ಶ್ರಾವಣ ಸಂಜೆ ಶರೀಫರ ಗೀತಗಾಯನ
1 min readಚಿಕ್ಕಮಗಳೂರು : ಶ್ರಾವಣ ಶನಿವಾರದ ಅಂಗವಾಗಿ ಶ್ರಾವಣ ಸಂಜೆ ಕಾರ್ಯಕ್ರಮದ ಪ್ರಯುಕ್ತ ಸಂತ ಶಿಶುನಾಳ ಷರೀಪರ ಗೀತ ಗಾಯನ ಕಾರ್ಯಕ್ರಮವನ್ನು ಕುವೆಂಪು ಕಲಾ ಮಂದಿರದಲ್ಲಿ ಏರ್ಪಡಿಸಲಾಗಿತ್ತು.
ಹುಲಿಕೆರೆಯ ಗೀತ ಗಾಯನ ಶ್ರೀ ಶಿವಶಕ್ತಿ ಕಲಾಸಂಘ, ಮಲೆನಾಡು ಕಲಾ ಸಂಘ, ಜಿಲ್ಲಾ ಜಾನಪದ ಬೀದಿ ನಾಟಕ ಕಲಾ ತಂಡಗಳ ಒಕ್ಕೂಟ, ಕನ್ನಡ ಸಾಹಿತ್ಯ ಪರಿಷತ್, ಹಾಗೂ ಕನ್ನಡ ಜಾನಪದ ಪರಿಷತ್ ಇವರುಗಳ ಸಂಯುಕ್ತ ಆಶ್ರಯದಲ್ಲಿ ಶ್ರಾವಣ ಮಾಸದ ಮೊದಲ ಶನಿವಾರದಂದು ಶ್ರಾವಣ ಸಂಜೆ ಶಿಶುನಾಳ ಷರೀಪರ ಗೀತಗಾಯನ ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕೆಯನ್ನು ಕಾಫಿ ಬೆಳೆಗಾರರದ ಗಂಧದ ಕೃಷ್ಣೆಗೌಡ ವಹಿಸಿಕೊಂಡಿದ್ದು, ವೇದಿಕೆಯಲ್ಲಿ ಮಲೆನಾಡು ಕಲಾ ಸಂಘದ ಅಧ್ಯಕ್ಷ ಸಿ.ಆರ್. ರಘು, ಕಸಾಪ ಕೀರ್ತನ ಜಿಲ್ಲಾ ಸಂಚಾಲಕ ಹುಲಿಕೆರೆ ಪುಲಿಕೇಶಿ, ಉಪಸ್ಥಿತರಿದ್ದರು. ನಿರೂಪಣೆಯನ್ನು ಜಿಲ್ಲಾ ಬೀದಿ ನಾಟಕದ ಮತ್ತು ಜಾನಪದ ಕಲಾವಿದರ ಒಕ್ಕೂಟದ ಕಾರ್ಯದರ್ಶಿ ವೀರಭದ್ರ ಆಚಾರ್ ಮಾಡಿದರು,
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g