ಮಲ್ನಾಡ್ ಟಿ.ವಿ ವರದಿ ಬೆನ್ನಲ್ಲೇ ಸ್ಪಂದಿಸಿದ ಜಿಲ್ಲಾಡಳಿತ
1 min readಅತಿವೃಷ್ಟಿಯಿಂದ ಮನೆ ಕಳೆದುಕೊಂಡು ಡಿ.ಸಿ ಕಚೇರಿಗೆ ನಾಲ್ಕು ವರ್ಷಗಳಿಂದ ಅಲೆಯುತ್ತಿದ್ದ ಮೂಡಿಗೆರೆಯ ಮಾವಿನಕಟ್ಟೆ ಹರೀಶ್ ಸಮಸ್ಯೆಗೆ ಜಿಲ್ಲಾಡಳಿತ ಸ್ಪಂದಿಸಿದೆ. ಕೂಡಲೇ ಮನೆ ಕಟ್ಡಲು ಬಾಕಿ ಹಣ ಕೊಡಿಸುವ ಭರವಸೆ ನೀಡಿದ ಉಪವಿಭಾಗಾಧಿಕಾರಿ ಬಲ್ಜಿತ್ ಕುಮಾರ್ ಕೇಸ್ ವರ್ಕರ್ ಗೆ ಕ್ಲಾಸ್ ತೆಗೆದುಕೊಂಡರು.
ಕೇಸ್ ವರ್ಕರ್ ಮಾಡಿದ ತಪ್ಪಿಗೆ ಸರ್ಕಾರದಿಂದ ಮಂಜೂರಾಗಿದ್ದ ಮನೆ ಕಟ್ಟಡ ಅರ್ಧಕ್ಕೆ ನಿಂತು ಹೋಗಿ ಸೂರಿಲ್ಲದೇ ನಾಲ್ಕು ವರ್ಷಗಳಿಂದ ಸರ್ಕಾರಿ ಕಚೇರಿ ಅಲೆಯುತ್ತಿದ್ದ ಮೂಡಿಗೆರೆ ಮಾವಿನಕಟ್ಟೆಯ ಹರೀಶ್ ಬಳಿ ಜಿಲ್ಲಾಡಳಿತವೇ ತೆರಳಿದೆ. ಚಿಕ್ಕಮಗಳೂರು ಉಪವಿಭಾಗಾಧಿಕಾರಿ ದಲ್ಜಿತ್ ಕುಮಾರ್ ಮೂಡಿಗೆರೆ ತಹಶಿಲ್ದಾರ್ ವಿನಯ್ ಸಾಗರ್, ಜಾವಳಿ ಆರ್.ಐ ಬಾಬು ,ವಿ.ಎ ಜೊತೆ ಹರೀಶ್ ಮನೆಗೆ ತೆರಳಿ ಮಾಹಿತಿ ಪಡೆದರು. A ಕ್ಯಾಟಗರಿಯಲ್ಲಿ ಮಂಜೂರಾಗಿದ್ದ ಮನೆ B ಕ್ಯಾಟಗರಿ ಎಂದು ದಾಖಲು ಮಾಡಿದ್ದ ಕೇಸ್ ವರ್ಕರ್ ಗೆ ಕರೆ ಮಾಡಿ ಕ್ಲಾಸ್ ತೆಗೆದುಕೊಂಡ ಎ.ಸಿ ದಲ್ಜಿತ್ ಕುಮಾರ್ ಈ ಸಮಸ್ಯೆ ಬಗೆಹರಿಸಲು ನಾವು ಚಿಕ್ಕಮಗಳೂರಿಂದ ಬರಬೇಕ ಎಂದು ಗರಂ ಆದರು, ಮನೆಯವರ ಪರಿಸ್ಥಿತಿ ನೋಡಿ ಮಾನವೀಯತೆ ತೋರಿಸಿ ಎಂದರು, ಅಲ್ಲದೇ ಹರೀಶ್ ಕುಟುಂಬಕ್ಕೆ ಸಾಂತ್ವನ ಹೇಳಿದರು. ಈ ವೇಳೆ ಕೇಸ್ ವರ್ಕರ್ ತಪ್ಪು ಮಾಡಿರುವುದನ್ನು ಅಧಿಕಾರಿಗಳು ಒಪ್ಪಿಕೊಂಡರು.
ಕೂಡಲೇ ಸಮಸ್ಯೆ ಬಗೆಹರಿಸಿ ರಾಜೀವ್ ಗಾಂಧಿ ಹೌಸಿಂಗ್ ಕಾರ್ಪೊರೇಷನ್ ಗೆ ಜಿಲ್ಲಾಧಿಕಾರಿ ಮೂಲಕ ವರದಿ ಕೊಟ್ಟು ಆಗಿರುವ ತಪ್ಪು ಸರಿಪಡಿಸುವುದಾಗಿ ಎ.ಸಿ ತಿಳಿಸಿದರು. ಈ ನಡುವೆ ಮಲ್ನಾಡ್ ಟಿ.ವಿ ವರದಿಯಿಂದ ಅಧಿಕಾರಿಗಳು ಸ್ಥಳಕ್ಕೆ ಬಂದು ಸಮಸ್ಯೆ ಆಲಿಸಿದ್ದಕ್ಕೆ ನೊಂದ ಹರೀಶ್ ವಾಹಿನಿಗೆ ಧನ್ಯವಾದ ತಿಳಿಸಿದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g