ನಕಲಿ ಬಿಲ್ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ನಗರಸಭೆಗೆ ಧಿಡೀರ್ ಭೇಟಿ
1 min readಚಿಕ್ಕಮಗಳೂರು : ಮನೆ ಕಂದಾಯ ಕಟ್ಟಿಸಿಕೊಳ್ಳುವ ನೆಪದಲ್ಲಿ ನಕಲಿ ಬಿಲ್ ಸೃಷ್ಟಿಸಿ ಲಕ್ಷಾಂತರ ರೂಪಾಯಿ ನಷ್ಟ ಉಂಟು ಮಾಡಿರುವ ಅನುಮಾನದ ಹಿನ್ನೆಲೆಯಲ್ಲಿ ನಗರ ಸಭೆ ಅಯುಕ್ತರಾದ ಬಸವರಾಜ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ದೂರನ್ನು ಆದರಿಸಿ ನಿನ್ನೆ ದಿನ ಒಬ್ಬ ನಗರಸಭೆಯ ಸಿಬ್ಬಂದಿ ಹಾಗೂ ದಲ್ಲಾಳಿ ಪೊಲೀಸರು ವಶಕ್ಕೆ ಪಡೆದಿದ್ದರು.
ಚಿಕ್ಕಮಗಳೂರು ನಗರ ಸಭೆಯಲ್ಲಿ ಇತ್ತಿಚೆಗೆ ಬೆಳಕಿಗೆ ಬಂದ ನಕಲಿ ಕಂದಾಯ ಬಿಲ್ ಅಕ್ರಮ ಮಲ್ನಾಡ್ ಟಿವಿಯಲ್ಲಿ ವರದಿ ಭಿತ್ತರವಾಗುತ್ತಿದಂತೆ ಜಿಲ್ಲಾಧಿಕಾರಿ ಕೆ.ಎನ್ ರಮೇಶ್ ನಗರ ಸಭೆಗೆ ಧಿಡೀರ್ ಭೇಟಿ ನೀಡಿ ಕಡತಗಳ ಪರಿಶೀಲನೆ ನಡೆಸಿದರು.
ಪ್ರಕರಣದಲ್ಲಿ ಭಾಗಿಯಾಗಿದ್ದ ನಗರಸಭೆ ಸಿಬ್ಬಂದಿಯನ್ನು ತಕ್ಷಣದಿಂದಲ್ಲೇ ಅಮಾನತ್ತುಗೊಳಿಸುವಂತೆ ಆದೇಶ ನೀಡಿದ ಜಿಲ್ಲಾಧಿಕಾರಿಗಳು ಇಂತಹ ಅಕ್ರಮಗಳನ್ನು ಸಹಿಸುವುದಿಲ್ಲ, ಯಾರೇ ತಪ್ಪು ಮಾಡಿದರು ಶಿಕ್ಷೇ ಖಂಡಿತ. ಇದರಿಂದ ಬೇರೆಯವರು ಪಾಠ ಕಲಿಯಬೇಕೆಂದು ಪಾಠ ಹೇಳಿದರು. ಜಿಲ್ಲಾಧಿಕಾರಿಗಳ ಧಿಡೀರ್ ಭೇಟಿ ಹಿನ್ನೆಲೆಯಲ್ಲಿ ಇಡಿ ನಗರ ಸಭೆ ಸಿಬ್ಬಂದಿ ಕಕ್ಕಾಬಿಕ್ಕಿಯಾದರೂ, ಅಲ್ಲದೆ ಕೆಲ ಸಿಬ್ಬಂದಿ ಜಿಲ್ಲಾಧಿಕಾರಿ ಆಗಮಿಸುತ್ತಿದ್ದಂತೆ ಸ್ವಚ್ಚತ ಕಾರ್ಯದಲ್ಲಿ ಮುಂದಾದ್ದದೂ ಕಂಡು ಬಂತು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g