April 27, 2024

MALNAD TV

HEART OF COFFEE CITY

ಕಲುಷಿತಗೊಳ್ಳುತ್ತಿದ್ದಾಳೆ ನಾಡಿನ ಜೀವನದಿ ಹೇಮಾವತಿ- ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹ

1 min read

ಚಿಕ್ಕಮಗಳೂರು : ಹೇಮಾವತಿ ಉಗಮ ಸ್ಥಾನದಲ್ಲೇ ನದಿ ನೀರು ಸಂಪೂರ್ಣ ಕಲುಶಿತಗೊಳ್ಳುತ್ತಿದ್ದು, ಜನಸಾಮಾನ್ಯರು-ಜಲಚರಗಳು-ಬೆಳೆಗಳ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಜಾವಳಿ ಸಮೀಪ ಹನಿ-ಹನಿಯಾಗಿ ಹುಟ್ಟುವ ಈ ನೆಲದ ಜೀವನಾಡಿ ಹೇಮಾವತಿ ನದಿ ಕಾಫಿ ಬೆಳೆಗಾರರ ಅಟ್ಟಹಾಸ ದಿಂದ ನದಿ ನೀರು ಕಲುಷಿತಗೊಳ್ತಿದೆ.

ಮೂಡಿಗೆರೆ-ಸಖಲೇಶಪುರ ಭಾಗದ ಕಾಫಿ ಬೆಳೆಗಾರರು ಕಾಫಿಯನ್ನ ಪಲ್ಪರಿಂಗ್ ಮಾಡಿ ಪಲ್ಪರಿಂಗ್ ನ ವೇಸ್ಟ್ ನೀರನ್ನ ಹೇಮಾವತಿ ಒಡಲಿಗೆ ಬಿಡುತ್ತಿದ್ದಾರೆ.
ಮಳೆಗಾಲದಲ್ಲಿ ಮಣ್ಣು ಮಿಶ್ರಿತ ಕೆಂಪು ನೀರು ಹೋದ್ರೆ, ಬೇಸಿಗೆಯಲ್ಲಿ ನೀರಿಗೆ ಬಣ್ಣವಿಲ್ಲದಿದ್ದರೂ ಶುಭ್ರವಾಗಿ ಹರಿಯುತ್ತಾಳೆ. ಆದರೆ, ಕಾಫಿತೋಟದ ಮಾಲೀಕರು ಕಾಫಿ ಪಲ್ಪರಿಂಗ್ ನೀರನ್ನ ನೇರವಾಗಿ ಹೇಮಾವತಿ ಒಡಲು ಸೇರಿಸುತ್ತಿರೋದ್ರಿಂದ ಸ್ವಚ್ಛವಾಗಿ ಹರಿಯುವ ಹೇಮೆಯ ಒಡಲಲ್ಲಿ ಅಲ್ಲಲ್ಲೇ-ಅಲ್ಲಲ್ಲೇ ಕಪ್ಪು ಬಣ್ಣಕ್ಕೆ ತಿರುಗಿದೆ. ಇದರಿಂದ ನದಿ ನೀರು ಕೂಡ ದುರ್ವಾಸನೆ ಬೀರುತ್ತಿದೆ. ಇದು ಸ್ಥಳಿಯರು ಆಕ್ರೋಶಕ್ಕೂ ಕಾರಣವಾಗಿದೆ. ಕಾಫಿ ಪಲ್ಪರ್ ಮಾಡಿದ ನೀರನ್ನ ಇಂಗು ಗುಂಡಿ ಮೂಲಕ ಇಂಗಿಸಬೇಕು. ಅಧಿಕಾರಿಗಳು ಇತ್ತ ಸೂಕ್ತ ಗಮನ ಹರಿಸಬೇಕೆಂದು ಸ್ಥಳಿಯರು ಆಗ್ರಹಿಸಿದ್ದಾರೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!