ಮಾರ್ಚ್ 14 ಮತು 15 ರಂದು ಬಸವತತ್ವ ಸಮಾವೇಶ
1 min readಚಿಕ್ಕಮಗಳೂರು : ಲಿಂಗೈಕ್ಯ ಚಂದ್ರಶೇಖರ ಮಹಾಸ್ವಾಮಿಗಳವರ 166 ನೇ ಜಯಂತಿ ಹಾಗೂ ಲಿಂಗೈಕ್ಯ ಜಯಚಂದ್ರಶೇಖರ ಮಹಾಸ್ವಾಮಿಗಳ 25 ನೇ ಸಂಸ್ಮರಣೆಯ ಅಂಗವಾಗಿ ಮಾರ್ಚ್ 14 ಹಾಗೂ 15 ರಂದು ಬಸವತತ್ವ ಸಮಾವೇಶವನ್ನು ಕಲಾಣ ನಗರದಲ್ಲಿರುವ ಬಸವ ಮಂದಿರದಲ್ಲಿ ನಡೆಸಲಾಗುವುದು ಎಂದು ಮಠದ ಭಕ್ತರಾದ ಹೆಚ್.ಡಿ ತಮ್ಮಯ್ಯ ಹೇಳಿದ್ರು
ಸುದ್ದಿಗೋಷ್ಠಿಯ ನಂತರ ಮಾತನಾಡಿದ ಅವರು ಬಸವತತ್ವ ಸಮಾವೇಶದಲ್ಲಿ ಮಾರ್ಚ್ 14 ರಂದು ಸಾಂಸ್ಕೃತಿಕ ಕಾರ್ಯಕ್ರಮ, ಹಾಗೂ ಮಾರ್ಚ್ 15 ರಂದು ಬಸವತತ್ವ ಸಮಾವೇಶ ಹಾಗೂ ಬಸವತತ್ವ ಪೀಠದ ಪೀಠಾಧ್ಯಕ್ಷರದ ಡಾ|| ಬಸವ ಮರುಳಸಿದ್ಧ ಸ್ವಾಮಿಗಳಿಗೆ ಭಕ್ತರಿಂದ ಬಿನ್ನವತ್ತಳೆ ಸಮರ್ಪಣೆ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದ್ರು.
ಸುದ್ದಿಗೋಷ್ಠಿಯಲ್ಲಿ ಸ್ವಾಗತ ಸಮಿತಿಯ ಅಧ್ಯಕ್ಷರಾದ ಬಿ.ಜಿ ಸೋಮಶೇಖರಪ್ಪ, ಬಸವತತ್ವ ಪೀಠದ ಹಿರಿಯ ಟ್ರಸ್ಟಿಗಳಾದ ಮಲ್ಲೇಗೌಡ, ವಿಜಯ್ಕುಮಾರ್, ಪಿ.ಹೆಚ್ ರವಿ, ಉಮೇಶ್ ಉಪಸ್ಥಿತರಿದ್ದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g