May 6, 2024

MALNAD TV

HEART OF COFFEE CITY

ದತ್ತ ಮಾಲಾಧಾರಿಗಳಿಂದ ಪಡಿ ಸಂಗ್ರಹ: ಸಂಗ್ರಹ ಪಡಿಯನ್ನ ಬಡವರಿಗೆ ನೀಡಲು ನಿರ್ಧಾರ

1 min read

ಚಿಕ್ಕಮಗಳೂರು: ಮಲೆನಾಡ ಭಾಗದ ವಿಶೇಷ ಆಚರಣೆಯಾದ ದತ್ತ ಮಾಲಾಧಾರಣೆ ಹಿನ್ನೆಲೆ, ನಗರದ ವಿಜಯಪುರದಲ್ಲಿ ಮಾಲಾಧಾರಿಗಳು ಇಂದು ಭಿಕ್ಷಾಟನೆ ಮಾಡಿದರು. ಚಿಕ್ಕಮಗಳೂರು ನಗರದಲ್ಲಿ ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿ ನೇತೃತ್ವದಲ್ಲಿ ಭಿಕ್ಷಾಟನೆ ಮಾಡಲಾಯಿತು. 15ಕ್ಕೂ ಹೆಚ್ಚು ಮಾಲಾಧಾರಿಗಳು ಮನೆಮನೆಗೆ ತೆರಳಿ ಭಿಕ್ಷಾಟನೆ ಮಾಡಿದರು.
ಶ್ರೀರಾಮ ಸೇನೆ ವತಿಯಿಂದ ಆಚರಿಸುತ್ತಿರುವ ದತ್ತಮಾಲಾ ಅಭಿಯಾನ ಹಿನ್ನಲೆ ದತ್ತ ಮಾಲಾಧಾರಿಗಳಾದ ದತ್ತ ಭಕ್ತರು ಇಂದು ರಾಜ್ಯಾದ್ಯಂತ ಮನೆಮನೆಗೆ ತೆರಳಿ ಪಡಿ ಸಂಗ್ರಹ ಮಾಡಿದರು. ರಾಜ್ಯಾದ್ಯಂತ ಪಡಿಸಂಗ್ರಹ ವೇಳೆ ಸಂಗ್ರಹವಾಗುವ ಅಕ್ಕಿ-ಬೇಳೆ-ಬೆಲ್ಲ ಸೇರಿದಂತೆ ಎಲ್ಲಾ ವಸ್ತುಗಳನ್ನು ಬಡವರಿಗೆ ಧಾನ ನೀಡುವ ಮೂಲಕ ದತ್ತನ ಕೃಪೆಗೆ ಪಾತ್ರರಾಗಲು ನಿರ್ಧಾರ ಮಾಡಿದ್ದಾರೆ.
ನಾಳೆ ದತ್ತಪೀಠದಲ್ಲಿ ದತ್ತಪಾದುಕೆ ದರ್ಶನ ಮಾಲಾಧಾರಿಗಳು ಪಡೆಯಲಿದ್ದು, ಈ ಬಾರಿ 5000ಕ್ಕೂ ಅಧಿಕ ಮಾಲಾಧಾರಿಗಳು ಸೇರುವ ನೀರಿಕ್ಷೆಯಿದೆ ಎಂದು ಶ್ರೀರಾಮಸೇನೆಯ ಮುಖಂಡರು ತಿಳಿಸಿದ್ದಾರೆ. ಅಷ್ಟೇ ಅಲ್ಲದೆ ಈ ವಿಶೇಷ ಸಂದರ್ಭದಲ್ಲಿ ಶ್ರೀರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್, ಮಹಾರಾಷ್ಟ್ರದ ಅಗೋರಿ ವಿವೇಕನಾಥ್ ಜೀ ಭಾಗಿಯಾಗಲಿದ್ದಾರೆ.

ದತ್ತಮಾಲ ಅಭಿಯಾನ : ಎಲ್ಲೆಡೆ ಭದ್ರತೆ
ಶ್ರೀರಾಮ ಸೇನೆ ವತಿಯಿಂದ ಆಚರಿಸುತ್ತಿರುವ ದತ್ತಜಯಂತಿ ವೇಳೆ ಯಾವುದೇ ಅಹಿಕರ ಘಟನೆ ನಡೆಯದಂತೆ ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಗಳು ಬಿಗಿ ಪೊಲೀಸ್ ಬಂದೋಬಸ್ತನ್ನು ಹಾಕಿದ್ದಾರೆ. ದತ್ತಮಾಲ ಅಭಿಯಾನಕ್ಕೆ ಭದ್ರತೆ ಒದಗಿಸಲು ಹೊರ ಜಿಲ್ಲೆಯ ಒಂದೂವರೆ ಸಾವಿರ ಪೊಲೀಸರನ್ನು ಕರೆಸಿಕೊಳ್ಳಲಾಗಿದೆ. 6 ಡಿವೈಎಸ್ಪಿ 20 ಇನ್ಸ್ಪೆಕ್ಟರ್ಗಳು 89 ಸಬ್ ಇನ್ಸ್ಪೆಕ್ಟರ್ 141 ಎಎಸ್ಐಗಳು 956 ಹೆಡ್ ಕಾನ್ಸ್ಟೆಬಲ್ ಮತ್ತು ಕಾನ್ಸ್ಟೆಬಲ್ಗಳು 250 ಗೃಹ ರಕ್ಷಕ ಸಿಬ್ಬಂದಿ 8 ಕೆಎಸ್ಆರ್ಪಿ ತುಕಡಿ ಮತ್ತು 12 ಸಶಸ್ತ್ರ ಮೀಸಲುಪಡೆ ತಕಡಿ ನಿಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ತಿಳಿಸಿದ್ದಾರೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!