May 2, 2024

MALNAD TV

HEART OF COFFEE CITY

ಕ್ಷೇತ್ರದಲ್ಲಿ ತಡೆಹಿಡಿದಿರುವ ಅಭಿವೃದ್ಧಿಕಾಮಗಾರಿಗಳನ್ನು ಸರಕಾರ ಪುನರಾಂಭಿಸುವಂತೆ ಆಗ್ರಹಿಸಿ ಪ್ರತಿಭಟನೆ

1 min read

ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ತಡೆಹಿಡಿದಿರುವ ಅಭಿವೃದ್ಧಿಕಾಮಗಾರಿಗಳನ್ನು ಸರಕಾರ ಪುನರಾಂಭಿಸುವಂತೆ ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.ನಗರದ ತಾಲೂಕು ಕಚೇರಿ ಆವರಣದಿಂದ ಬಿಜೆಪಿ ಬಾವುಟ, ಭಿತ್ತಿ ಫಲಕಗಳನ್ನು ಹಿಡಿದ ಹಲವಾರು ಕಾರ್ಯಕರ್ತರು ಹನುಮಂತಪ್ಪ ವೃತ್ತ, ಎಂಜಿ ರಸ್ತೆ ಮೂಲಕ ಆಜಾದ ಪಾರ್ಕ್‍ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರದ ವಿರುದ್ಧ ಘೋಷಣೆ ಕೂಗಿದರು.ಮುಖಂಡ ರವೀಂದ್ರಬೆಳವಾಡಿ ಮಾತನಾಡಿ,ಹಿಂದಿನ ಸರಕಾರದ ಅವಯಲ್ಲಿ ಜಿಲ್ಲೆಯ ನೀರಾವರಿ ಯೋಜನೆಗೆ 1241 ಕೋಟಿ ರೂ.ಗಳನ್ನು ಶಾಸಕರು ಮಂಜೂರು ಮಾಡಿಸಿದ್ದಾರೆ. ಮೆಡಿಕಲ್ ಕಾಲೇಜು. ಜಲಜೀವನ್ ಮಿಷನ್ ಮತ್ತಿತರೆ ಅನೇಕ ಯೋಜನೆಗಳಿಗೆ ಅನುದಾನ ತಂದು ಕಾಮಗಾರಿ ಆರಂಭಿಸಿದ್ದರು. ಆದರೆ, ಕಾಂಗ್ರೆಸ್ ಸರಕಾರ ಕಾಮಗಾರಿ ತಡೆಹಿಡಿಯುವ ಮೂಲಕ ಅಭಿವೃದ್ಧ ವಿರೋ ಎಂಬುದನ್ನು ತೋರ್ಪಡಿಸಿದೆ ಎಂದು ಆರೋಪಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಕಲ್ಮರುಡಪ್ಪ ಮಾತನಾಡಿ, ಅಕಾರ ಮತ್ತು ಅಭಿವೃದ್ಧಿ ಮಾಡಲಿ ಎಂದು ಜನಾದೇಶ ಕೊಟ್ಟಿದ್ದಾರೆ ವಿನಾ ಕಾಮಗಾರಿ ತಡೆಯಿರಿ ಎಂದಲ್ಲ.ಜಿಲ್ಲೆಗೆ ಅನೇಕ ಕನಕ ಭವನಗಳು, ಅಂಬೇಡ್ಕರ್ ಭವನಗಳು ಮತ್ತಿತರೆ ಅಭಿವೃದ್ಧಿ ಕಾಮಗಾರಿಗಳು ಮಂಜೂರಾಗಿವೆ. ಆ ಕೆಲಸವನ್ನು ತಡೆಯಲು ನಿಮಗೆ ನೈತಿಕತೆ ಏನಿದೆ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಗ್ಯಾರಂಟಿ ಗಳ ಬಗ್ಗೆ ನಾವು ಈಗಲೇ ಹೋರಾಟಕ್ಕಿಳಿಯುವುದಿಲ್ಲ. ಸಮಯ ಕೊಡುತ್ತೇವೆ ನಂತರ ಸರಿಯಾದ ಉತ್ತರ ನೀಡುತ್ತೇವೆ ಎಂದರು.  ಮುಖಂಡರಾದ ಕೆ.ಪಿ.ವೆಂಕಟೇಶ್, ಕೋಟೆ ರಂಗನಾಥ್ ಮಧುಕುಮಾರರಾಜ್ ಅರಸ್, ನಗರಸಭೆ ಅಧ್ಯಕ್ಷ  ವರಸಿದ್ದಿವೇಣುಗೋಪಾಲ, ಈಶ್ವರಳ್ಳಿ ಮಹೇಶ್ ಮತ್ತಿತರರಿದ್ದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!