ಮನೆಯೊಳಗೆ ನುಗ್ಗಿದ ಗುಡ್ಡದ ಮಣ್ಣು ಮನೆಯ ದುಸ್ಥಿತಿ ಕಂಡು ಕಣ್ಣಿರಾಕಿದ ಕುಟುಂಬ
1 min readಚಿಕ್ಕಮಗಳೂರು : ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ವರುಣನ ಆರ್ಭಟಕ್ಕೆ ಶೃಂಗೇರಿ ತಾಲೂಕಿನ ಬೆಳ್ಳಂದೂರು ಗ್ರಾಮದಲ್ಲಿ ಮನೆಯ ಹಿಂಬದಿಯ ಗುಡ್ಡ ಕುಸಿದು, ಗುಡ್ಡದ ಮಣ್ಣು ಮನೆಯೊಳಗೆ ನುಗ್ಗಿ ಮನೆಯು ಸಂಪೂರ್ಣ ಹಾನಿಯಾಗಿದೆ.
ಶೃಂಗೇರಿ ತಾಲೂಕಿನ ಬೆಳ್ಳಂದೂರು ಗ್ರಾಮದಲ್ಲಿರುವ ಗಣೇಶ್ ಹೆಗ್ಡೆ ಎಂಬುವವರಿಗೆ ಸೇರಿದ ಮನೆಯ ಹಿಂಬದಿಯ ಗುಡ್ಡವು ಸತತ ಮಳೆಯಿಂದಾಗಿ ಕುಸಿದು ಬಿದ್ದಿದ್ದೆ. ಇದರಿಂದ ಕುಸಿತ ಗೊಂಡ ಮಣ್ಣು ಗಣೇಶ್ ಹೆಗ್ಡೆಯವರ ಮನೆಯೊಳಗೆ ನುಗ್ಗಿದ್ದು ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. ಗುಡ್ಡ ಕುಸಿಯೋ ಭೀತಿ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಮನೆ ಖಾಲಿ ಮಾಡಿದ್ದ ಕುಟುಂಬ ಜೀವ ಹಾನಿಯಿಂದ ಪಾರಾಗಿದೆ. ಗುಡ್ಡ ಕುಸಿಯುವ ಬಗ್ಗೆ ಈ ಹಿಂದೆಯೇ ಅರಣ್ಯ ಇಲಾಖೆಗೆ ದೂರು ನೀಡಿದ್ದರು ಅರಣ್ಯ ಇಲಾಖೆಯ ನಿರ್ಲಕ್ಷದಿಂದ ಗುಡ್ಡ ಕುಸಿದು ಮನೆಯೊಳಗಿದ್ದ ಲಕ್ಷಾಂತರ ಮೌಲ್ಯದ ವಸ್ತುಗಳು ಹಾನಿಯಂಟಾಗಿದೆ. ಭಾರಿ ಪ್ರಮಾಣದಲ್ಲಿ ಮನೆಯೊಳಗೆ ಗುಡ್ಡದ ಮಣ್ಣು ನುಗ್ಗಿ, ಹಳ್ಳದಂತೆ ಮನೆಯೊಳಗೆ ನೀರು ಹರಿಯುತ್ತಿರುವುದನ್ನು ಕಂಡು ಗಣೇಶ್ ಹೆಗ್ಡೆ ಕುಟುಂಬ ಕಣ್ಣಿರು ಹಾಕಿದೆ
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g