May 16, 2024

MALNAD TV

HEART OF COFFEE CITY

ಯಾವುದೇ ಚುನಾಯಿತ ಹುದ್ದೆ ಇಲ್ಲದೆ ಹತಾಶೆಯಾಗಿರುವ ಹೆಚ್.ಡಿ. ತಮ್ಮಯ್ಯ

1 min read

ಚಿಕ್ಕಮಗಳೂರು : ಚಿಕ್ಕಮಗಳೂರಿನ ಅಭಿವೃದ್ಧಿಯ ಹರಿಕಾರರು ನಾಲ್ಕು ಬಾರಿ ಶಾಸಕರಾಗಿ, ಮಂತ್ರಿಯಾಗಿ ಚಿಕ್ಕಮಗಳೂರು ಅಭಿವೃದ್ಧಿಗೆ ಸುಮಾರು 4-5 ಸಾವಿರ ಕೋಟಿ ರೂಗಳ ವಿವಿಧ ಕಾಮಗಾರಿಗಳಿಗೆ ಅಭಿವೃದ್ಧಿ ಕೆಲಸಗಳನ್ನು ಮಾಡಿ, ಚಿಕ್ಕಮಗಳೂರಿಗೆ ಬಹು ದಿನಗಳ ಕನಸಾಗಿದ್ದ ಮೆಡಿಕಲ್ ಕಾಲೇಜು ಹಾಗೂ ಬಯಲು ಸೀಮೆಯ ಎಲ್ಲಾ ಕೆರೆಗಳಿಗೆ ನೀರನ್ನು ತುಂಬಿಸುವ ಕೆಲಸ ಆಗಿದೆ. ಚಿಕ್ಕಮಗಳೂರು ನಗರವನ್ನು ಇಡೀ ರಾಜ್ಯದಲ್ಲೇ ಮಾದರಿ ನಗರವನ್ನಾಗಿ ಮಾಡಿ ಜನರಿಂದ ಪ್ರಶಂಸೆಯನ್ನು ಪಡೆದುಕೊಂಡಿರುತ್ತಾರೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ರವಿ ಚಿಕ್ಕದೇವನೂರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಶಾಸಕರ ಜನಪ್ರಿಯತೇಯನ್ನು ಸಹಿಸಿಕೊಳ್ಳದ ಕಾಂಗ್ರೆಸ್ಸಿನ ಕೆಲವು ನಾಯಕರುಗಳು ನೆನ್ನೆ ಪತ್ರಿಕಾ ಗೋಷ್ಠಿಯಲ್ಲಿ ಭ್ರಷ್ಠಾಚಾರದ ಆರೋಪಮಾಡಿರುತ್ತಾರೆ. ಯಾವುದೇ ದಾಖಲೆಗಳನ್ನು ನೀಡದೆ, ಬೇರೆ ಯಾವುದೇ ಆರೋಪ ಮಾಡಲು ಅವರಲ್ಲಿ ವಿಷಯ ಇಲ್ಲದೇ ಕೇವಲ ಕಾಂಗ್ರೆಸ್ ಪಕ್ಷದ  ನಾಯಕರುಗಳನ್ನು ಮೆಚ್ಚಿಸಲು ಈ ಹೇಳಿಕೆಗಳನ್ನು ನೀಡಿರುತ್ತಾರೆ. ಸಿ.ಟಿ.ರವಿಯವರು ಐದನೇ ಬಾರಿಯೂ ಅತ್ಯಧಿಕ ಮತಗಳ ಅಂತರದಿAದ ಗೆಲ್ಲುತ್ತಾರೆ ಎಂದು ಆ ನಾಯಕರುಗಳಿಗೂ ಗೊತ್ತಿದೆ ಹಾಗಾಗಿ ಸೋಲಿನ ಹತಾಷೆಯಿಂದ ಮತ್ತು ಕಾಂಗ್ರೆಸ್ ಟಿಕೆಟ್ ಕೈ ತಪ್ಪುವ ಹತಾಷೆಯಿಂದ ಹೆಚ್.ಡಿ.ತಮ್ಮಯ್ಯ ಇಲ್ಲಸಲ್ಲದ ಆರೋಪ ಮಾಡಿರುತ್ತಾರೆ. ಅವರು ಕಳೆದ 15 ವರ್ಷದ ಹಿಂದೆ ನಗರಸಭೆಯ ಅಧ್ಯಕ್ಷರಾಗಿದ್ದವರು, ಇತ್ತೀಚೆಗೆ ಯಾವುದೇ ಚುನಾಯಿತ ಹುದ್ಧೆ ಇರುವುದಿಲ್ಲಾ ಆದರೂ 30 % ಕಮಿಷನ್ ಪಡೆಯುತ್ತೇನೆ ಎಂದು ಸಾರ್ವಜನಿಕವಾಗಿ ಪತ್ರಿಕೆ ಮುಂದೆ ಹೇಳಿಕೆ ಕೊಟ್ಟಿರುತ್ತಾರೆ. ಮತ್ತು ಕಾಂಗ್ರೆಸ್ ಪಕ್ಷ ಸೇರಿ ಒಂದೇ ತಿಂಗಳಾಗಿರುತ್ತದೆ.ಕಾAಗ್ರೆಸ್ ನಾಯಕರು ಬಿಜೆಪಿಯ ಏಜೆಂಟ್‌ಗಳು ಎಂದು ಹೇಳಿಕೆ ಕೊಟ್ಟಿರುತ್ತಾರೆ. ತಮ್ಮಯ್ಯನವರಿಗೆ ನೈತಿಕತೆ ಇದ್ದರೇ ಅವರು ಕಾಂಗ್ರೆಸ್ ನಾಯಕರ ಹೆಸರುಗಳನ್ನು ಬಹಿರಂಗ ಪಡಿಸಬೇಕು ಮತ್ತು ಯಾವ ಯಾವ ಡೀಲ್‌ನಲ್ಲಿ ತಾವು 30% ಕಮಿಷನ್ ಪಡೆದಿರುತ್ತೀರಿ ಎಂದು ಬಹಿರಂಗವಾಗಿ ಹೇಳಬೇಕು ಎಂದು ಆಗ್ರಹಿಸಿದರು.

