ಜೆಡಿಎಸ್ ಭದ್ರಕೋಟೆ ಮಂಡ್ಯದಲ್ಲಿ ಪರಿಸ್ಥಿತಿ ಬದಲಾಗಿದೆ, ಅದಕ್ಕೆ ಜೆಡಿಎಸ್ನವರಿಗೆ ಟೆನ್ಷನ್ : ಸಚಿವ ನಾರಾಯಣ ಗೌಡ
1 min read
ಚಿಕ್ಕಮಗಳೂರು. ಜೆಡಿಎಸ್ನವರು ಮಂಡ್ಯ ಜಿಲ್ಲೆ ಜೆಡಿಎಸ್ ಭದ್ರಕೋಟೆ ಎಂದು ಹೇಳುತ್ತಿದ್ದರು, ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಅದಕ್ಕೆ ಅವರಿಗೆ ಈಗ ಟೆನ್ಷನ್ ಶುರುವಾಗಿದೆ ಎಂದು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ನಾರಾಯಣ ಗೌಡ ಜೆಡಿಎಸ್ ವಿರುದ್ಧ ವ್ಯಂಗ್ಯವಾಡಿದ್ದಾರೆ. ನಗರದ ಕುವೆಂಪು ಕಲಾಮಂದಿರದಲ್ಲಿ ರಾಜ್ಯ ಯುವಜನೋತ್ಸವ ಕಾರ್ಯಕ್ರಮವನ್ನ ಉದ್ಘಾಟಿಸಿ ಮಾತನಾಡಿದ ಅವರು, ಜೆಡಿಎಸ್ ಭದ್ರಕೋಟೆ ಮಂಡ್ಯದಲ್ಲಿ ಈ ಬಾರಿ ಬಿಜೆಪಿ 4-5 ಸ್ಥಾನ ಗೆಲ್ಲುತ್ತೇವೆ. ಗೆದ್ದು ತೋರಿಸುತ್ತೇವೆ ಎಂದರು. ಇತ್ತೀಚೆಗೆ ಮಂಡ್ಯದಲ್ಲಿ ನಡೆದ ಜನ ಸಂಕಲ್ಪ ಯಾತ್ರೆಯು ಅತ್ಯಂತ ಯಶಸ್ವಿಯಾಗಿ ನಡೆದಿದೆ. ಕಾರ್ಯಕ್ರಮಕ್ಕೆ ಬಂದಿದ್ದ ನಮ್ಮ ಮುಖ್ಯ ಮಂತ್ರಿಗಳು, ಯಡಿಯೂರಪ್ಪನವರು, ಕಂದಾಯ ಸಚಿವರು ಎಲ್ಲರೂ ಕೂಡಾ ಖುಷಿಪಟ್ಟು ಹೋಗಿದ್ದಾರೆ. ಮಂಡ್ಯದಲ್ಲಿ ಖಂಡಿತವಾಗಿಯೂ ಮುಂಬರೋ ವಿಧಾನಸಭಾ ಚುನಾವಣೆಯಲ್ಲಿ 4-5 ಸ್ಥಾನ ಗೆದ್ದೇ ಗೆಲ್ಲುತ್ತೇವೆ ಎನ್ನುವ ವಿಶ್ವಾಸ ನಮಗಿದೆ ಎಂದರು. ಜೆಡಿಎಸ್ ಮುಖಂಡರ ಆಲಿ ಬಾಬಾ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಕೆ.ಆರ್ ಪೇಟೆ ಕ್ಷೇತ್ರದಲ್ಲಿ ನಾವು ಗೆಲ್ಲುತ್ತಿದ್ದಂತೆ ನಮ್ಮನ್ನ ಟೀಕೆ ಟಿಪ್ಪಣಿ ಮಾಡಲು ಶುರು ಮಾಡಿ, ನಮ್ಮನ್ನೆಲ್ಲ ಡಿ ಗ್ರೇಡ್ ಮಾಡಲು ಪ್ರಯತ್ನಿಸಿದ್ದರು. ಆದರೂ ಕೂಡ ನಮ್ಮನ್ನ ಏನೂ ಮಾಡಲು ಸಾಧ್ಯವಾಗಲಿಲ್ಲ. ಇಡೀ ರಾಷ್ಟ್ರದಲ್ಲಿಯೇ ದೊಡ್ಡ ಪಕ್ಷಕ್ಕೆ ಬಂದಿದ್ದೇವೆ. ಡಬ್ಬಲ್ ಇಂಜಿನ್ ಸರ್ಕಾರ ಇರುವುದರಿಂದ ನಮ್ಮನ್ನ ಏನೂ ಮಾಡೋಕೆ ಆಗಲಿಲ್ಲ. ನಾನು ಚುನಾವಣೆಗೆ ನಿಂತಾಗ ಕಲ್ಲಿನಿಂದ ಹೊಡೆದರು, ಬೆಂಕಿ ಹಾಕಿದರು. ಆದರೂ ಕೂಡ ನಮ್ಮನ್ನ ಸೋಲಿಸಲು ಸಾಧ್ಯವಾಗಲಿಲ್ಲ ರಾಜ್ಯದ ಮೂಲೆ ಮೂಲೆಯಿಂದ ಬಿಜೆಪಿ ನಾಯಕರುಬಂದು ಚುನಾವಣೆ ಮಾಡಿ ನಮ್ಮನ್ನ ಗೆಲ್ಲಿಸಿದ್ದಾರೆ. ದಿನದಿಂದ ದಿನಕ್ಕೆ ಮಂಡ್ಯದಲ್ಲಿ ಬಿಜೆಪಿ ಬಲಿಷ್ಠವಾಗುತ್ತಿದೆ. ಅದಕ್ಕೆ ಸಹಿಸಿಕೊಳ್ಳದ ಜೆಡಿಎಸ್ ಹೇಗೆ ಬೇಕೋ ಹಾಗೇ ಮಾತನಾಡುತ್ತಿದ್ದಾರೆ ಎಂದು ಜೆಡಿಎಸ್ ವಿರುದ್ಧ ಲೇವಡಿ ಮಾಡಿದ್ದಾರೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g