ಶಕ್ತಿ ಯೋಜನೆ ಚಿಕ್ಕಮಗಳೂರು ರಾಜ್ಯದಲ್ಲೇ ನಂಬರ್ ಒನ್
1 min readರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆ ದಾಖಲೆ ಬರೆಯುವತ್ತ ಸಾಗಿದೆ. ಅದರಲ್ಲೂ ಮಲೆನಾಡ ತವರು ಚಿಕ್ಕಮಗಳೂರು ಜಿಲ್ಲೆ ರಾಜ್ಯದಲ್ಲೇ ಪ್ರಥಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಗ್ಯಾರೆಂಟಿ ಯೋಜನೆಗಳ ಮೂಲಕ ರಾಜ್ಯದಲ್ಲಿ ಹೊಸದೊಂದು ಭಾಷ್ಯ ಬರೆದ ಪ್ರಸ್ತುತ ರಾಜ್ಯ ಸರ್ಕಾರದ ಶಕ್ತಿ ಯೋಜನೆ ಮಹಿಳೆಯರನ್ನು ಸೂಜಿಗಲ್ಲಿನಂತೆ ಸೆಳೆದಿತ್ತು. ಅತ್ಯಂತ ಯಶಸ್ವಿ ಕಾರ್ಯಕ್ರಮ ಎಂದೇ ಬಿಂಬಿತವಾದ ರಾಜ್ಯ ಸರ್ಕಾರಿ ಬಸ್ ಉಚಿತ ಸೇವೆ ಚಿಕ್ಕಮಗಳೂರಲ್ಲಿ ದಾಖಲೆ ಬರೆದಿದೆ. ರಾಜ್ಯದಲ್ಲೇ ಮೊದಲ ಸ್ಥಾನ ಪಡೆದಿರುವ ಮಹತ್ವದ ಶಕ್ತಿ ಯೋಜನೆ ಇದೀಗ ಮಹಿಳೆಯರ ಮನೆ ಮಾತಾಗಿ . ಬರೋಬ್ಬರಿ 2 ಕೋಟಿ 94 ಲಕ್ಷ 40 ಸಾವಿರ ದಾಟಿ ಮುನ್ನುಗ್ಗುತ್ತಿರುವ ಯೋಜನೆಯ ದಾಖಲೆ ಸಂಖ್ಯೆ ಇಡೀ ರಾಜ್ಯದಲ್ಲೇ ಅತಿಹೆಚ್ಚು ಎಂದು ಗೊತ್ತಾಗಿದೆ. ಕೆ.ಎಸ್.ಆರ್.ಟಿ.ಸಿ ಕೆಂಪು ಬಸ್ ಇದೀಗ ಮಹಿಳೆಯರು ಹೆಚ್ಚಾಗಿ ಸಂಚರಿಸಿದ ದಾಖಲೆಗೂ ಪಾತ್ರವಾಗಿದೆ. ಮಲೆನಾಡ ಕೆಲ ಭಾಗಗಳಲ್ಲಿ ಸರ್ಕಾರಿ ಬಸ್ ಗಳ ಸಂಚಾರವೇ ವಿರಳ ಇರುವ ನಡುವೆಯೂ ಚಿಕ್ಕಮಗಳೂರು ಜಿಲ್ಲೆ ರಾಜ್ಯದಲ್ಲೇ ನಂಬರ್ ಒನ್ ಎಂಬ ಹೆಗ್ಗಳಿಕೆ ಹೊಂದಿದಂತಾಗಿದೆ. ಆದರೂ ಪ್ರವಾಸಿಗರ ಸ್ವರ್ಗ,, ಜೊತೆಗೆ ಧಾರ್ಮಿಕ ಕ್ಷೇತ್ರಗಳ ಬೃಹತ್ ತಾಣ ಆಗಿರುವುದು ಈ ದಾಖಲೆ ಬರೆಯಲು ಕಾರಣವಾಗಿದೆ. ಶೃಂಗೇರಿ ಹೊರನಾಡು, ಕಳಸ, ಮುಳ್ಳಯ್ಯನಗಿರಿ, ಕೆಮ್ಮಣ್ಣುಗುಂಡಿ, ಅದರಲ್ಲೂ ಧರ್ಮಸ್ಥಳ ಹೋಗಲು ಜಿಲ್ಲೆಯಿಂದಲೇ ಸಾಗಬೇಕಾಗಿರುವುದು ಈ ದಾಖಲೆ ಬರೆಯಲು ಸಾಧ್ಯವಾಗಿದೆ ಎಂದು ಹೇಳಲಾಗುತ್ತಿದೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g