ಜಿಲ್ಲೆಯ ಹಲವೆಡೆ ಮಳೆ, ಅಗತ್ಯ ವಸ್ತುಗಳ ಖರೀದಿಗೆ ಅಡ್ಡಿ
1 min readಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಗುರುವಾರ ಭಾರೀ ಮಳೆಯಾಗಿದ್ದು, ಹವಮಾನ ವೈಪರೀತ್ಯದಿಂದ ಕಾಫಿನಾಡಿನಲ್ಲಿ ಪ್ರತೀದಿನ ಸಂಜೆವೇಳೆ ನಿರಂತರ ಮಳೆ ಯಾಗುತ್ತಿದೆ. ಈ ಅಕಾಲಿಕ ಮಳೆ ಬೆಳೆಗಾರರ ನಿದ್ದೆಗೆಡಿಸಿದೆ.
ಸಂಜೆ ವೇಳೆಗೆ ಜಿಲ್ಲೆಯ ಶೃಂಗೇರಿ, ಕೊಪ್ಪ, ಮೂಡಿಗೆರೆ, ಕಳಸ, ಚಿಕ್ಕಮಗ ಳೂರು ಸುತ್ತಮುತ್ತ ಭಾರೀ ಮಳೆಯಾಗಿದೆ. ಸಂಜೆವೇಳೆ ಆರಂಭವಾದ ಮಳೆಯೂ ೨-೩ ಗಂಟೆಗಳ ಕಾಲ ನಿರಂತರವಾಗಿ ಸುರಿದಿದೆ. ಮಳೆಯ ಆರ್ಭಟಕ್ಕೆ ಚರಂಡಿ ನೀರು ರಸ್ತೆ ಮೇಲೆ ಹರಿದು ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು. ಮೂಡಿಗೆರೆ, ಕಳಸ ಹೊರನಾಡು, ಚಾರ್ಮಾರ್ಡಿಘಾಟಿ ಪ್ರದೇಶದಲ್ಲಿ ಭಾರೀ ಮಳೆಯಾ ಗುತ್ತಿದೆ. ನರಸಿಂಹರಾಜಪುರ, ಶೃಂಗೇರಿ ಕೊಪ್ಪ ಸುತ್ತಮುತ್ತ ಭಾರೀ ಮಳೆಯಾಗಿದೆ. ಬಯಲುಸೀಮೆ ತಾಲ್ಲೂಕುಗಳಾದ ಕಡೂರು ತರೀಕೆರೆ ಭಾಗದಲ್ಲಿ ಮೋಡ ಕವಿದ ವಾತ ವರಣವಿದ್ದು, ಸಾಧಾರಣ ಮಳೆಯಾಗಿದೆ.
ನಿರಂತರ ಮಳೆಯಾಗುತ್ತಿರುವುದರಿಂದ ಕೆರೆಕಟ್ಟೆ ಹಳ್ಳಕೊಳ್ಳಗಳಲ್ಲಿ ನೀರು ಹರಿಯುತ್ತಿದೆ. ಭಾ ರೀ ಮಳೆಯಿಂದ ಅಡಿಕೆ, ಕಾಫಿ, ಕಾಳುಮೆಣಸು ಸೇರಿದಂತೆ ಇತರೆ ಬೆಳೆಗಳಿಗೆ ಹಾನಿ ಯಾಗುವ ಆತಂಕ ರೈತರಲ್ಲಿ ಮನೆ ಮಾಡಿದೆ. ಜಿಲ್ಲೆಯಲ್ಲಿ ಈಗಾಗಲೇ ಅಡಿಕೆ ಮತ್ತು ಕಾಫಿಬೆಳೆ ಕೊಯ್ಲಿಗೆ ಬಂದಿದ್ದು, ರೈತರು ಮತ್ತು ಬೆಳೆಗಾರರ ನಿದ್ದೆಗೆಡಿಸುವಂತೆ ಮಾಡಿದೆ. ಮಲೆನಾಡು ಭಾಗದಲ್ಲಿ ಈಗಾಗಲೇ ಕಾಫಿ ಹಣ್ಣಾಗಿದ್ದು, ಕೊಯ್ಲಿಗೆ ಬಂದಿದೆ. ನಿರಂತರ ವಾಗಿ ಮಳೆಯಾಗುತ್ತಿರುವುದರಿಂದ ಕಾಫಿಹಣ್ಣು ಕೊಯ್ಲು ಮಾಡಲು ಸಾಧ್ಯವಾಗದೆ. ಹಣ್ಣುಗಳು ಗಿಡದಿಂದ ಉದುರು ಮಣ್ಣು ಪಲಾಗುತ್ತಿವೆ. ಮತ್ತೊಂದೆಡೆ ಅಡಿಕೆ ಬೆಳೆಗಾರರು ಅಡಿಕೆ ಕೊಯ್ಲು ಪ್ರಾರಂಭಿಸಿದ್ದು, ಬಿಸಿಲಿಲ್ಲದೆ ಅಡಿಕೆ ಒಣ ಹಾಕಲು ಸಮ ಸ್ಯೆಯಾಗುತ್ತಿದೆ. ಹವಮಾನ ವೈಪರೀತ್ಯದಿಂದ ಸುರಿಯುತ್ತಿರುವ ಮಳೆಯಿಂದ ರೈತರು ಕಂಗಲಾಗಿದ್ದಾರೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g