ಖಾಸಗಿ ಶಾಲಾ ಶಿಕ್ಷಕರ ವಿವಿಧ ಬೇಡಿಕೆಗೆ ಒತ್ತಾಯಿಸಿ ಪ್ರತಿಭಟನೆ
1 min readಚಿಕ್ಕಮಗಳೂರು: ಕೊರೋನಾ ನೆಪ ಹೇಳಿ ಖಾಸಗಿ ಶಾಲಾ ಶಿಕ್ಷಕರನ್ನ ಹಾಗೂ ಉಪನ್ಯಾಸಕರನ್ನ ಸೇವೆಯಿಂದ ವಜಾ ಮಾಡಲಾಗಿದೆ ಹಾಗೂ ವೇತನ, ಸೇವಾ ಭದ್ರತೆ ನೀಡಿಲ್ಲಈ ಕೂಡಲೇ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ನಗರದ ಅಜಾದ್ ಪಾರ್ಕ್ ನಲ್ಲಿ ಕರ್ನಾಟಕ ರಾಜ್ಯ ಖಾಸಗಿ ಶಾಲಾ ಶಿಕ್ಷಕರ ಬಳಗ ದಿಂದ ಪ್ರತಿಭಟನೆ ನಡೆಸಲಾಯಿತ್ತು.
ನಗರದ ಉಂಡೇದಾಸರ ಹಳ್ಳಿಯ ಸೆಂಟ್ ಮೇರಿಸ್ ಶಾಲೆ ಶಿಕ್ಷಕಿ ಜ್ಯೋತಿ ಎಂಬುವವರನ್ನ ಕೊರೋನಾ ನೆಪ ಹೇಳಿ ಸೇವೆಯಿಂದ ವಜಾ ಮಾಡಲಾಗಿದೆ. ಆದರೆ ಮತ್ತೆ ಸೇವೆಗೆ ಸೇರಿಸಿಕೊಂಡಿಲ್ಲ ಈಗಾಗಿ ಮತ್ತೆ ಸೇವೆಗೆ ಸೇರಿಕೊಳ್ಳುವಂತೆ ರಾಜ್ಯ ಖಾಸಗಿ ಶಾಲಾ ಶಿಕ್ಷಕರ ಬಳಗ ದಿಂದ ಒತ್ತಾಯ ಮಾಡಿದರು.
ನಗರದ ಖಾಸಗಿ ಶಾಲಾ ಶಿಕ್ಷಕರಿಗೆ ಹಾಗೂ ಉಪನ್ಯಾಸರಿಗೆ ಶಾಲಾ ಆಡಳಿತ ಮಂಡಳಿ ವಂಚನೆ ಮಾಡುತ್ತಿದೆ. ಸರಿಯಾಗಿ ವೇತನ ನೀಡುತ್ತಿಲ್ಲ, ಪಿಎಫ್ ಕೂಡ ನೀಡಿಲ್ಲ ಹಾಗೂ ಎಲ್ಲಾ ಖಾಸಗಿ ಶಾಲಾ ಶಿಕ್ಷರಿಗೆ ಸೇವ ಭದ್ರೆತೆ ನೀಡಬೇಕು. ಕೂಡಲೇ ಕ್ಷೇತ್ರ ಶಿಕ್ಷಣ ಅಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಬರ ಬೇಕೆ ಎಂದು ಕರ್ನಾಟಕ ರಾಜ್ಯ ಖಾಸಗಿ ಶಾಲಾ ಶಿಕ್ಷಕರ ಬಳಗದ ಹೋರಾಟಗಾರರು ಒತ್ತಾಯ ಮಾಡಿದರು.
ಇನ್ನು ಪ್ರತಿಭಟನೆಯಲ್ಲಿ ರಾಜ್ಯ ಗೌರವ ಅಧ್ಯಕ್ಷರು ರಂಜನ್, ರಾಜ್ಯಾಧ್ಯಕ್ಷರು ನಾಗೇಶ್, ರಾಜ್ಯ ಉಪಾಧ್ಯಕ್ಷ ಮನೋಜ್ ಸ್ವಾಮಿ, ಕಾರ್ಯದರ್ಶಿ ಅಮರೇಂದ್ರ , ಅಮ್ಮ್ ಆದ್ಮಿ ಪಕ್ಷ , ಶ್ರೀರಾಮ ಸೇನೆ ಸಂಗಘಟನೆ ಸಾಥ್ ನೀಡಿದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g