May 6, 2024

MALNAD TV

HEART OF COFFEE CITY

ಉತ್ತಮ ರಸ್ತೆ ಹದಗೆಡಿಸಿದ ಗುತ್ತಿಗೆದಾರರು : ಶೀಘ್ರ ಡಾಂಬರಿಕರಣಕ್ಕೆ ಒತ್ತಾಯ

1 min read

ಚಿಕ್ಕಮಗಳೂರು : ಉತ್ತಮವಾಗಿದ್ದ ರಸ್ತೆಯನ್ನು ಕಿತ್ತು ಜಲ್ಲಿಕಲ್ಲು ಸುರಿದು ಎರಡು ತಿಂಗಳುಗಳೆ ಕಳೆದರು ಇನ್ನೂ ರಸ್ತೆ ಕಾಮಗಾರಿಗೆ ಮುಕ್ತಿ ದೊರೆಯದಿರುವುದು ಸ್ಥಳಿಯರ ಆಕ್ರೋಶಕ್ಕೆ ಕಾರಣವಾಗಿದೆ.

 ಶ್ರೀನಿವಾಸ ನಗರದ 9 ನೇ ವಾರ್ಡ್‍ನಲ್ಲಿ ಇತ್ತಿಚೆಗೆ ರಸ್ತೆ ಕಾಮಾಗಾರಿ ಹೆಸರಿನಲ್ಲಿ ಉತ್ತಮವಾಗಿದ್ದ ರಸ್ತೆಯನ್ನು ಕಿತ್ತು, ರಸ್ತೆಗೆ ಜಲ್ಲಿಕಲ್ಲು ಸುರಿದು ತಿಂಗಳು ಕಳೆದರು ಕಾಮಗಾರಿ ಮುಗಿಯುವ ಯಾವ ಲಕ್ಷಣಗಳು ಕಾಣುತ್ತಿಲ್ಲ. ಇದರಿಂದ ಸ್ಥಳಿಯ ನಿವಾಸಿಗಳಿಗೆ ತಿರುಗಾಡಲು ಕಷ್ಟವಾಗುತ್ತಿದೆ. ನಿತ್ಯ ಈ ಜಲ್ಲಿ ರಸ್ತೆಯಲ್ಲಿ ಓಡಾಡಲು ವಿಪರೀತ ಸಮಸ್ಯೆ ಎದುರಾಗಿದೆ,

 ವಾಹನಗಳು ಗುಂಡಿಗಳಲ್ಲಿ ಬೀಳುವುದು, ಪಂಚರ್ ಆಗುವುದು, ಕುಸಿಯುವುದು ಸಾಮಾನ್ಯವಾಗಿದೆ. ಸಣ್ಣ ಪುಟ್ಟ ಮಕ್ಕಳಿಗಂತು ಲಾಕ್‍ಡೌನ್ ಸಮಯ ಕಳೆಯಲು ದುಸ್ತರವಾಗಿದ್ದು ಸೈಕಲ್ ಸಂಚಾರವು ಮಾರಣಾಂತಿಕವಾಗಿದೆ. ಈಗಾಗಲೇ ಹಲವು ಮಕ್ಕಳು ಸೈಕಲ್ ನಿಂದ ಬಿದ್ದು ಪೆಟ್ಟು ಮಾಡಿಕೊಂಡು ಆಸ್ಪತ್ರೆ ಸೇರಿದ ಘಟನೆಗಳು ನಡೆದಿವೆ. ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳು ಡಾಂಬರೀಕರಣ ಮಾಡಿಕೊಡಬೇಕೆಂದು ಸ್ಥಳಿಯರು ಒತ್ತಾಯಸಿದ್ದಾರೆ. 

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!