April 28, 2024

MALNAD TV

HEART OF COFFEE CITY

ಶೃಂಗೇರಿ ಸಬ್ ರಿಜಿಸ್ಟ್ರಾರ್ ಬಹಳ ಪ್ರಾಮಾಣಿಕ, ನಿಷ್ಠೆ ಯಿಂದ ಕೆಲಸ ಮಾಡ್ತಾ ಇದ್ದಾರೆ ಅವರ ಬಳಿ ಹಣ ಕೇಳಿದ್ದು ತಪ್ಪು-ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ

1 min read

ಶೃಂಗೇರಿ ಸಬ್ ರಿಜಿಸ್ಟ್ರಾರ್ ಚೆಲುವರಾಜ್ ಬಹಳ ಪ್ರಾಮಾಣಿಕ ವ್ಯಕ್ತಿ, ನಿಷ್ಠೆ ಯಿಂದ ಕೆಲಸ ಮಾಡ್ತಾ ಇದ್ದಾರೆ, ಅವರ ಬಳಿ ಕಂದಾಯ ಸಚಿವ ಆರ್.ಅಶೋಕ್ ಪಿಎ ಗಂಗಾಧರ್ ಹಣ ಕೇಳಿದ್ದು ತಪ್ಪು, ಅವರು ವಿರುದ್ಧ ನಿರ್ದಾಕ್ಷಿಣ್ಯ ಕ್ರಮವಾಗಬೇಕೆಂದು ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಆಗ್ರಹ ಮಾಡಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಾತಾನಾಡಿದ ಅವರು ಶೃಂಗೇರಿ ಸಬ್ ರಿಜಿಸ್ಟ್ರಾರ್ ಚೆಲುವರಾಜ್ ರಿಜಿಸ್ಟ್ರಾರ್ ವೇಳೆ ಒಂದು ರೂಪಾಯಿ ಉಳಿದ್ರು ಅದನ್ನ ವಾಪಸ್ಸು ಕೊಡದೇ ಯಾರನ್ನು ಕಳುಹಿಸುವುದಿಲ್ಲ, ಅವರಿಗೆ ಶ್ರೀಮಂತರು, ಬಡವರು ಎಲ್ಲಾರು ಒಂದೇ, ಶೃಂಗೇರಿ ಚೆಲುವರಾಜ್ ಬಂದಮೇಲೆ ಅವರ ವಿರುದ್ಧ ಯಾವುದೇ ದೂರುಗಳು ಬಂದಿಲ್ಲ, ಅವರು ಪ್ರಾಮಾಣಿಕ ಅಂತ ಗೊತ್ತಿದ್ರು ದುಡ್ಡು ಕೇಳಿದ್ರೆ ಎಲ್ಲಿ ಕೊಡ್ತಾರೆ ಹೇಳಿ, ಹಣ ಕೊಡಲು ಸಾಧ್ಯವಾಗೋದಾದ್ರು ಹೇಗೆ, ಸಂಬಳದ ಹಣದಲ್ಲಿ ಕೊಡಬೇಕು ಅಷ್ಟೇ ಎಂದು ಗಂಗಾಧರ್ ವಿರುದ್ಧ ಶಾಸಕರು ಕಿಡಿಕಾರಿದ್ರು. ಇನ್ನು ಅಧಿಕಾರಿಗಳ ಸಂಬಳದಿಂದ ಪಿಎ ಗಳನ್ನ ಸಾಕುವುದಕ್ಕೆ ಆಗುವುದಿಲ್ಲ, ಬಿಜೆಪಿ ಸರ್ಕಾರದಲ್ಲಿ ಪಿಎ ಗಳದ್ದೆ ಕಾರುಬಾರು ಜೋರಾಗಿದೆ, ಈ ಫೈಲ್ ಮೇಲೆ, ಕೆಳಗೆ ಮಾಡೋದು ಈ ಪಿಎ ಗಳೇ, ಇದು ಮಂತ್ರಿಗಳಿಗೆ ಗೊತ್ತಿದ್ಯೋ ಇಲ್ವೋ ಗೊತ್ತಿಲ್ಲ, ಮಂತ್ರಿಗಳು ಬಹಳ ಸೂಕ್ಷ್ಮ ವಾಗಿ ಪಿಎ ಗಳನ್ನ ಗಮನಿಸಬೇಕು, ಭ್ರಷ್ಟಾ ಅಧಿಕಾರಗಳ ವಿರುದ್ಧ ಸಚಿವರು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹ ಮಾಡಿದ್ರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!