ಶಿವರಾಜ್ ಕುಮಾರ್ ‘ಮೋದಿ ಅಭಿಮಾನಿ’ ಎಂದು ಕಾಂಗ್ರೆಸ್’ಗೆ ಟಾಂಗ್ ನೀಡಿದ ಸಿಟಿ ರವಿ
1 min readಚಿಕ್ಕಮಗಳೂರು: ಕಾಂಗ್ರೆಸ್ ಪಕ್ಷ ನಟ ಶಿವರಾಜ್ ಕುಮಾರ್ ಅವರನ್ನು ಪಕ್ಷಕ್ಕೆ ಆಹ್ವಾನಿಸಿರುವ ಹಿನ್ನಲೆ ಅಷ್ಟೊಂದು ಕಾಳಜಿ ಇದ್ದರೆ ಶಿವರಾಜ್ ಕುಮಾರ್ ಅವರನ್ನೇ ಯಾಕೆ ಮುಖ್ಯಮಂತ್ರಿ ಉಪ ಮುಖ್ಯಮಂತ್ರಿ ಮಾಡಬಾರದು.. ಮಾಡಲಿ ಎಂದು ಮಾಜಿ ಶಾಸಕ ಸಿಟಿ ರವಿ ಟಾಂಗ್ ನೀಡಿದ್ದಾರೆ.
ನಗರದ ಅವರ ನಿವಾಸಿದಲ್ಲಿ ಮಲ್ನಾಡ್ ಟಿವಿಯೊಂದಿಗೆ ಮಾತನಾಡಿದ ಅವರು ರಾಜಕುಮಾರ್ ಅವರ ಕುಟುಂಬದ ಬಗ್ಗೆ ನಮ್ಮೆಲ್ಲರಿಗೂ ಗೌರವವಿದೆ. ರಾಜಕುಮಾರವರು ಇಡೀ ಕನ್ನಡಿಗರಿಗೆ ಇಡೀ ಭಾರತಕ್ಕೆ ಸೇರಿದವರು ಅವರನ್ನ ಅವರ ಪ್ರಭಾವವನ್ನ ಕಾಂಗ್ರೆಸ್ ಪಕ್ಷ ಬಳಸಿಕೊಳ್ಳಲು ಯೋಚನೆ ಮಾಡುತ್ತಿದೆ ಎಂದು ತಿಳಿಸಿದರು.
ಈ ಹಿನ್ನಲೆ ನಟ ಶಿವರಾಜ್ ಕುಮಾರ್ ಕೂಡ ಅದಕ್ಕೆ ಉತ್ತರಿಸಿದ್ದು, ಅವರು ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ, ಕಾಂಗ್ರೆಸ್ ಪಾರ್ಟಿಯಿಂದಲೂ ನಾನೂ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟನೆಯನ್ನು ನೀಡಿದ್ದಾರೆ. ಇದಕ್ಕೆ ಸಿ ಟಿ ರವಿ ಪ್ರತಿಕ್ರಿಯಸಿ ಶಿವರಾಜ್ ಕುಮಾರ್ ಮೋದಿ ಅಭಿಮಾನಿ. ದೇಶ ಎಂದು ಬಂದಾಗ ದೇಶವನ್ನು ಬಿಟ್ಟುಕೊಡದೆ ದೇಶದ ಹಿತಕ್ಕಾಗಿ ನಿಲ್ಲುತ್ತಾರೆ ಎಂದ ಅವರು ಡಿಕೆ ಶಿವಕುಮಾರ್ ಇವರನ್ನ ಆಮಂತ್ರಿಸಿದ್ದಾರೆ ಅವರ ಮೇಲೆ ಅಷ್ಟೊಂದು ಕಾಳಜಿ ಇದ್ದರೆ ಶಿವರಾಜ್ ಕುಮಾರ್ ಅವರನ್ನೇ ಯಾಕೆ ಮುಖ್ಯಮಂತ್ರಿ ಉಪ ಮುಖ್ಯಮಂತ್ರಿ ಮಾಡಬಾರದು ಮಾಡಲಿ ಎಂದು ಹೇಳಿದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g