ದುಸ್ಥಿತಿಯಲ್ಲಿದ್ದ ಒವರ್ ಹೆಡ್ ಟ್ಯಾಂಕ್ ಕೆಡವಿದ ಅಧಿಕಾರಿಗಳು
1 min readಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಬೀರೂರು ಪಟ್ಟಣದ ಪ್ರೌಢಶಾಲೆಯ ಪಕ್ಕದಲ್ಲಿ ಅನೇಕ ವರ್ಷಗಳಿಂದ ಶಿಥಿಲವಾಗಿದ್ದ ಒವರ್ ಹೆಡ್ ಟ್ಯಾಂಕ್ ನ್ನು ಯಾವುದೇ ಅನಾವುತಗಳು ಸಂಭವಿಸದಂತೆ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಬೀರೂರು ಪುರಸಭೆ ಅಧಿಕಾರಿಗಳು ಇಂದು ಕೆಡವಿದ್ದಾರೆ. ಇನ್ನು ಈ ಬಗ್ಗೆ ಮಾತನಾಡಿದ ಪುರಸಭೆ ಮುಖ್ಯಾಧಿಕಾರಿ ವಿ.ಡಿ.ಶಾಂತಲ, ಈ ಓವರ್ ಹೆಡ್ ಟ್ಯಾಂಕ್ ಕಟ್ಟಿ ಬಹಳ ವರ್ಷವಾಗಿತ್ತು ಜೊತೆಗೆ ಶಿಥಿಲವಾಗಿರುವ ಬಗ್ಗೆ ವಾರ್ಡ ಸದಸ್ಯರು ಅನೇಕ ಸಭೆಗಳಲ್ಲಿ ದೂರು ನೀಡಿದ್ದರು. ಆದ್ದರಿಂದ ಚಿಕ್ಕಮಗಳೂರು ನಗರ ನೀರು ಸರಬರಾಜು ಮಂಡಳಿ ಇಂಜಿನಿಯರ್ ಗಳಿಂದ ಟ್ಯಾಂಕ್ ಪರಿಶೀಲನೆ ನಡೆಸಿದಾಗ ಟ್ಯಾಂಕ್ ಶಿಥಿಲವಾಗಿರುವುದನ್ನು ಪರಿಗಣಿಸಿ, ಇಂದು ನೆಲಸಮ ಮಾಡಿದ್ದೇವೆ ಎಂದರು. ಇನ್ನು 10 ಲಕ್ಷ ಗ್ಯಾಲನ್ ಸಾಮರ್ಥ್ಯ ದ ಹೊಸ ಓವರ್ ಹೆಡ್ ಟ್ಯಾಂಕ್ ನಿರ್ಮಾಣ ಮಾಡಲು ಕಳೆದ ಬಾರಿಯ ಆ್ಯಕ್ಷನ್ ಪ್ಲಾನ್ ನಲ್ಲಿ 2 ಕೋಟಿ ರೂಗಳನ್ನು ಖಾಯ್ದಿಸಲಾಗಿದ್ದು, ಸದ್ಯದಲ್ಲಿಯೇ ಈ ಕಾಮಗಾರಿಗೆ ಚಾಲನೆ ನೀಡಲಾಗುವುದು .ಈ ಭಾಗದ ಜನರಿಗೆ ಕುಡಿಯುವ ನೀರಿಗೆ ಯಾವುದೇ ತೊಂದರೆವಾಗದಂತೆ ಕ್ರಮಕೈಗೊಳ್ಳಲಾಗಿದೆ ಎಂದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g