April 27, 2024

MALNAD TV

HEART OF COFFEE CITY

ಕಾಂಗ್ರೇಸ್ ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡ ಶ್ರೀಧರ್‌ಉರಾಳ್

1 min read

ಚಿಕ್ಕಮಗಳೂರು-ರಾಷ್ಟ್ರ ಹಿತಕ್ಕಾಗಿ ರಾಜಕಾರಣ ಮಾಡುವ ಬಿಜೆಪಿ ಪಕ್ಷಕ್ಕೆ ಎಲ್ಲರು ಸಹಕರಿಸಬೇಕು, ನಮ್ಮದು ಪ್ರೀತಿ, ನೀತಿ ರಾಜಕರಣ, ಅಭಿವೃದ್ಧಿಯ ಕೆಲಸಗಳಿಗೆ ಮೊದಲ ಆದ್ಯತೆ ನೀಡಿ ವಿರೋಧ ಪಕ್ಷಗಳ ವಿಶ್ವಾಸವನ್ನು ಪಡೆದಿದ್ದೇವೆ ಎಂದು ಶಾಸಕ ಸಿ.ಟಿ.ರವಿ ತಿಳಿಸಿದರು.ನಗರದ ಪಾಂಚಜನ್ಯ ಕಛೇರಿಯಲ್ಲಿ ಶುಕ್ರವಾರ ಕಾಂಗ್ರೇಸ್ ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡ ಶ್ರೀಧರ್‌ಉರಾಳ್, ಶಿವಕುಮಾರ್, ಸೋಮಶೇಖರ್ ಅವರನ್ನು ಪಕ್ಷದ ಬಾವುಟ ನೀಡಿ ಸ್ವಾಗತಿಸಿ ಮಾತನಾಡಿ ನಿಮ್ಮ ಪಕ್ಷ ನಿಷ್ಟೆ ಮತ್ತು ಪರಿಶ್ರಮಕ್ಕೆ ತಕ್ಕಂತೆ ಅವಕಾಶಗಳು ದೋರೆಯುತ್ತವೆ ವ್ಯಕ್ತಿಗಳನ್ನು ಮತ್ತು ಸಮಾಜವನ್ನು ಜೊಡಿಸುವ ಮತ್ತು ಕೂಡಿಸುವ ಲೆಕ್ಕ ನಮ್ಮ ಪಕ್ಷದ ನೀತಿಯಾಗಿದೆ, ಈ ಪ್ರಯತ್ನಕ್ಕೆ ಪೂರಕವಾಗಿ ಪಕ್ಷದ ಕಾರ್ಯಕರ್ತರು ಪ್ರಯತ್ನದಿಂದ ಇಂದು ನೂತನ ಸದಸ್ಯರ ಸೇರ್ಪಡೆಯಾಗಿದೆ ಎಂದರು,ನಮ್ಮ ಪಕ್ಷದಲ್ಲಿ ಯಾವುದೇ ತಾರತಮ್ಯ ಇರುವುದಿಲ್ಲ, ಪಕ್ಷ ನಿಷ್ಟೆ ಮತ್ತು ಪರಿಶ್ರಮಕ್ಕೆ ಹೆಚ್ಚಿನ ಬೆಲೆ ಮತ್ತು ಅವಕಾಶ ಸಿಗುವುದು, ಎಲ್ಲರನ್ನು ಕೂಡಿಸಿಕೊಂಡು ಹೋಗುವ ಜವಾಬ್ದಾರಿ ನಿಮ್ಮದು, ನಿಮ್ಮ ಮನೋಭಾವ ಮತ್ತು ನಿಮ್ಮ ಸಾಮರ್ಥ್ಯ ಪಕ್ಷದ ಬೆಳವಣಿಗೆಗೆ ಉಪಯೋಗವಾಗಲಿ, ದೇಶ ಮೊದಲು, ಸಬ್‌ಕ ಸಾಥ್ ಸಬ್‌ಕಾ ವಿಕಾಸ್, ಸಬ್‌ಕಾ ವಿಶ್ವಾಸ್ ಪಕ್ಷದ ನೀತಿಯಾಗಿದೆ ಎಂದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಪ್ರತಿಯೊಂದು ಕಾರ್ಯಕ್ರಮವು ಬಡವರಿಗೆ, ದಲಿತರಿಗೆ, ಮಹಿಳೆಯರಿಗೆ ಮೊದಲ ಆದ್ಯತೆಯನ್ನು ನೀಡುವುದರ ಜತೆಗೆ ಶಿಕ್ಷಣದ ಬಲ, ಆತ್ಮ ವಿಶ್ವಾಸದ ಬಲ ನೀಡಿ ಶಕ್ತಿ ತುಂಬುವAತಹ ಕೆಲಸವನ್ನು ಮಾಡುವ ಕಾರ್ಯಕ್ರಮವಾಗಿರುತ್ತದೆ, ಬಡವರಿಗೆ ಮನೆ, ಶೌಚಾಲಯ, ಬ್ಯಾಂಕ್ ಖಾತೆ, ಗ್ಯಾಸ್, ವಿದ್ಯುತ್, ಸಾಲಸೌಲಭ್ಯ, ಆಯುಷ್‌ಮಾನ್ ಭಾರತ್ ಯೋಜನೆಯಡಿ ೫ ಲಕ್ಷದ ವರೆಗಿನ ಉಚಿತ ಚಿಕಿತ್ಸಾ ವ್ಯವಸ್ಥೆ ಬಡವರಿಗಾಗಿಯೇ ಕೇಂದ್ರಿಕೃತವಾಗಿರುವAತದ್ದು, ಹಾಗೂ ಭಾರತವನ್ನು ಬಲಿಷ್ಠಗೊಳಿಸಲು ಶ್ರಮಿಸಿದವರಿಗೆ ಸನ್ಮಾನಿಸಲಾಗುತ್ತಿದೆ, ದೇಶದ ಉದ್ದಗಲಕ್ಕು ನಮ್ಮ ಸಾಂಸ್ಕೃತಿಕ ಪುನರ್‌ತ್ತಾನದ ಕಾರ್ಯವನ್ನು ಮಾಡಲಾಗುತ್ತಿದೆ, ಅವರ ನೀತಿಯ ನೇತೃತ್ವದಲ್ಲಿ ಕೆಲಸ ಮಾಡುತ್ತಿರುವ ನಾವು ನಮ್ಮ ಕ್ಷೇತ್ರದಲ್ಲಿ ರಾಜಕೀಯ ವರ್ತನೆಯನ್ನು ಬದಲಿಸಿ ವಿಶ್ವಾಸದ ಮತ್ತು ಅಭಿವೃದ್ಧಿಯ ರಾಜಕರಣ ನಡೆಸುತ್ತಿದ್ದೇವೆ ಎಂದರು.
ಬಿಜೆಪಿ ಜಿಲ್ಲಾದ್ಯಕ್ಷ ಕಲ್ಮುರಡಪ್ಪ ಮಾತನಾಡಿ ಭಾರತೀಯ ಜನತಾ ಪಾರ್ಟಿಯ ಸಿದ್ಧಾಂತ ಮತ್ತು ಜಿಲ್ಲೆಯಲ್ಲಿ ಆಗುತ್ತಿರುವ ಪ್ರಗತಿಯನ್ನು ನೋಡಿ ಪಕ್ಷಕ್ಕೆ ಸೇರ್ಪಡೆಗೊಂಡ ಮಿತ್ರರು ಮಾರ್ಗದರ್ಶಕರಾದ ಶ್ರೀಧರ್‌ಉಳಾಲ್, ಶಿವಕುಮಾರ್, ಸೋಮಣ್ಣ ಮತ್ತು ಬೆಂಬಲಿಗರಿಗು ಅಭಿನಂಧಿಸಿದರು,
ಭಾರತೀಯ ಜನತಾ ಪಾರ್ಟಿ ರಾಷ್ಟ್ರೀಯ ವಿಚಾರವನ್ನು ಇಟ್ಟುಕೊಂಡು ಬೆಳೆಯುತ್ತಿರುವ ಪಾರ್ಟಿ, ಬಿಜೆಪಿ ಪಕ್ಷಕ್ಕೆ ರಾಷ್ಟç ಮೊದಲು, ವ್ಯಕ್ತಿಗಿಂತ ಪಕ್ಷ ಮುಖ್ಯ ಪಕ್ಷಕ್ಕಿಂತ ದೇಶ ಮುಖ್ಯ ಎಂಬ ನಿಟ್ಟಿನಲ್ಲಿ ಕೆಲಸವನ್ನು ಮಾಡುತ್ತಿರುವ ಪಕ್ಷ, ರಾಷ್ಟ್ರೀಯ ವಿಚಾರದಲ್ಲಿ ಯಾವುದೇ ರಾಜಿ ಇಲ್ಲದೆ ಭಾರತದ ಏಳಿಗೆಗಾಗಿ ನಡೆಯುತ್ತಿರುವ ಪಕ್ಷ, ನಮ್ಮ ಶ್ರದ್ಧೆ, ಭಕ್ತಿ ಮತ್ತು ನೀತಿ ನಮ್ಮ ರಾಷ್ಟ್ರಕ್ಕಾಗಿ ಎಂದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!