ಸಿಡಿಎ ಅಧ್ಯಕ್ಷ ಸ್ಥಾನಕ್ಕೆ ನಾನೂ ಪ್ರಬಲ ಆಕಾಂಕ್ಷಿ: ಡಿ.ಸಿ ಪುಟ್ಟೇಗೌಡ
1 min readಚಿಕ್ಕಮಗಳೂರು: ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರದ (ಸಿಡಿಎ) ಅಧ್ಯಕ್ಷ ಸ್ಥಾನಕ್ಕೆ ನಾನು ಒಬ್ಬ ಆಕಾಂಕ್ಷಿ ಎಂದು ಸೀನಿಯರ್ ಅಡ್ವೋಕೇಟ್, ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ಡಿ.ಸಿ ಪುಟ್ಟೇಗೌಡ ತಿಳಿಸಿದರು.
ಇಂದು ಬೆಳಗ್ಗೆ ಶಾಸಕ ಹೆಚ್.ಡಿ ತಮ್ಮಯ್ಯನವರ ಗೃಹಕಚೇರಿಗೆ ತೆರಳಿದ ಪುಟ್ಟೇಗೌಡರ ಹಿತೈಷಿಗಳು, ಹಿರಿಯರು, ನೂರಾರು ಬೆಂಬಲಿಗರು ಸಿಡಿಎ ಅಧ್ಯಕ್ಷರನ್ನಾಗಿ ನೇಮಕ ಮಾಡುವಂತೆ ಆಗ್ರಹಿಸಿ ಶಾಸಕರಿಗೆ ಮನವಿ ಮಾಡಿದರು.
ಈ ಕುರಿತು ಸುದ್ದಿಗಾರೊಂದಿಗೆ ಮಾತನಾಡಿದ ಡಿ.ಸಿ ಪುಟ್ಟೇಗೌಡ ಅವರು ಶಾಸಕರಿಗೆ ಮನವಿಯನ್ನು ಸಲ್ಲಿಸಿದ್ದೇವೆ ಅವರು ಕೂಡ ಸಕಾರಾತ್ಮಕವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ವಿಧಾನಸಭೆಯಲ್ಲಿ ಐದು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲುವಲ್ಲಿ ನಾನು ಸಹ ಶ್ರಮಿಸಿದ್ದೇನೆ ಎಂದ ಅವರು ಕಾಂಗ್ರೆಸ್ ಪಕ್ಷ ನನ್ನನ್ನ ಗುರುತಿಸಿ ಈ ಹುದ್ದೆಯನ್ನು ಕೊಡಬೇಕು ಎಂದು ಮನವಿ ಮಾಡಿದ್ದೇನೆ. ಪಕ್ಷದಿಂದ ಸ್ಥಾನ ಕೊಟ್ಟರೆ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಪ್ರಾಮಾಣಿಕವಾಗಿ ಪಾರದರ್ಶಕವಾಗಿ ಕರ್ತವ್ಯ ನಿರ್ವಹಿಸುತ್ತೇನೆ ಎಂದರು.
ಇದೇ ವೇಳೆ ಅವರ ಬೆಂಬಲಿಗ ಖಾದಿಲ್ ಮಹಮದ್ ಮಾತನಾಡಿ ಈಗಾಗಲೇ ಪುಟ್ಟೇಗೌಡರು, ಅನೇಕ ಜನಪರ ಕೆಲಸಗಳನ್ನ ಮಾಡಿಕೊಂಡು ಜನಮನ್ನಣೆ ಗಳಿಸಿದ್ದಾರೆ. ಕಳೆದ ಬಾರಿ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್ 5ಕ್ಕೆ 5 ಸ್ಥಾನ ಗೆಲ್ಲಲು, ಪುಟ್ಟೇಗೌಡರು ಕೂಡ ಸಾಕಷ್ಟು ಶ್ರಮವಹಿಸಿದ್ದಾರೆ. ಅವರ ಸೇವೆ ಪಕ್ಷಕ್ಕೆ ಅಗತ್ಯವಾಗಿ ಬೇಕಾಗಿದೆ ಅಂತಾ ಪುಟ್ಟೇಗೌಡ ಬೆಂಬಲಿಗರು, ಶಾಸಕ ಹೆಚ್.ಡಿ ತಮ್ಮಯ್ಯನವರಿಗೆ ತಿಳಿಸಿದರು.
ಆ ಬಳಿಕ ಮನೆಗೆ ಆಗಮಿಸಿದ ಪುಟ್ಟೇಗೌಡ ಅವರ ಹಿತೈಷಿಗಳು, ಬೆಂಬಲಿಗರನ್ನ ನೋಡಿ ಶಾಸಕ ತಮ್ಮಯ್ಯ ನಿಮ್ಮ ಬೇಡಿಕೆಯನ್ನ ಸಂಬಂಧಪಟ್ಟವರ ಗಮನಕ್ಕೆ ತರುತ್ತೇನೆ. ನಾನೊಬ್ಬನೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ, ಕೋರ್ ಕಮಿಟಿಯಲ್ಲಿ ಈ ಬಗ್ಗೆ ಪ್ರಸ್ತಾಪಿಸುವೆ. ಹೇಗೆ ಜನರ ಪರವಾಗಿ ಪುಟ್ಟೇಗೌಡರು ವಕಾಲತ್ತು ವಹಿಸ್ತಾರೋ, ಅದೇ ರೀತಿ ನಾನು ಕೂಡ ಪುಟ್ಟೇಗೌಡರ ಪರವಾಗಿ ವಕಾಲತ್ತು ವಹಿಸ್ತೇನೆ ಅಂತಾ ಮನೆಗೆ ಬಂದಿದ್ದ ಪುಟ್ಟೇಗೌಡರ ಬೆಂಬಲಿಗರಿಗೆ ಹೆಚ್.ಡಿ ತಮ್ಮಯ್ಯ ಭರವಸೆ ನೀಡಿದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g