ವಿಶ್ವಶಾಂತಿಗೆ ಆಗ್ರಹಿಸಿ ಮೂರು ದಿನ ಮೌನ ವೃತ
1 min readಚಿಕ್ಕಮಗಳೂರು: ಭಾರತ ದೇಶ ಸ್ವಾತಂತ್ರ್ಯ ಪಡೆದು ಅಮೃತ ಮಹೋತ್ಸವ ಆಚರಿಸುತ್ತಿದ್ದು, ದೇಶದ ಪ್ರಗತಿ ಮತ್ತು ವಿಶ್ವಶಾಂತಿಗಾಗಿ ಮೂರು ದಿವಸ ಮೌನವ್ರತ ಆಚರಿಸುವುದಾಗಿ ಪ್ರಜಾಪಿತ ಬ್ರಹ್ಮಾಕುಮಾರೀಸ್ ಈಶ್ವರಿ ಮಹಾವಿದ್ಯಾಲಯದ ಸಂಚಾಲಕಿ ಕೆ.ಬಿ.ಭಾಗ್ಯ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜ.16, 17, 18 ರಂದು ವಿಶ್ವದಾದ್ಯಂತ 10 ಲಕ್ಷಕ್ಕೂ ಹೆಚ್ಚು ಬ್ರಹ್ಮಾಕುಮಾರೀಸ್ ಮಹಾವಿಶ್ವವಿದ್ಯಾಲಯದ ಸಂಚಾಲಕರು ಮೌನವ್ರತ ಆಚರಿಸುತ್ತಿದ್ದು, ಅದರಂತೆ ಜಿಲ್ಲಾ ಪ್ರಜಾಪಿತ ಬ್ರಹ್ಮಾಕುಮಾರೀಸ್ ವಿಶ್ವವಿದ್ಯಾಲಯದಲ್ಲೂ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ರಾಜಸ್ಥಾನದಲ್ಲಿರುವ ಬ್ರಹ್ಮಾಕುಮಾರೀಸ್ ಅಂತರಾಷ್ಟ್ರೀಯ ಪ್ರಧಾನ ಕೇಂದ್ರ ಕಚೇರಿ ಮೌಂಟ್ಅಬುದಲ್ಲಿ ಜ.20ರಿಂದ ಮೂರು ದಿನಗಳ ಮೌನವ್ರತ ತಪಸ್ಸು ಕಾರ್ಯಕ್ರಮ ನಡೆಯಲಿದ್ದು, ಅಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ. ಸಚಿವ ಜಿ.ಕಿಶನ್ ರೆಡ್ಡಿ ಪಾಲ್ಗೊಳ್ಳಲಿದ್ದಾರೆಂದರು.
ಮೂರುದಿನದ ಮೌನವ್ರತದಲ್ಲಿ 300ಕ್ಕೂ ಹೆಚ್ಚಿನ ಜನರು ಭಾಗವಹಿಸಲಿದ್ದು, ಕೋವಿಡ್ ಹಿನ್ನೆಲೆಯಲ್ಲಿ ನಗರದ ಬ್ರಹ್ಮಕುಮಾರೀಸ್ ಈಶ್ವರಿ ವಿದ್ಯಾಲಯದಲ್ಲಿ 50ಕ್ಕೂ ಹೆಚ್ಚು ಜನರು ಪಾಲ್ಗೊಳ್ಳಲಿದ್ದಾರೆ. ವಿಶ್ವದಾದ್ಯಂತ ಕೋವಿಡ್ ಸೋಂಕು ವ್ಯಾಪಿಸುತ್ತಿದ್ದು, ಕೋವಿಡ್ ಸೋಂಕು ನಮ್ಮಿಂದ ದೂರವಾಗಿ ವಿಶ್ವಶಾಂತಿ ನೆಮ್ಮದಿ ನೆಲಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವುದಾಗಿ ತಿಳಿಸಿದರು. ಸಂಚಾಲಕರಾದ ಗಂಗಾಧರ್, ನಂದಕುಮಾರ್, ಆತ್ಮೀಕ, ದೇವಿಕ ಇದ್ದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g