May 19, 2024

MALNAD TV

HEART OF COFFEE CITY

ತೆರಿಗೆ ಬಾಕಿ ಉಳಿಸಿಕೊಂಡ ಅಂಗಡಿ-ಮಳಿಗೆಗಳನ್ನು ಬಂದ್ ಮಾಡಿದ ನಗರಸಭೆ

1 min read

ಚಿಕ್ಕಮಗಳೂರು: ನಿಗದಿತ ಸಮಯಕ್ಕೆ ಮಳಿಗಳ ವಾಣಿಜ್ಯೊಧ್ಯಮ ತೆರಿಗೆಯನ್ನು ಪಾವತಿ ಮಾಡದ ಹಿನ್ನೆಲೆಯಲ್ಲಿ ನಗರಸಭೆ ಪೌರಾಯುಕ್ತ ಬಿ ಸಿ ಬಸವರಾಜ್ ನೇತೃತ್ವದಲ್ಲಿ ನಗರ ಸಭೆ ಸಿಬ್ಬಂದಿಗಳು ನಗರದ ವಿವಿದೆಡೆ ಇರುವ ಮಳಿಗೆಗಳ ಬಾಗಿಲಿಗೆ ಬೀಗ ಹಾಕಿದರು.
ನಗರದಲ್ಲಿ ತೆರಿಗೆ ಪಾವತಿ ಮಾಡದೆ ಬಾಕಿ ಉಳಿಸಿಕೊಂಡಿರುವ ಅಂಗಡಿ ಮಳಿಗೆಗಳ ಸ್ಥಳ ಪರಿಶೀಲನೆ ಮಾಡಿ ಮಾತನಾಡಿದ ನಗರಸಭೆ ಪೌರಾಯುಕ್ತ ಬಿ.ಸಿ. ಬಸವರಾಜ್ ಅವರು ಸುಮಾರು ಎರಡು ತಿಂಗಳಿಂದ ತೆರಿಗೆ ಬಗ್ಗೆ ಆಂದೋಲನಗಳನ್ನು ನಡೆಸಿ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಸಹ ಮಾಡಲಾಗಿದೆ. ಅಷ್ಟೇ ಅಲ್ಲದೆ ಮನೆಮನೆಗೂ ಹೋಗಿ ಈ ಕುರಿತು ಮಾಹಿತಿಯನ್ನು ನೀಡಿದ್ದೆವು ಎಂದರು.
ಅವರು ನಿಗದಿತ ಸಮಯದೊಳಗೆ ತೆರಿಗೆಯನ್ನು ಕಟ್ಟಿಲ್ಲದ ಹಿನ್ನಲೆ ಮಳಿಗೆಗಳಿಗೆ ಬೀಗ ಹಾಕಲಾಗಿದೆ. ಇನ್ನು ಬಾಕಿ ಇರುವಂತಹ ಮಳಿಗೆಗಳು ತೆರಿಗೆ ಕಟ್ಟದೆ ಇದ್ದರೆ ಅವುಗಳನ್ನು ಸಹ ಮುಚ್ಚಿಸಲಾಗುವುದು. ಈ ಒಂದು ತಿಂಗಳನ್ನು ಹೊರತುಪಡಿಸಿ ಇನ್ನುಳಿದ ಎಲ್ಲಾ ತೆರಿಗೆಯನ್ನು ಕಟ್ಟಬೇಕು ಇಲ್ಲದಿದ್ದರೆ ಅಂತಹ ಅಂಗಡಿ ಮಳಿಗೆಗಳನ್ನು ಮುಚ್ಚುಸಲಾಗುವುದು ನಂತರ ಅವರು ತೆರೆಯಬೇಕು ಎಂದರೆ ದಂಡ ಸಮೇತ ತೆರಿಗೆಯನ್ನು ಕಟ್ಟಿದ ನಂತರವೇ ಅದಕ್ಕೆ ಅವಕಾಶ ನೀಡಲಾಗುವುದು ಎಂದರು.
ಈ ಕುರಿತಾಗಿ ಹಲವಾರು ಬಾರಿ ಎಚ್ಚರಿಕೆಯನ್ನು ನೀಡಿದ್ದು ಮನೆ, ಆಸ್ತಿ, ನೀರಿನ ಕಂದಾಯ ಸೇರಿದಂತೆ ಟ್ರೇಡ್ ಲೈಸೆನ್ಸ್ ನನ್ನ ಕಟ್ಟಿ ಇಲ್ಲದಿದ್ದರೆ ಹಬ್ಬದ ಸಂದರ್ಭದಲ್ಲಿ ಅಂಗಡಿಗಳನ್ನು ಮುಚ್ಚಬೇಕಾಗುತ್ತದೆ ಎಂದು ಎಚ್ಚರಿಸಿದರು. ಜನರು ಹೀಗೆ ಮುಂದುವರೆಸಿದಲ್ಲಿ ಮೂಲಭೂತ ಸೌಕರ್ಯಗಳನ್ನು ನಿಲ್ಲಿಸಲಾಗುವುದು ಆದ್ದರಿಂದ ಬಾಕಿರುವಂತಹ ಎಲ್ಲ ತೆರಿಗೆಯನ್ನು ಪಾವತಿ ಮಾಡಿ ಎಂದು ಮನವಿ ಮಾಡಿದರು. 

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!