ಯಾವುದೇ ಹುದ್ಧೆಇಲ್ಲದೇ 30% ಕಮಿಷನ್ ಪಡೆಯುತ್ತೇನೆ ಎಂದು ಹೇಳುವ ಇವರಿಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಚುನಾವಣೆಗೆ ಇಳಿಸಲು ಕಾಂಗ್ರೆಸ್ ಚಿಂತನೆ ಮಾಡುತ್ತಿದೆ. ಇದರಿಂದ ಗೊತ್ತಾಗುತ್ತದೆ, ಕಾಂಗ್ರೆಸ್ ಪಕ್ಷ ಎಷ್ಟು ಅವನತಿಗೆ ಇಳಿದಿದೆ ಎಂದು ಸ್ಪಷ್ಠವಾಗುತ್ತದೆ. ಯಾವುದಾದರು ಹುದ್ದೆ ಸಿಕ್ಕಿದಲ್ಲಿ ಎಷ್ಟು % ಭ್ರಷ್ಟಾಚಾರ ಮಾಡುವವರು ಎಂದು ಚಿಕ್ಕಮಗಳೂರಿನ ಜನತೆ ಅರ್ಥಮಾಡಿಕೊಳ್ಳಬೇಕಾಗುತ್ತದೆ ಎಂದು ಹೇಳಿದರು.

ಬಿಜೆಪಿಯಲ್ಲಿ ಇದ್ದಂತಹ ಸಂದರ್ಭದಲ್ಲಿ ಎರಡು ವರ್ಷಗಳಿಂದ ತಮ್ಮಯ್ಯನವರಿಗೆ ಯಾವುದೇ ಬಿಜೆಪಿಯ ಜಿಲ್ಲಾ ಕಮಿಟಿಯಲ್ಲಿ ಯಾವುದೇ ಸ್ಥಾನ ಮಾನ ಕೊಟ್ಟಿರುವುದಿಲ್ಲಾ. ಇವರು ಕಾಲಕಾಲಕ್ಕೆ ಪಕ್ಷವನ್ನು ಬದಲಿಸುವ ಪ್ರವೃತ್ತಿ ಉಳ್ಳವರು ಎಂಬ ಕಲ್ಪನೆ ಪಕ್ಷದಲ್ಲಿತ್ತು, ಆದುದರಿಂದ ಭೂತದ ಬಾಯಲ್ಲಿ ಭಗವದ್ಗೀತೆ ಕೇಳುವಚಿತಾಗಿದೆ ಆದ್ದರಿಂದ ಕಾಂಗ್ರೆಸ್ ಮುಖಂಡರು ಇವರ ಬಗ್ಗೆ ಎಚ್ಚರಿಕೆಯಿಂದ ಇರಲು ನಾವು ಸಲಹೆ ಕೊಡುತ್ತೇವೆ ಎಂದು ಹೇಳಿದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!