ಶ್ರೀರಾಮಸೇನೆ ಅಧ್ಯಕ್ಷ ರಂಜಿತ್ ಶೆಟ್ಟಿ ಬಂಧನ
1 min readನಾಗೇನಹಳ್ಳಿ ದರ್ಗಾಗೆ ತೆರಳುವ ಮಾಹಿತಿ ಮೇರೆಗೆ ಶ್ರೀರಾಮ ಸೇನೆ ಅಧ್ಯಕ್ಷ ರಂಜಿತ್ ಶೆಟ್ಟಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ದತ್ತಪೀಠದಿಂದ ನಾಲ್ಕು ಕಿಲೋಮೀಟರ್ ದೂರದಲ್ಲಿರುವ ನಾಗೇನಹಳ್ಳಿ ದರ್ಗಾಕ್ಕೆ ದತ್ತಜಯಂತಿ ನಡೆಸಲು ತೆರಳುತ್ತಿದ್ದ ಶ್ರೀರಾಮಸೇನೆ ಪ್ರಾಂತ ಅಧ್ಯಕ್ಷ ರಂಜಿತ್ ಶೆಟ್ಟಿಯನ್ನು ಪೊಲೀಸರು ಮಾರ್ಗಮಧ್ಯದಲ್ಲಿ ವಶಕ್ಕೆ ಪಡೆದಿದ್ದಾರೆ. ಸೌಹಾರ್ದ ದತ್ತಜಯಂತಿ ಶ್ರೀರಾಮಸೇನೆ ವತಿಯಿಂದ ನಾಗೇನಹಳ್ಳಿ ದರ್ಗಾ ದಲ್ಲಿ ನಡೆಸುವುದಾಗಿ ಸಂಘಟನೆ ಹೇಳಿತ್ತು, ಈ ಹಿನ್ನೆಲೆ ಇಂದು ನಾಗೇನಹಳ್ಳಿಗೆ ತೆರಳಲು ಸಿದ್ದತೆ ನಡೆಸಿದ್ದನ್ನು ಗಮನಿಸಿದ ಪೊಲೀಸರು ಹಾಸನಚಿಕ್ಕಮಗಳೂರುಶಿವಮೊಗ್ಗ ವಿಭಾಗದ ಅಧ್ಯಕ್ಷ ರಂಜಿತ್ ಶೆಟ್ಟಿಯನ್ನು ವಶಕ್ಕೆ ಪಡೆದಿದ್ದಾರೆ. ಚಿಕ್ಕಮಗಳೂರು ನಗರದ ಗುರುನಾಥ ಥಿಯೇಟರ್ ಸಮೀಪದ ಅವರ ಮನೆಯಿಂದ ಅವರನ್ನು ಪೊಲೀಸರು ಕರೆದೊಯ್ದರು ಎಂದು ಕುಟುಂಬದ ಮೂಲಗಳು ತಿಳಿಸಿವೆ. ರಂಜಿತ್ ಶೆಟ್ಟಿ ಅಲ್ಲದೇ ಗದಗ ಜಿಲ್ಲೆಯಿಂದ ನಾಗೇನಹಳ್ಳಿ ದರ್ಗಾಕ್ಕೆ ತೆರಳಲು ಆಗಮಿಸಿ ಶ್ರೀರಾಮಸೇನೆ ನಾಲ್ಕಾರುಷ ಮುಖಂಡರನ್ನು ಸಹಾ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಶ್ರೀರಾಮಸೇನೆ ಸೌಹಾರ್ದ ದತ್ತಜಯಂತಿ ನಾಗೇನಹಳ್ಳಿ ದರ್ಗಾದಲ್ಲಿ ನಡೆಸುವ ಮುನ್ಸೂಚನೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ದರ್ಗಾ ಸುತ್ತಮುತ್ತ ಕಲಂ 144 ಜಾರಿಗೊಳಿಸಿದ್ದು ನಿಷೇದಾಜ್ಣೆ ಹೊರಡಿಸಿತ್ತು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g