ದಾಖಲೆ ಇದ್ದ ಮನೆಗಳನ್ನು ತೆರೆವುಗೊಳಿಸಿದರೆ ಮನೆಗಳನ್ನು ಕಟ್ಟಿಕೊಡುತ್ತೇವೆ -ಸಿ.ಟಿ ರವಿ
1 min readಚಿಕ್ಕಮಗಳೂರು: ನಗರಸಭೆಯಿಂದ ದಾಖಲೆ ಇದ್ದ ಮನೆಗಳನ್ನು ತೆರವುಗೊಳಿಸಿದ್ದರೇ ಮನೆ ಗಳನ್ನು ಕಟ್ಟಿಕೊಡುತ್ತೇವೆ. ಒಂದು ವೇಳೆ ದಾಖಲೆ ಇಲ್ಲದಿದ್ದರೇ ಪ್ರತಿಭಟನೆ ನಡೆಸಿದವರು ಸಾರ್ವಜನಿಕ ಕ್ಷಮೆ ಕೇಳಬೇಕು ಎಂದು ಶಾಸಕ ಸಿ.ಟಿ.ರವಿ ಸವಾಲು ಹಾಕಿದರು.ನಗರದಲ್ಲಿ ಸುದ್ದಿಗಾರರ ಜೊತೆ ಇಂದಿರಾಗಾಂಧಿ ಬಡಾವಣೆಯಲ್ಲಿ ನಗರಸಭೆ ಯಿಂದ ಅಕ್ರಮ ಮನೆಗಳ ತೆರೆವು ಕಾರ್ಯಾಚರಣೆ ಸಂಬಂಧ ಮಾತನಾಡಿದ ಅವರು, ದಾಖಲೆಗಳಿದ್ದರೇ ನ್ಯಾಯಲಯಕ್ಕೆ ಹೋಗಬಹುದು ಎಂದರು.19ವರ್ಷಗಳಿಂದ ನಾನೇ ಶಾಸಕನಾಗಿದ್ದೇನೆ ದಾಖಲೆ ಇದ್ದರೇ ಯಾಕೆ ತೆರವುಗೊಳಿಸು ತ್ತಾರೆ. ಅವ್ಯವಹಾರ ನಡೆಸಲು ಕಾಂಗ್ರೆಸ್ಗೆ ಬಿಡಬೇಕಾ ಎಂದು ಪ್ರಶ್ನಿಸಿದ ಅವರು ದುಡ್ಡು ಪಡೆದು ಅಕ್ರಮವಾಗಿ ಮನೆಕಟ್ಟಲು ಬಿಡಬೇಕಾ? ದಾಖಲೆ ಇದ್ದರೇ ಕೊಡಲಿ ಮನೆ ಕಟ್ಟಿಸಿಕೊಡುತ್ತೇ ವೆಂದು ತಿರುಗೇಟು ನೀಡಿದರು.
ದಾಖಲೆ ಇದ್ದು ಮನೆ ಕೆಡವಿದ್ದರೇ ಮನೆ ಕಟ್ಟಿಸಿಕೊಡುವ ಜವಬ್ದಾರಿ ನನ್ನದು ಒಂದು ವೇಳೆ ದಾಖಲೆ ಇಲ್ಲದಿದ್ದರೇ ಚಳುವಳಿ ಮಾಡಿದವರು ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು. ಅಕ್ರಮಕ್ಕೆ ಬೆಂಬಲ ನೀಡುವ ಕೆಲಸ ಯಾರು ಮಾಡಬಾರದು ಎಂದರು.
1,511 ಮನೆಗಳನ್ನು ನಗರದಲ್ಲಿ ಜಿ-ಪ್ಲೇಸ್ 2 ಮಾದರಿಯಲ್ಲಿ ಮನೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. 700 ನಿವೇಶನಗಳನ್ನು ಜನರಿಗೆ ನೀಡಿದ್ದೇವೆ. ದಾಖಲೆ ಇದ್ದವರ ಮನೆ ಗಳನ್ನು ಒಡೆದಿಲ್ಲ. ನಾವು ಯಾರನ್ನು ಟಾಗೇರ್ಟ್ ಮಾಡುತ್ತಿಲ್ಲ, ಎಲ್ಲಾರನ್ನು ಸಮಾನವಾಗಿ ಕಾಣುತ್ತಿದ್ದೇವೆ. ಟಾಗೇರ್ಟ್ ಮಾಡುವುದಿದ್ದರೇ 19 ವರ್ಷಗಳು ಬೇಕಿತ್ತಾ ಎಂದು ಪ್ರಶ್ನಿಸಿದ ಅವರು, ಈ ಸಂಬಂಧ ಸಮಗ್ರ ತನಿಖೆ ನಡೆಸುವಂತೆ ನಗರಸಭೆ ಅಧ್ಯಕ್ಷರಿಗೆ ತಿಳಿಸಿದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g