ಜಾತ್ರೆಗೆ ಹೋದಾಗ ಎರಡೂವರೆ ವರ್ಷದ 600 ಅಡಿಕೆ ಗಿಡ ಕಡಿದ ಕಿಡಿಗೇಡಿಗಳು
1 min read
ಚಿಕ್ಕಮಗಳೂರು.: ಮನೆಯವರು ಜಾತ್ರೆಗೆ ಹೋದಾಗ ಕಿಡಿಗೇಡಿಗಳು ಎರಡೂವರೆ ವರ್ಷದ ಸುಮಾರು 600 ಅಡಿಕೆ ಸಸಿಗಳನ್ನ ಕಡಿದು ಹಾಕಿರುವ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಕಲ್ಲಾಪುರ ಗ್ರಾಮದಲ್ಲಿ ನಡೆದಿದೆ. ಕಲ್ಲಾಪುರ ಗ್ರಾಮದ ರೇವಣ್ಣ ಎಂಬುವರಿಗೆ ಸೇರಿದ ಅಡಿಕೆ ಸಸಿಗಳು. ಎರಡೂವರೆ ವರ್ಷ ಮಕ್ಕಳಂತೆ ಸಾಕಿದ್ದ ಗಿಡಗಳನ್ನ ಕಡಿದು ಹಾಕಿರುವುದರಿಂದ ಗಿಡಗಳ ಸ್ಥಿತಿ ಕಂಡು ರೇವಣ್ಣ ಕಣ್ಣೀರಿಟ್ಟಿದ್ದಾರೆ. ರೇವಣ್ಣ ಕುಟುಂಬ ನಿನ್ನೆ ಅಂತರಗಟ್ಟೆ ಜಾತ್ರೆ ನಿಮಿತ್ತ ಕುಟುಂಬದವರೆಲ್ಲಾ ಜಾತ್ರೆಗೆ ಹೋಗಿದ್ದರು. ಮನೆ ತೋಟದಲ್ಲಿ ಯಾರೂ ಇರಲಿಲ್ಲ. ಮನೆಯಲ್ಲಿ ಯಾರೂ ಇಲ್ಲದ್ದನ್ನ ಗಮನಿಸಿದ ಕಿಡಿಗೇಡಿಗಳು 600 ಸಸಿಗಳನ್ನ ಅರ್ಧಕರ್ಧ ಕಡಿದು ಹಾಕಿದ್ದಾರೆ. ಜಾತ್ರೆಯಿಂದ ಬಂದು ತೋಟದ ಸ್ಥಿತಿ ನೋಡಿದ ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ. ಎರಡೂವರೆ ವರ್ಷದಿಂದ ಸಾಲ-ಸೋಲ ಮಾಡಿ ಬೆಳೆಸಿದ್ದ ಗಿಡಗಳನ್ನ ಕ್ಷಣಾರ್ಧದಲ್ಲಿ ಕಡಿದು ಹಾಕಿದ್ದಾರೆ. ಆದರೆ, ಹೀಗೆ ಗಿಡಗಳನ್ನ ಯಾರು ಕಡಿದು ಹಾಕಿರೋದು ಎಂದು ಸ್ಪಷ್ಟವಾದ ಮಾಹಿತಿ ಸಿಕ್ಕಿಲ್ಲ. ಆದರೆ, ಊರಿನವರೇ ಆಗದವರು ಹೀಗೆ ಮಾಡಿದ್ದಾರೆ ಎಂದು ತೋಟದ ಮಾಲೀಕ ರೇವಣ್ಣ ಆರೋಪಿಸಿದ್ದಾರೆ.
ಎರಡೂವರೆ ವರ್ಷಕ್ಕೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಗಿಡಗಳನ್ನ ಬೆಳೆಸಿದ್ದರು. ಈಗ ಮತ್ತೆ ಎಲ್ಲಾ ಗಿಡಗಳನ್ನ ಬುಡಸಮೇತ ತೆಗೆದು ಮತ್ತೆ ಗಿಡಗಳನ್ನ ಹಾಕಿ ಬೆಳೆಸಬೇಕು. ಮತ್ತೆ ಡಬಲ್ ಖರ್ಚು ಉಂಟಾಗಲಿದೆ. ಗಿಡಗಳನ್ನ ಕಡಿದು ಹಾಕಿರೋದನ್ನ ಕಂಡ ಊರಿನ ಜನ ಕೂಡ ಮರುಗಿದ್ದಾರೆ. ಕಡೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g