May 17, 2024

MALNAD TV

HEART OF COFFEE CITY

ಭಕ್ತನ ಎದೆ ಮೇಲೆ ಅಯ್ಯಪ್ಪ ದರ್ಶನ ಮಾಡಿಕೊಂಡು ಬಂದ ಪುನೀತ್ ರಾಜ್‍ಕುಮಾರ್ ಭಾವಚಿತ್ರ

1 min read

ಚಿಕ್ಕಮಗಳೂರು. ಭಕ್ತನ ಎದೆ ಮೇಲೆ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಶಬರಿಮಲೆ ಅಯ್ಯಪ್ಪ ಸ್ವಾಮಿಯ ದರ್ಶನ ಮಾಡಿಕೊಂಡು ಬಂದಿದ್ದಾರೆ. ನಗರದ ಶ್ರೀಲೇಖಾ ಥಿಯೇಟರ್ ಬಳಿ ಕ್ಯಾಂಟೀನ್ ಇಟ್ಟುಕೊಂಡು ಜೀವನ ನಿರ್ವಹಿಸುತ್ತಿರುವ ರವಿ ಅಲಿಯಾಸ್ ಅಪ್ಪು ರವಿ ತನ್ನ ಜೊತೆ ತನ್ನ ನೆಚ್ಚಿನ ನಾಯಕ ಪವರ್ ಸ್ಟಾರ್ ಪುನೀತ್‍ರನ್ನು ಕರೆದುಕೊಂಡು ಹೋಗಿದ್ದಾರೆ. ತಾನು ಅಯ್ಯಪ್ಪ ಸ್ವಾಮಿಯ ಮಾಲೆ ಧರಿಸುವಾಗಲು ಪಕ್ಕದಲ್ಲಿ ಪುನೀತ್ ಫೋಟೋ ಇಟ್ಟುಕೊಂಡೇ ಮಾಲೆ ಧರಿಸಿದ್ದಾರೆ. ಬಳಿಕ ಶಬರಿಮಲೆಗೆ ಹೋಗುವಾಗಲು ಎದೆ ಮೇಲೆ ಪುನೀತ್ ಭಾವಚಿತ್ರವನ್ನ ಎದೆ ಮೇಲೆ ಹಾಕಿಕೊಂಡೇ ಅಯ್ಯಪ್ಪನ ದರ್ಶನ ಮಾಡಿಕೊಂಡು ಬಂದಿದ್ದಾರೆ.

ಚಿಕ್ಕವಯಸ್ಸಿನಿಂದಲೂ ಅಪ್ಪುವಿನ ಅಪ್ಪಟ ಅಭಿಮಾನಿಯಾಗಿದ್ದ ರವಿಯನ್ನ ಸ್ಥಳಿಯರು ಅಪ್ಪು ರವಿ ಎಂದೇ ಕರೆಯುತ್ತಿದ್ದರು. ಸಿನಿಮಾಗಳಲ್ಲಿ ಅಪ್ಪು ಮಾಡುತ್ತಿದ್ದ ನೃತ್ಯದ ಸ್ಟೆಪ್ಸ್‍ಗಳನ್ನ ಅದೇ ರೀತಿ ಮಾಡುತ್ತಿದ್ದರು ರವಿ. ಅದಕ್ಕಾಗಿ ಡ್ಯಾನ್ಸ್ ಕ್ಲಾಸ್‍ಗೆ ಕೂಡ ಹೋಗುತ್ತಿದ್ದರು. ಅಪ್ಪುವಿಗೆ ಹೃದಯಾಘಾತದ ವಿಷಯ ತಿಳಿದು ಮಲ್ಲೇನಹಳ್ಳಿ ಗ್ರಾಮದ ಬಿಂಡಿಗ ದೇವೀರಮ್ಮನ ದೇವಸ್ಥಾನಕ್ಕೆ ಹೋಗಿ ಹರಕೆ ಕೂಡ ಕಟ್ಟಿಕೊಂಡಿದ್ದರು. ಆದರೆ, ಅಪ್ಪು ನಿಧನದ ಬಳಿಕ ಅವರ ಆತ್ಮಕ್ಕೆ ಶಾಂತಿ ಸಿಗಲಿ, ಪುನೀತ್ ಪತ್ನಿ ಅಶ್ವಿಯವರಿಗೆ ಒಳ್ಳೆಯದಾಗಲಿ ಎಂದು ಸುಮಾರು 3000 ಅಡಿ ಎತ್ತರದ ದೇವೀರಮ್ಮನ ಗುಡ್ಡಕ್ಕೆ ಹೆಗಲ ಮೇಲೆ ಸೌಧೆ ಹೊತ್ತುಕೊಂಡು ಬೆಟ್ಟ ಹತ್ತಿದ್ದರು. ತನ್ನ ಕ್ಯಾಂಟೀನ್‍ಗೆ ತನ್ನ ಮಗಳ ಹೆಸರನ್ನ ಇಟ್ಟಿದ್ದರು. ಇದೀಗ ಅಪ್ಪುವಿನ ಮೇಲಿನ ಪ್ರೀತಿ ಹಾಗೂ ಗೌರವಕ್ಕಾಗಿ ತನ್ನ ಮಗಳ ಹೆಸರನ್ನ ತೆಗೆದು ಅಪ್ಪು ಕ್ಯಾಂಟೀನ್ ಎಂದೇ ಮರುನಾಮಕರಣ ಮಾಡಿದ್ದಾರೆ.

 

ಇದೀಗ, ಶಬರಿಮಲೆ ಅಯ್ಯಪ್ಪಸ್ವಾಮಿಯ ಮಾಲೆ ಧರಿಸುವಾಗಲೂ ಪುನೀತ್ ಫೋಟೋ ಜೊತೆಯೇ ಮಾಲೆ ಧರಿಸಿ ಕೊರಳಿಗೆ ಫೋಟೋ ಹಾಕಿಕೊಂಡೇ ಅಯ್ಯಪ್ಪ ಸ್ವಾಮಿಯ ದರ್ಶನ ಮಾಡಿಕೊಂಡು ಬಂದಿದ್ದಾರೆ. ಪುನೀತ್ ರಾಜ್‍ಕುಮಾರ್ ನಿಧನದ ನಂತರ ಮಾಡಬೇಕಾದ ಕೆಲ ಧಾರ್ಮಿಕ ಕಾರ್ಯಗಳನ್ನ ರವಿ ಕೂಡ ತನ್ನ ಹೊಟೇಲ್ ಮುಂಭಾಗ ಮಾಡಿದ್ದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!