ರಾಮ ಮಂದಿರ ಉದ್ಘಾಟನೆ : ನಗರದ ಕೆಲವು ಶಾಲೆಗಳಿಗೆ ರಜೆ ಘೋಷಣೆ
1 min readಕ್ರೈಸ್ತ ಶಾಲೆಯೊಂದು ರಾಮ ಮಂದಿರ ಪ್ರಾಣ ಪ್ರತಿಷ್ಟಾಪನೆ ದಿನ ಕಡ್ಡಾಯ ಹಾಜರಾತಿಗೆ ಸೂಚಿಸಿ ಟೀಕೆಗೊಳಗಾದ ಬೆನ್ನಲ್ಲೇ ಇನ್ನಷ್ಟು ಶಾಲೆಗಳು ನಾಳಿನ ರಾಮ ಮಂದಿರ ಉದ್ಘಾಟನೆಗೆ ಅಧಿಕೃತ ರಜೆಯನ್ನೇ ಘೋಷಿಸಿವೆ.
ದೇಶದೆಲ್ಲೆಡೆ ರಾಮಮಂದಿರ ಪ್ರಾಣ ಪ್ರತಿಷ್ಟಾಪನೆಗೆ ಕ್ಷಣಗಣನೆ ಆರಂಭಗೊಂಡಿದ್ದು ಕೇಂದ್ರ ಸರ್ಕಾರ ಅರ್ಧ ದಿನ ಕಚೇರಿಗಳಿಗೆ ರಜೆ ಘೋಷಿಸಿದ್ದು ಕೊನೆಗೂ ರಾಜ್ಯ ಸರ್ಕಾರ ರಜೆ ಘೋಷಣೆ ಮಾಡಲಿಲ್ಲ ಆದರೆ ರಜೆ ಇಲ್ಲದಿದ್ದರೂ ಬಹುತೇಕ ಕಡೆ ಕಚೇರಿಗಳು ಬಣಗುಡುವುದು ಖಚಿತ, ಈ ನಡುವೆ ವಿದ್ಯಾರ್ಥಿಗಳು ಶ್ರೀರಾಮನ ವೇಷಭೂಷಣ ಜೊತೆಗೆ ಸಂಭ್ರಮದಿಂದ ರಾಮನವಮಿ ಆಚರಣೆಗೆ ಸಿದ್ದರಾಗಿರುವುದರಿಂದ ಶಾಲೆಗಳು ರಜೆ ಘೋಷಣೆ ಬಗ್ಗೆ ಗೊಂದಲದಲ್ಲಿವೆ. ಏತನ್ಮಧ್ಯೆ ನಗರದ ಕೆಲ ಶಾಲೆಗಳು ಅಧಿಕೃತವಾಗಿ ರಜೆಯನ್ನೇ ಕೊಟ್ಟಿವೆ. ಅಲ್ಲದೇ ರಾಮ ದೇಗುಲಗಳಿಗೆ ಪ್ರವಾಸವನ್ನೂ ಸಹಾ ಶಾಲೆಗಳು ಹಮ್ಮಿಕೊಂಡಿವೆ. ಅದರಲ್ಲೂ ಕ್ರೈಸ್ತ ಶಾಲೆಗಳೇ ರಜೆ ಘೋಷಿಸಿರುವುದು ಪ್ರಮುಖವಾಗಿವೆ ನಗರದ ಪ್ರತಿಷ್ಠಿತ ಸೇಂಟ್ ಮೇರಿಸ್ ಶಾಲೆ ಇಂದೇ(ಭಾನುವಾರ) ಶಾಲೆಗಳನ್ನು ನಡೆಸಿ ನಾಳೆ ರಜೆ ಘೋಷಿಸಿದ್ದರೆ, ಮಾಂಟಿ ಏಂಜಲ್ಸ್ ಶಾಲೆ ಕೂಡಾ ರಜೆ ಕೊಟ್ಟಿದೆ, ಇತ್ತ ಜೆ.ವಿ.ಎಸ್ ನಾಳೆ ನಡೆಸಬೇಕಿದ್ದ ಪಠ್ಯ ಚಟುವಟಿಕೆಗಳನ್ನು ಮುಂದಿನ ಶನಿವಾರ ಪೂರ್ಣ ಶಾಲೆ ನಡೆಸಲಿದೆ. ಸಾಯಿ ಏಂಜಲ್ಸ್ ಶಾಲೆ ನಾಳೆ ತನ್ನ ವಿದ್ಯಾರ್ಥಿಗಳಿಗೆ ಹಿರೇಮಗಳೂರು ಕೋದಂಡರಾಮ ದೇವಸ್ಥಾನಕ್ಕೆ ಪ್ರವಾಸ ಇಟ್ಟಿದ್ದು ಅಲ್ಲಿಯೇ ರಾಮನಾಮ ಜಪಿಸಲು , ಭಜನೆ ಪೂಜೆ ಕೈಂಕರ್ಯಗಳನ್ನು ಕೈಗೊಳ್ಳಲಿವೆ. ಈ ಮಧ್ಯೆ ಶಿಕ್ಷಣ ಇಲಾಖೆಯಾಗಲಿ ಜಿಲ್ಲಾಡಳಿತ ಆಗಲಿ ಯಾವುದೇ ಮಾಹಿತಿ ಈ ಬಗ್ಗೆ ಕೊಟ್ಟಿಲ್ಲ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g