ನೂತನ ವಿಜಯಲಕ್ಷ್ಮೀ ಸಿಲ್ಕ್ ಶೋ ರೂಂ ಉದ್ಘಾಟನೆ
ಚಿಕ್ಕಮಗಳೂರು : ನಗರದ ಎಂ.ಜಿ ರಸ್ತೆ ಯಲ್ಲಿ ಇರುವ ವಿಜಯಲಕ್ಷ್ಮೀ ಸಿಲ್ಕ್ ಆಂಡ್ ಸ್ಯಾರಿಸ್ ಮಳಿಗೆಯು ಇಂದು ಅದ್ದೂರಿಯಾಗಿ ಉದ್ಘಾಟನೆಗೊಂಡಿತು.. ಎಂ.ಜಿ ರಸ್ತೆಯಲ್ಲಿರುವ ಹೆಸರಾಂತ ವರ್ಧಮಾನ್ ಸಿಲ್ಕ್ ಆಂಡ್ ಸ್ಯಾರಿ ಇವರ ಮತ್ತೊಂದು ನೂತನ ವಿಜಯಲಕ್ಷ್ಮೀ ಸಿಲ್ಕ್ ಉತ್ಸವ್ ಮಳಿಗೆಯನ್ನು ಎಂ.ಜಿ ರಸ್ತೆಯ ಗಣಪತಿ ದೇವಸ್ಥಾನದ ಎದುರು ಆರಂಬಿಸಲಾಯಿತು. ತಳಿರು ತೋರಣಗಳಿಂದ ಸಿಂಗರಿಸಿದ್ದ ವಿಜಯಲಕ್ಷ್ಮೀ ಸಿಲ್ಕ್ ಉತ್ಸವ್ ಮಳಿಗೆಯನ್ನು ಪಲ್ಲವಿ ಸಿ.ಟಿ ರವಿಯವರು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು. ಇದೇ ವೇಳೆ ಮಾತನಾಡಿದ ಪಲ್ಲವಿ ಸಿ.ಟಿ ರವಿ, ವಿಜಯಲಕ್ಮ್ಷೀ ಸಿಲ್ಕ್ ಆಂಡ್ ಸ್ಯಾರಿ ಎಂದ ಕೂಡಲೇ ಬೆಂಗಳೂರು ನೆನಪಾಗುತ್ತಿತ್ತು. ಇದೀಗ ಚಿಕ್ಕಮಗಳೂರಿನಲ್ಲಿ ಅದರ ಶಾಖೆಯನ್ನು ತೆರೆದಿರುವುದು ಖುಷಿ ನೀಡುತ್ತಿದೆ. ವ್ಯಾಪಾರ ಸಮೃದ್ಧಿಗೊಳಲ್ಲಿ ಎಂದು ಹಾರೈಸಿದರು. ನಂತರ ಮಾತನಾಡಿದ ಕವಿತಾ ಲಿಂಗರಾಜ್ ಉತ್ತಮ ರೇಷ್ಮೇ ಸೀರೆಗಳನ್ನು ಕೊಳ್ಳಬೇಕೆಂದರೆ ಬೆಂಗಳೂರು ಅಥವಾ ಮಂಗಳೂರು ಎಂದು ಹೋಗಬೇಕಿತ್ತು. ಆದರೆ ಇಂದು ಚಿಕ್ಕಮಗಳೂರಿನಲ್ಲೂ ಹೆಸರಾಂತ ಕಂಪನಿಗಳ ಸೀರೆಗಳು ಕೈಗೆಟುಕುವ ದರದಲ್ಲಿ ದೊರೆಯುತ್ತಿರುವುದು ಖುಷಿ ನೀಡಿದೆ ಎಂದರು. ನಂತರ ಮಾತನಾಡಿದ ವಿಜಯಲಕ್ಷ್ಮೀ ಸಿಲ್ಕ್ ಉತ್ಸವ್ ಮಳಿಗೆಯ ಮಾಲೀಕರಾದ ವಿನೋದ್ ಜೈನ್ ನಮ್ಮ ಅಂಗಡಿಯಲ್ಲಿ ಬನಾರಸ್, ಕಂಚಿ ಸೇರಿದಂತೆ ವಿವಿಧ ರೀತಿಯ ಅತ್ಯುತ್ತಮ ಗುಣಮಟ್ಟದ ಸೀರೆಗಳು ರಿಯಾಯಿತಿ ದರದಲ್ಲಿ ನಮ್ಮಲ್ಲಿ ಲಭ್ಯವಿದೆ ಎಂದು ಹೇಳಿದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g