊರಟಿರುವುದನ್ನು ವಿರೋಧಿಸಿ ಹಾಗೂ ಕಸ್ತೂರಿ ರಂಗನ್ ವರಿದಿ ಅನುಷ್ಠಾನವನ್ನು ವಿರೋಧಿಸಿ ಹೋರಾಟ ನಡೆಸುತ್ತಿರುವ ಮುಂದುವರಿದ ಭಾಗವಾಗಿ 15 ಹೆಚ್ಚು ಗ್ರಾಮ ಪಂಚಾಯಿತಿಗಳಲ್ಲಿ ಚುನಾವಣೆ ಬಹಿಷ್ಕರಿಸುವ ಮೂಲಕ ಹೋರಾಟ ನಡೆಸಿದ್ದೇವು. ಇದರಿಂದ ಎಚ್ಚೆತ್ತ ಕೇಂದ್ರ ಹಾಗೂ ರಾಜ್ಯ ಸರ್ಕಾರ ನಮ್ಮ ಸಮಸ್ಯೆ ಬಗೆ ಹರಿಸುವ ಭರವಸೆ ನೀಡಿವೆ. ಭರವಸೆಯೆ ಅಂತಿಮ ಎಂದು ಚುನಾವಣೆ ಪ್ರೇರಿತ ರಾಜಕಾರಣಿಗಳು ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುವ ಮೂಲಕ ಚುನಾವಣೆ ನಡೆಯುವಂತೆ ಮಾಡಿದ್ದಾರೆ. ಚುನಾವಣೆ ಪರವಾಗಿರುವ ಕೆಲವು ವ್ಯಕ್ತಿಗಳು ಹಾಗೂ ಗ್ರಾಮದ ಜನರು ಹೋರಾಟವನ್ನು ಕೈಬಿಟ್ಟಿಲ್ಲ. ಮುಳ್ಳಯ್ಯನಗಿರಿ ಸಂರಕ್ಷಿತ ಮೀಸಲು ಪ್ರದೇಶ ಅರಣ್ಯ ಪ್ರಸ್ತಾವನೆಯಲ್ಲಿ ಬಹಳಷ್ಟು ಕಾನೂನು ಉಲ್ಲಂಘನೆಯಾಗಿದೆ. ಡೀಮ್ಡ್ ಫಾರೆಸ್ಟ್ ಜನರ ವಾಸ್ತವಿಕ ಸ್ಥಿತಿಗತಿಗಳನ್ನು ಮುಚ್ಚಿಡಲಾಗಿದೆ. ಗ್ರಾಮದ ಜನರ ಮೂಲಭೂತ ಸೌಲಭ್ಯಗಳಾದ ವಸತಿ, ಗೋಮಾಳ, ಊರಿನ ಅಭಿವೃದ್ದಿಗೆ ನೀಡಿ ಉಳಿದಿರುವ ಪ್ರದೇಶವನ್ನು ಸೇರಿಸಿಕೊಳ್ಳಲಿ. ಹಾಗೂ ಎಫ್.ಎಸ್.ಒ ಗಳಿಗೆ ಸರ್ಕಾರ ಸರಿಯಾದ ರ್ಮಾದರ್ಶನ ನೀಡಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಚಾಲಕ ರಘು, ಜಾಗರ ಬೆಳೆಗಾರರ ಸಂಘದ ಅಧ್ಯಕ್ಷ ರವಿ, ಕೊಳಗಾಮೆಯ ಸುನಿಲ್, ಹರೀಶ್, ಬಗರ್ ಹುಕ್ಕುಂ ಸಮಿತಿಯ ಕುಮಾರ್, ವೀರಭದ್ರಪ್ಪ, ಹುಕ್ಕಡದ ಬಸವರಾಜ್ ಇದ್ದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g