ಲೋಕಾಯುಕ್ತ ಬಲೆಗೆ ಬಿದ್ದ ಸೌಂಡ್ ಪಾರ್ಟಿ ಮಂಜುನಾಥ್
1 min readಚಿಕ್ಕಮಗಳೂರು: 15 ಸಾವಿರ ಲಂಚ ಪಡೆಯುವಾಗ ಮೂಡಿಗೆರೆಯ ದಾರದಹಳ್ಳಿ ಮೆಸ್ಕಾಂ ಕಿರಿಯ ಇಂಜಿನಿಯರ್ ಮಂಜುನಾಥ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಮೂಡಿಗೆರೆ ತಾಲೂಕಿನ ದಾರದಹಳ್ಳಿ ಶಾಖೆಯ ಮೆಸ್ಕಾಂನ ಕಿರಿಯ ಅಭಿಯಂತರ ಮಂಜುನಾಥ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಹಂಡುಗುಳಿ ಗ್ರಾಮದ ಮೊಹಮ್ಮದ್ ಆಲಿ ಎಂಬುವವರ ಜಮೀನಿನ ನೀರಾವರಿ ಸ್ಥಾವರಕ್ಕೆ ವಿದ್ಯುತ್ ಸಂಪರ್ಕ ನೀಡಲು 15,000 ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದ ಮಂಜುನಾಥ್ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ. ಲೋಕಾಯುಕ್ತ ಇನ್ಸ್ಪೆಕ್ಟರ್ ಅನಿಲ್ ರಾಥೋಡ್, ಅನಿಲ್ ನಾಯಕ್ ಸಿಬ್ಬಂದಿಗಳಾದ ಪ್ರಸಾದ್, ಸವಿನಯ್ ವಿಜಯಭಾಸ್ಕರ್ ನೇತೃತ್ವದ ತಂಡ ದಾಳಿ ಕಾರ್ಯಾಚರಣೆ ನಡೆಸಿದ್ದಾರೆ.
ಈ ನಡುವೆ ಸೌಂಡ್ ಪಾರ್ಟಿ ಇಂಜಿನಿಯರ್ ಮಂಜುನಾಥ್ ಟ್ರಾಪ್ ಕಹಾನಿ ರೋಚಕವಾಗಿದೆ. ಮೊಬೈಲ್ ನಲ್ಲಿ ಸಂಭಾಷಣೆ ವೇಳೆ ಮೊಹಮ್ಮದ್ ಜೊತೆ ಮಾತನಾಡುತ್ತಾ ಕಿರಿಯ ಅಭಿಯಂತರ ಮಂಜುನಾಥ್ ನನಗೆ 25 ಕೊಡ್ಲಿ ಎಂದು ಕೇಳಿದ್ದಾರೆ ಎಂದಾಗ 25 ಅಂದರೆ ಏನ್ 25 ಸಾವಿರನಾ ಅಥವಾ 25 ರೂಪಾಯಿನ ಎಂದು ಕೇಳಿದಾಗ ಕಿರಿಯ ಅಭಿಯಂತರರಾದ ಮಂಜುನಾಥ್ ರವರು 25 ಸಾವಿರ ರೂಪಾಯಿ ಎಂದು ಹೇಳಿದ್ದಾರೆ. ಸರ್ ಕಷ್ಟ ಆಗುತ್ತೆ ಸ್ವಲ್ಪ ಕಮ್ಮಿ ಮಾಡಿಕೊಳ್ಳಿ ಎಂದು ಹೇಳಿದಾಗ ಮಂಜುನಾಥ್ ‘ಅವರು ಸೌಂಡ್ ಪಾರ್ಟಿ ಅವರಿಗೆ ಅದು 20 ರೂಪಾಯಿ ಇದ್ದಹಾಗೆ’ ಎಂದು ಹೇಳಿದ್ದು, ಆಗ ಸರಿ ಬಿಡಿ ಸರ್ ಸ್ವಲ್ಪ ಕಮ್ಮಿ ಮಾಡಿಕೊಳ್ಳಿ ಎಂದಾಗ ಕೊನೆಯದಾಗಿ 15 ಸಾವಿರ ರೂಪಾಯಿ ನೀಡುವಂತೆ ಹೇಳಿದ್ದಾರೆ ಎಂಬ ಸ್ಟೋರಿ ವಿವರಿಸಿದ್ದಾರೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g