April 27, 2024

MALNAD TV

HEART OF COFFEE CITY

ಸಿ.ಟಿ ರವಿ ಹೆಸರೇಳದೆ ಪರೋಕ್ಷವಾಗಿ ಹಿಂದಿನ ಶಾಸಕರ ಕೆಲಸ ಅರ್ಧಕ್ಕೆ ನಿಲ್ಲಿಸಲ್ಲ ಎಂದ ತಮ್ಮಯ್ಯ

1 min read

ಹಿಂದಿನ ಶಾಸಕರು ಸಾಕಷ್ಟು ಅನುದಾನವನ್ನು ತಂದಿದ್ದು ಯಾವುದೇ ಕಾಮಗಾರಿಯನ್ನು ಅರ್ಧಂಬರ್ದ ಆಗಲು ಬಿಡುವುದಿಲ್ಲ ಮೆಡಿಕಲ್ ಕಾಲೇಜನ್ನು ಇನ್ನು ಒಂದೂಕಾಲು ವರ್ಷದಲ್ಲಿ ಪೂರ್ಣ ಗೊಳಿಸಲಾಗುವುದು ಎಂದು ಶಾಸಕ ಎಚ್.ಡಿ ತಮ್ಮಯ್ಯ ಹೇಳಿದ್ದಾರೆ.

ಚಿಕ್ಕಮಗಳೂರು ಕ್ಷೇತ್ರದ ಅಭಿವೃದ್ಧಿ ವಿಷಯದಲ್ಲಿ ಯಾವುದೇ ಪಕ್ಷಭೇದ ಮಾಡುವುದಿಲ್ಲ ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದ್ದಾರೆ. ನಗರಸಭೆ ಅನುದಾನದ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ, ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು ನಾನು ಇನ್ನು ಮುಂದೆ ಯಾವುದೇ ರಾಜಕೀಯ ಮಾತನಾಡುವುದಿಲ್ಲ ಎಂದು ಪುನರುಚ್ಚರಿಸಿದರು. ನಗರದಲ್ಲಿ ಮೂರು ತಿಂಗಳಿಗೊಮ್ಮೆ ಜನಸಂಪರ್ಕ ಸಭೆ ಹಾಗೂ ವಾರ್ಡ್ ಭೇಟಿ ಮಾಡುವುದಾಗಿ ತಿಳಿಸಿದ ತಮ್ಮಯ್ಯ ಎಲ್ಲರನ್ನೂ ಪ್ರೀತಿ ವಿಶ್ವಾಸ ದಿಂದ ಕೊಂಡೊಯ್ಯುವ ಹಾಗೂ ಪಕ್ಷಭೇದ ಮರೆತು ಒಂದೊಂದೆ ಕೆಲಸ ಮಾಡುವುದಾಗಿ ಹೇಳಿದರು. ನಗರಕ್ಕೆ ಒಂದು ಅಥವಾ ಎರಡು ಪಬ್ಲಿಕ್ ಶಾಲೆ ತರುವ ಭರವಸೆ ನೀಡಿದರು. ಪರೋಕ್ಷವಾಗಿ ಸಿ.ಟಿ ರವಿ ಹೆಸರು ಹೇಳದೆ ಹಿಂದಿನ ಶಾಸಕರು ತಂದಿರುವ ಅನುದಾನದಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ಅರ್ಧಕ್ಕೆ ಬಿಡುವುದಿಲ್ಲ ಎಂದರು. ಅದರಲ್ಲೂ ಮೆಡಿಕಲ್ ಕಾಲೇಜು ಇನ್ನು ಒಂದೂಕಾಲು ವರ್ಷದಲ್ಲಿ ಪೂರ್ಣಗೊಳಿಸುವುದಾಗಿ ತಿಳಿಸಿದರು ನಾನು ಚಿಕ್ಕಮಗಳೂರು ಕ್ಷೇತ್ರದ 2 ಲಕ್ಷ 31 ಸಾವಿರ ಜನರಿಗೂ ಶಾಸಕ ಎಂದ ತಮ್ಮಯ್ಯ ನಾನು ಶಾಸಕ ಅಲ್ಲ ಸೇವಕ ಎಂದು ಹೇಳಿದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!