ಕೀ ಬೋರ್ಡ್ ನುಡಿಸಿ ಎಲ್ಲರನ್ನು ನಿಬ್ಬೆರಗಾಗಿಸಿದ ನಿರ್ಮಲಾನಂದನಾಥ ಸ್ವಾಮೀಜಿ
1 min readಖುದ್ದು ಕೀ ಬೋರ್ಡ್ ನುಡಿಸುವ ಮೂಲಕ ತಮ್ಮಲ್ಲಿರುವ ಸಂಗೀತ ಜ್ಣಾನ ತೆರೆದಿಟ್ಟ ನಿರ್ಮಲಾನಂದನಾಥ ಸ್ವಾಮೀಜಿ ಕೆಲಕಾಲ ಎಲ್ಲರೂ ನಿಬ್ಬೆರಗಾಗುವಂತೆ ಮಾಡಿದರು.
ಶೃಂಗೇರಿ ಬಿ.ಜಿ.ಎಸ್ ಆವರಣದಲ್ಲಿ ಇಂದಿನಿಂದ ಆರಂಭಗೊಂಡಿರುವ ಆದಿಚುಂಚನಗಿರಿ ಮಠದ 71 ಗುರುಗಳಾದ ಬಾಲಗಂಗಾಧರನಾಥ ಸ್ವಾಮೀಜಿ ಯವರ 50 ವರ್ಷದ ಪಟ್ಟಾಭಿಷೇಕ ಸುವರ್ಣ ಮಹೋತ್ಸವ ಕಾರ್ಯಕ್ರಮ ಉದ್ಘಾಟನೆ ಮಾಡಿ ಆಶೀರ್ವಚನ ನೀಡಿದ ನಂತರ ಅದೇ ವೇದಿಕೆಯಲ್ಲಿ ಶಮಿತ ಮಲ್ನಾಡ್ ಸಂಗೀತ ರಸ ಸಂಜೆ ನಡೆಯುತ್ತಿದ್ದ ಕಡೆ ತೆರಳಿ ತಾವೇ ಖುದ್ದು ಕೀ ಬೋರ್ಡ್ ನುಡಿಸುವ ಮೂಲಕ ನಿರ್ಮಲಾನಂದನಾಥ ಸ್ವಾಮೀಜಿ ತಮ್ಮಲ್ಲಿರುವ ಸಂಗೀತ ಜ್ಞಾನವನ್ನು ಪ್ರಚುರ ಪಡಿಸಿದರು.
ಹಾರ್ಮೋನಿಯಂ ಅಭ್ಯಾಸವಿರುವ ಅವರು ಭಗವಾನ್ ಶ್ರೀರಾಮನ ಭಜನೆಯನ್ನು ಕೀ ಬೋರ್ಡ್ ಮೂಲಕ ಪ್ರಚುರ ಪಡಿಸಿದರು. ಮೂರ್ನಾಲ್ಕು ನಿಮಿಷಗಳ ಕಾಲ ಕೀ ಬೋರ್ಡ್ ನುಡಿಸಿದ ನಿರ್ಮಲಾನಂದನಾಥ ಸ್ವಾಮೀಜಿ ಎಲ್ಲರು ಅಕ್ಷರಶಃ ನಿಬ್ಬೆರಗಾಗುವಂತೆ ಮಾಡಿದರು. ಸಂಗೀತ ಸಂಜೆ ನಡೆಸಿಕೊಡಲು ಬಂದಿದ್ದ ಶಮಿತ ಸೇರಿದಂತೆ ನುರಿತ ಕೀ ಬೋರ್ಡ್ ವಾದಕರು ಸಹಾ ತಲೆದೂಗುವಂತೆ ಸ್ವಾಮೀಜಿಯವರ ಕೀ ಬೋರ್ಡ್ ವಾದನ ಕೇಳಿ ಬಂತು. ಸ್ವಾಮೀಜಿ ಕೀ ಬೋರ್ಡ್ ವಾದನ ಸಂಜೆಯ ಚಳಿಯಲಿ ಕೆಲಕಾಲ ಎಲ್ಲರೂ ಬೇರೊಂದು ಲೋಕಕ್ಕೆ ಕ್ಷಣಕಾಲ ಹೋಗಿ ಬಂದಂತೆ ಭಾಸವಾಗಿದ್ದು ಮಾತ್ರ ಸತ್ಯ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g