April 30, 2024

MALNAD TV

HEART OF COFFEE CITY

ಯಡಿಯೂರಪ್ಪ ಎದುರು ಎಂ.ಎಲ್.ಎ ಸೋಲಿನ ಕಾರಣ ಬಿಚ್ಚಿಟ್ಟ ಸಿ.ಟಿ ರವಿ

1 min read

ಯಡಿಯೂರಪ್ಪ ಆಗಮಿಸದೇ ಹಿನ್ನಡೆ ಅನುಭವಿಸಿ ಸೋತಿದ್ದ ಅದೇ ಸಖರಾಯಪಟ್ಟಣದಲ್ಲಿ ಯಡ್ಡಿ ಕರೆಸಿ ಮಾಜಿ ಶಾಸಕ ಸಿ.ಟಿ ರವಿ ಡ್ಯಾಮೇಜ್ ಕಂಟ್ರೋಲ್ ಮಾಡಿ ಜನರ ಮನಸೂರೆಗೊಳ್ಳುವ ಭಾಷಣ ಮಾಡಿದ್ದಾರೆ.

ವಿಧಾನಸಭಾ ಚುನಾವಣೆ ವೇಳೆ ಯಡಿಯೂರಪ್ಪ ಕುಟುಂಬದ ಕೆಂಗಣ್ಣಿಗೆ ಗುರಿಯಾಗಿ ಸೋಲು ಅನುಭವಿಸಿದ್ದ ಮಾಜಿ ಶಾಸಕ ಸಿ.ಟಿ ರವಿ ಇಂದು ಅದೇ ಸಖರಾಯಪಟ್ಟಣಕ್ಕೆ ಮಾಜಿ ಸಿಎಂ ಬಿಎಸ್.ವೈ ರನ್ನು ಕರೆಸಿ ತಮ್ಮ ವಿರುದ್ಧ ಮತಚಲಾಯಿಸಿದ್ದ ಈ ಭಾಗದ ಮತದಾರರ ಎದುರು ತಮ್ಮದೇ ಶೈಲಿಯಲ್ಲಿ ಲೋಕಸಭೆ ಚುನಾವಣೆಯ ಪ್ರಚಾರ ನಡೆಸಿದ್ದಾರೆ. ‌ತನ್ನ ಸೋಲಿಗೆ ಗ್ರಹಚಾರ ಕಾರಣ ಎಂದ ರವಿ ಯಡಿಯೂರಪ್ಪ ಹಾಗೂ ತಮ್ಮ ನಡುವಿನ ಸಂಬಂಧಕ್ಕೆ ಹುಳಿ ಹಿಂಡುವ ಕೆಲಸ ಆಯ್ತು ಎಂದಿದ್ದಾರೆ.
ಇದೇ ವೇಳೆ ತಾನು ಕಳೆದ ವಿಧಾನಸಭಾ ಚುನಾವಣೆ ವೇಳೆ ಮೈ ಮರೆತಿದ್ದನ್ನು ಸಹಾ ಒಪ್ಪಿಕೊಂಡ ರವಿ ಪಕ್ಷದ ಬಗೆಗಿನ ತಮ್ಮ ಸಿದ್ದಾಂತದ ಬಗ್ಗೆಯೂ ಹೇಳಿಕೊಂಡಿದ್ದಾರೆ. ಫೋಟೋ ಇಟ್ಟು ಪೂಜೆ ಮಾಡುತ್ತೇವೆ ಎಂದವರು ಮಾಡಿದ ಮೋಸದ ಕುರಿತಾಗಿಯೂ ನೋವು ತೋಡಿಕೊಂಡು ಪ್ರೀತಿಯಿಂದಲೇ ಅವರನ್ನು ಗೆಲ್ಲುವ ವಿಶ್ವಾಸದ ಮಾತನಾಡಿದ್ರು, ಕಳ್ಳ ಎತ್ತಿಗೆ ಮೇವು ಹಾಕಿದ್ದೀರಾ ಎಂದು ಹೇಳುತ್ತಾ ಹಾಲಿ ಶಾಸಕ ಎಚ್.ಡಿ ತಮ್ಮಯ್ಯ ಬಗ್ಗೆ ಸಹ ಲೇವಡಿ ಮಾಡಿ ನಾನು ಮಾಡಿದ ರಸ್ತೆಯ ಗುಂಡಿ ಮುಚ್ಚಲಿ ಸಾಕು ಎಂದು ಸವಾಲು ಮುಂದಿಟ್ಟಿದ್ದಾರೆ

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!