ಪ್ರೆಸ್ ಕ್ಲಬ್ ವತಿಯಿಂದ ಪತ್ರಿಕಾ ದಿನಾಚರಣೆ
1 min readಚಿಕ್ಕಮಗಳೂರು : ಮಾಧ್ಯಮ ಸೆನ್ಸೇಷನ್ ಬದಲು ಸೆನ್ಸಿಟಿವಿಟಿ ಬಗ್ಗೆ ಗಮನ ಹರಿಸುವುದು ಬಹುಮುಖ್ಯ ಹಾಗಾಗಿ ಸೆನ್ಸಷನಲ್ ಅನ್ನು ದೂರವಿಟ್ಟು ಸತ್ಯಾಂಶವನ್ನು ಅರಿತು ಕೆಲಸ ಮಾಡುವುದು ಉತ್ತಮ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎಂ.ಹೆಚ್ ಅಕ್ಷಯ್ ತಿಳಿಸಿದರು * ನಗರದ ಪ್ರೆಸ್ ಕ್ಲಬ್ ನಲ್ಲಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಸಮಾಜದಲ್ಲಿನ ಬೆಳವಣಿಗೆಗಳನ್ನು ಜಗತ್ತಿಗೆ ತಿಳಿಸುವ ಸಲುವಾಗಿ ಪತ್ರಿಕಾ ರಂಗ ಜನರ ಕಿವಿ, ಕಣ್ಣಾಗಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದರು. ಸಮಾಜದಲ್ಲಿ ಪ್ರಜಾಪ್ರಭುತ್ವದ ಮೂರು ಅಂಗಗಳಾದ ಕಾರ್ಯಾಗ, ನ್ಯಾಯಾಂಗ, ಶಾಸಕಾಂಗ ಎಷ್ಟು ಮುಖ್ಯವೋ ನಾಲ್ಕನೇ ಅಂಗವಾದ ಪತ್ರಿಕಾ ರಂಗವೂ ಅಷ್ಟೇ ಮುಖ್ಯ. ಸಮಾಜದಲ್ಲಿ ಮಾಧ್ಯಮದ ಜವಾಬ್ದಾರಿ ಹೆಚ್ಚು, ಆದರೆ ಇತ್ತೀಚ್ಚೆಗೆ ಸೆನ್ಸೆಷನಲ್ ಹೆಚ್ಚಾಗುತ್ತಿದೆ ಇದಕ್ಕೆ ಸ್ಪರ್ಧೆ ಕಾರಣ ಆ ಹಿನ್ನೆಲೆಯಲ್ಲಿ ಪತ್ರಕರ್ತರ ಮೇಲೆ ಒತ್ತಡ ಹೆಚ್ಚಾಗಿದೆ ಇದರ ನಡುವೆಯೂ ಮಾಧ್ಯಮ ಸೆನ್ಸೇಷನ್ ಬದಲು ಸೆನ್ಸಿಟಿವಿಟಿ ಬಗ್ಗೆ ಗಮನ ಹರಿಸುವುದು ಬಹುಮುಖ್ಯ ಹಾಗಾಗಿ ಸೆನ್ಸಷನಲ್ ಅನ್ನು ದೂರವಿಟ್ಟು ಸತ್ಯಾಂಶವನ್ನು ಅರಿತು ಕೆಲಸ ಮಾಡುವುದು ಉತ್ತಮ ಎಂದು ತಿಳಿಸಿದರು
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g