May 4, 2024

MALNAD TV

HEART OF COFFEE CITY

ನಗರ ಠಾಣೆಯಿಂದ ಮಾಸಿಕ ಬೀಟ್ ಸಭೆ

1 min read

ಚಿಕ್ಕಮಗಳೂರು : ಪ್ರತಿ ತಿಂಗಳoತೆ ಈ ಬಾರಿಯು ಮಾಸಿಕ ವಾರ್ಡ್ ಬೀಟ್ ಸಭೆಯನ್ನು ನಗರ ಪೊಲೀಸ್ ಠಾಣೆ ವತಿಯಿಂದ ಡಾ|| ಬಿ.ಆರ್ ಅಂಬೇಡ್ಕರ್ ಭವನ ದಲ್ಲಿ ಆಯೋಜಿಸಲಾಗಿತ್ತು. ಈ ವೇಳೆ ಸಾರ್ವಜನಿಕರು ತಮ್ಮ ಕುಂದುಕೊರತೆಗಳನ್ನು ಹೇಳಿಕೊಂಡರು.

 

ಹೆಚ್ಚುವರಿ ಪೊಲೀಸ್ ಅಧಿಕ್ಷಕರಾದ ಕೃಷ್ಣಮೂರ್ತಿ ಅಧ್ಯಕ್ಷತೆಯಲ್ಲಿ ನಡೆದ 23 ನೇ ವಾರ್ಡ್, 24 ನೇ ವಾರ್ಡ್, 25 ನೇ ವಾರ್ಡ್, 26 ನೇ ವಾರ್ಡ್, 30 ನೇ ವಾರ್ಡ್ಗಳ ಬೀಟ್ ಸಭೆಯನ್ನು ಆಯೋಜಿಸಲಾಗಿತ್ತು. ಸಭೆಯಲ್ಲಿ ವಾರ್ಡ್ಗಳ ಬೀಟಿಗೆ ಹೊಸದಾಗಿ ನಿಯೋಜಿಸಿರುವ ಪೊಲೀಸ್ ಸಿಬ್ಬಂದಿಗಳು ತಮ್ಮ ಪರಿಚಯವನ್ನು ಮಾಡಿಕೊಂಡರು. ಈ ವೇಳೆ ತಮ್ಮ ಕುಂದುಕೊರತೆ ಹೇಳಿಕೊಂಡ ಸಾರ್ವಜನಿಕರು ಕೂಲಿಕಾರ್ಮಿಕರು ವಾಸ ಮಾಡುವ ಪ್ರದೇಶಗಳಾದ ಶಾಂತಿನಗರ, ಶಂಕರಪುರ, ಲಕ್ಮೀಶ ನಗರ ಸೇರಿದಂತೆ ಡಾ|| ಬಿ.ಆರ್ ಅಂಬೇಡ್ಕರ್ ರಸ್ತೆಗೆ ಹೊಂದಿಕೊoಡoತೆ ಇರುವ ಪ್ರದೇಶಗಳಲ್ಲಿ ಅಕ್ರಮ ಮಧ್ಯ ಮಾರಾಟ, ಯುವಕರು ವೈಟ್‌ನರ್, ಗಮ್ ಗಳಿಗೆ ದಾಸರಾಗಿದ್ದು, ಇವರ ಹಾವಳಿ ಮಿತಿ ಮೀರಿದೆ, ಸನಗರ ಪೊಲೀಸ್ ಠಾಣೆಯ ಹಿಂಭಾಗದ ಶಾಂತಿನಗರದಲ್ಲಿ ನಕಲಿ ಮದ್ಯ ಮಾರಾಟ ಹಾವಳಿ, ಹೈ ಬೀಮ್ ಲೈಟ್, ವಾಹನಗಳ ಕರ್ಕಶ ಹಾರನ್‌ಗಳು ಸೇರಿದಂತೆ ಕಟ್ಟೆಚ್ಚರ ಸ್ಥಳಗಳಲ್ಲಿ ಸಿ.ಸಿ ಟಿವಿ ಅಳವಡಿಸುವಂತೆ ಹೇಳಿದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!