ಪ್ರೀತಿಸುತ್ತಿದ್ದ ಯುವಕ ಆತ್ಮಹತ್ಯೆ; ಮನನೊಂದು ಯುವತಿ ನೇಣಿಗೆ ಶರಣು
1 min readಎನ್.ಆರ್.ಪುರ: ತಾಲೂಕಿನ ಅಳೇಹಳ್ಳಿ ಮತ್ತು ವಗಡೆ ಗ್ರಾಮದಲ್ಲಿ ಪ್ರೀತಿ ಮಾಡುತ್ತಿದ್ದ ಇಬ್ಬರು ಪ್ರತ್ಯೇಕವಾಗಿ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ನಡೆದಿದೆ.
ಮಕ್ಕಿಮನೆಯ ರಾಜೇಶ (27) ಹಾಗೂ ಅಳೇಹಳ್ಳಿಯ ಚಾಂದಿನಿ (23) ಆತ್ಮಹತ್ಯೆಗೆ ಶರಣಾದವರಾಗಿದ್ದು ಇಬ್ಬರೂ ಪರಸ್ಪರ ಸಂಬಂಧಿಕರಾಗಿದ್ದು ಇಬ್ಬರು ಪ್ರೀತಿಸುತ್ತಿದ್ದರು. ರಾಜೇಶ ಡಿಸೆಂಬರ್ 23 ರಂದು ಮನೆಯಲ್ಲಿ ವಿಷ ಕುಡಿದಿದ್ದು ತಕ್ಷಣ ಮನೆಯವರು ಅವನನ್ನು ಚಿಕಿತ್ಸೆಗಾಗಿ ಶಿವಮೊಗ್ಗ ಆಸ್ಪತ್ರೆಗೆ ಸೇರಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಮೃತ ಪಟ್ಟಿದ್ದಾನೆ. ಮಂಗಳವಾರ ಅಳೇಹಳ್ಳಿಯ ಚಾಂದನಿ ತನ್ನ ಮನೆಯಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಚಾಂದಿನಿ ಎನ್.ಆರ್.ಪುರ ಪಟ್ಟಣದಲ್ಲಿ ಕಂಪ್ಯೂಟರ್ ಕೆಲಸ ಮಾಡುತ್ತಿದ್ದಳು. ಬೆಳಿಗ್ಗೆ ಎಂದಿನಂತೆ ಮನೆ ಬಿಟ್ಟು ಎನ್.ಆರ್.ಪುರಕ್ಕೆ ಬಂದು ಹೋಗಿದ್ದಾಳೆ. ಅವಳ ತಾಯಿ ಸೀತಮ್ಮ ಬಿಸಿಯೂಟ ಅಡಿಗೆ ಕೆಲಸ ಮಾಡುತ್ತಿದ್ದು ಅಡಿಗೆ ಕೆಲಸ ಮುಗಿಸಿ ಮದ್ಯಾಹ್ನ 2 ಗಂಟೆಗೆ ಮನೆಗೆ ಬಂದು ನೋಡಿದಾಗ ಮಗಳು ಚಾಂದನಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಚಾಂದಿನಿ ಡೆತ್ ನೋಟು ಬರೆದಿದ್ದು ಅದರಲ್ಲಿ, ನಾನು ಹಾಗೂ ರಾಜೇಶ ಪರಸ್ಪರ ಪ್ರೀತಿಸುತ್ತಿದ್ದು ರಾಜೇಶ ಇಲ್ಲದೆ ನನಗೆ ಬದುಕಲು ಸಾಧ್ಯವಿಲ್ಲ ಎಂದು ಬರೆದಿದ್ದಾಳೆ. ಎನ್.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g