ವಿವಿಧ ಮಠಾಧೀಶರಿಂದ ಅಯ್ಯನ ಕೆರೆಗೆ ಭಾಗಿನ ಅರ್ಪಣೆ
1 min readಚಿಕ್ಕಮಗಳೂರು : ಇತಿಹಾಸ ಪ್ರಸಿದ್ಧ ಚಿಕ್ಕಮಗಳೂರು ಜಿಲ್ಲೆಯ ಅಯ್ಯನಕೆರೆ ಭರ್ತಿಯಾಗಿ ಕೋಡಿಬಿದ್ದ ಹಿನ್ನೆಲೆ ಬಸವ ಪೀಠದ ಪೀಠಾಧ್ಯಕ್ಷರಾರ ಶ್ರೀ ಬಸವ ಮರಳಸಿದ್ಧ ಸ್ವಾಮಿ ಗಳು ಅಯ್ಯನ ಕೆರೆಗೆ ಭಾಗಿನ ಅರ್ಪಣೆ ಮಾಡಲಾಯಿತ್ತು.
ಇತಿಹಾಸ ಪ್ರಸಿದ್ಧ ಚಿಕ್ಕಮಗಳೂರು ಜಿಲ್ಲೆಯ ಸಖರಾಯಪಟ್ಟಣದ ಬಳಿಯ ಅಯ್ಯನಕೆರೆ ಭರ್ತಿಯಾಗಿ ಕೋಡಿಬಿದ್ದ ಹಿನ್ನೆಲೆ ಬಸವ ಪೀಠದ ಪೀಠಾಧ್ಯಕ್ಷರಾರ ಶ್ರೀ ಬಸವ ಮರಳಸಿದ್ಧ ಸ್ವಾಮಿ ಗಳು ಜಾತ್ಯಾತೀತವಾಗಿ ಭಾಗಿನ ಅರ್ಪಣೆಮಾಡಿದರು ಭಾಗಿನ ಅರ್ಪಿಸಿ ಮಾತನಾಡಿದ ಅವರು ದೇಹಕ್ಕೆ ಹೃದಯ ಹೇಗೆ ಮುಖ್ಯಯೋ ಅದೇ ರೀತಿ ನಾಗರೀಕ ಸಮಾಜಕ್ಕೆ ಕೆರೆಗಳು ಮುಖ್ಯ. ಹೃದಯ ದೇಹದ ಎಲ್ಲಾ ಭಾಗಕ್ಕೆ ರಕ್ತವನ್ನು ಕಳುಹಿಸುವ ಕೆಲಸ ಮಾಡುತ್ತದೆಯೋ ಅದೇ ರೀತಿ ಕೆರೆಗಳು ನಾಡಿನ ಎಲ್ಲಾ ಭಾಗಕ್ಕೂ ನೀರು ಉಣಿಸುವ ಕೆಲಸ ಮಾಡುತ್ತದೆ. ಅಯ್ಯನ ಕೆರೆ ತುಂಬುದರ ಮೂಲಕ ಈ ಕೆರೆ ಸುತ್ತಮುತ್ತಲಿನ ಭಾಗದ ಜನರಲ್ಲಿ ಹರ್ಷ ಉಂಟು ಮಾಡಿದೆ. ಒಂದು ಕೆರೆ ಭರ್ತಿ ಯಾಗುವುದರಿಂದ ಎಲ್ಲಾ ಜೀವ ರಾಶಿಗಳಿಗೂ ಚೈತನ್ಯ ತುಂಬುತ್ತದೆ. ಕೆರೆಗೆ ಅರ್ಪಿಸಿರುವ ಭಾಗಿನದಲ್ಲಿನ ಮಂಗಳ ದ್ರವ್ಯಗಳು ನಾಡಿನ ಯೋಗಕ್ಷಮ ಕಾಪಡಲಿ ಎಂದು ಪ್ರಾರ್ಥನೆ ಮಾಡಿದು. ಜೊತೆಗೆ ಎಲ್ಲಾ ಧರ್ಮದ ಗುರುಗಳ ಸಮ್ಮುಖದಲ್ಲಿ ಭಾಗಿನ ಅರ್ಪಣೆ ಮಾಡಲಾಯಿತ್ತು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g