ಹಾಲಿ ಶಾಸಕರು ಕಾಂಗ್ರೆಸ್ ನಾಯಕರ ನಡುವೆ ಸಿಕ್ಕಿ ಒದ್ದಾಡುತ್ತಿದ್ದಾರೆ – ದೇವನೂರು ರವಿ
1 min readಚಿಕ್ಕಮಗಳೂರ : ಅಧಿಕಾರದ ಹಿಂದೆ ಹೋಡುತ್ತಿರುವವರು ಯಾರು? ಬಿಜೆಪಿಗರ, ಬಿಜೆಪಿ ಪಕ್ಷದ ತತ್ವ ಸಿದ್ದಾಂತದ ಹೆಸರೇಳಿಕೊಂಡು ತಾವು ಕೂಡ ಬಿಜೆಪಿ ಪಕ್ಷ ಸೇರಿಕೊಂಡ ಸಂದರ್ಭದಲ್ಲಿ ನೀವು ಎಲ್ಲಿದ್ರಿ, ಎಲ್ಲಿಂದ ಬಂದ್ರಿ, ಎಲ್ಲಿಂದ ನಿಮ್ಮ ರಾಜಕೀಯ ಪಯಣ ಪ್ರಾರಂಭವಾಯಿತು ಎನ್ನುವುದನ್ನು ಸ್ವಲ್ಪ ಯೋಚನೆ ಮಾಡಬೇಕೆಂದು ಬಿಜೆಪಿ ಜಿಲ್ಲಾ ವಕ್ತಾರ ದೇವನೂರು ರವಿ ಒತ್ತಾಯಿಸಿದರು.
ಅಧಿಕಾರವಿಲ್ಲದೆ ಬಿಜೆಪಿ ಶಾಸಕರು ವಿಲವಿಲ ಒದ್ದಾಡುತ್ತಿದ್ದಾರೆ ಎಂಬ ಶಾಸಕ ಹೆಚ್.ಡಿ ತಮ್ಮಯ್ಯ ನವರ ಹೇಳಿಕೆ ಪ್ರತಿಕ್ರಿಯಿಸಿದ ಅವರು ಅಧಿಕಾರಕ್ಕಾಗಿ ಜೆಡಿಎಸ್. ಕಾಂಗ್ರೆಸ್ ಗೆ ಪರ್ಯಾಟನೆ ಮಾಡಿ ಅಲ್ಲಿಂದ ಬಿಜೆಪಿ ಪಕ್ಷಕ್ಕೆ ಬಂದು ನಾನಾ ಹುದ್ದೆಗಳನ್ನು ಪಡೆದದ್ದು ರಾಜಕೀಯ ದಾಹವಲ್ಲವೇ, ಚುನಾವಣೆ ಸಮಯಲ್ಲಿ ಸಿ.ಡಿ.ಎ ಅಧ್ಯಕ್ಷನನ್ನಾಗಿ ಮಾಡಿ ಎಂದು ದೊಂಬಲು ಬೀಳಲಿಲ್ಲವೇ? ಸಿ.ಡಿ.ಎ ಅಧ್ಯಕ್ಷನನ್ನು ಮಾಡಲಿಲ್ಲ ಎಂಬ ಕಾರಣಕ್ಕೆ ಕಾಂಗ್ರೆಸ್ ಗೆ ಹೋದ ನೀವು ರಾಜಕೀಯದ ದಾಹದ ಬಗ್ಗೆ ಮಾತನಾಡುತ್ತೀರ. ಹಿರಿಯ ಕಾಂಗ್ರೆಸ್ ನಾಯಕರ ನಡುವೆ ಸಿಕ್ಕಿ ವಿಲವಿಲ ಒದ್ದಾಡುತ್ತಿರುವವರು ನೀವು ಎಂದು ಪ್ರತಿಕ್ರಿಯೆ ನೀಡಿದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g