37 ಕೆರೆ ಹೂಳೆತ್ತದೆ ಹಣ ಡ್ರಾ ಮಾಡಿಕೊಂಡಿದ್ದ ಇಂಜಿನಿಯರ್ ಅಮಾನತು
1 min read
: ಸರ್ಕಾರಕ್ಕೆ ಹಣ ವಾಪಸ್ ಹೋಗುತ್ತೆ ಎಂದು 37 ಕೆರೆಯ ಊಳೆತ್ತದೆ ಹಣ ಡ್ರಾ ಮಾಡಿಕೊಂಡಿದ್ದ ಅಧಿಕಾರಿಯನ್ನ ಜಿಲ್ಲಾ ಪಂಚಾಯಿತಿ ಸಿಇಓ ಅಮಾನತು ಮಾಡಿ ಆದೇಶ ಮಾಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನಲ್ಲಿ ಪಂಚಾಯರ್ ರಾಜ್ ಇಲಾಖೆಯ 37 ಕೆರೆಗಳಿಗೆ ಅಭಿವೃದ್ಧಿಗೆ ಜಿಲ್ಲಾ ಪಂಚಾಯಿತಿ ಗ್ರ್ಯಾಂಟ್ನಲ್ಲಿ ಹಣ ಮಂಜೂರಾಗಿತ್ತು. ಅದರೆ, ಪಂಚಾಯತ್ ರಾಜ್ ಇಲಾಖೆ ಸರ್ಕಾರಕ್ಕೆ ಹಣ ವಾಪಸ್ ಹೋಗುತ್ತೆ ಎಂದು ಕೆಲಸವನ್ನೇ ಮಾಡದ ಗುತ್ತಿಗೆದಾರನ ಅಕೌಂಟ್ಗೆ ಹಣವನ್ನ ಜಮೆ ಮಾಡಿದ್ದರು. ಅವ್ಯವಹಾರದ ವಿಷಯ ತಿಳಿದ ಜಿಲ್ಲಾ ಪಂಚಾಯಿತಿ ಸಿಇಓ ಪ್ರಭು ತಾಲೂಕು ಪಂಚಾಯಿತಿ ಇಓ ನಯನಾಗೆ ಸ್ಥಳ ಪರಿಶೀಲನೆ ನಡೆಸಿ ವರದಿ ನೀಡುವಂತೆ ಸೂಚಿಸಿದ್ದರು. ಮೊದಲ ಏಳು ಕೆರೆಗಳ ಸ್ಥಳ ಪರಿಶೀಲನೆ ನಡೆಸಿದ ತಾಲೂಕು ಪಂಚಾಯಿತಿ ಇಓ ನಯನಾಗೆ ಅಕ್ರಮದ ಅರಿವಾಗಿದೆ. ನಯನಾ ವರದಿ ಅನ್ವಯ ಸಿಇಓ ಪ್ರಭು ಪಂಚಾಯತ್ ರಾಜ್ ಇಲಾಖೆಯ ಎಇಇ ಮಂಜುನಾಥ್ ಎಂಬುವರನ್ನ ಅಮಾನತು ಮಾಡಿ ಆದೇಶ ಮಾಡಿದ್ದಾರೆ. 37 ಕೆರೆಗಳ ಪೈಕಿ ಸುಮಾರು 20 ಕೆರೆಗಳ ಬಳಿ ದಾಖಲೆಗಾಗಿ ಜೆಸಿಬಿ ಹಾಗೂ ಟ್ರ್ಯಾಕ್ಟರ್ ನಿಲ್ಲಿಸಿ ಫೋಟೋ ತೆಗೆಸಿದ್ದರು. ಇನ್ನುಳಿದ ಸುಮಾರು 17 ಕೆರೆಗಳ ಬಳಿ ಹೋಗೇ ಇರಲಿಲ್ಲ.
ಕೆರೆ ಬಳಿ ರೈತರು ತೋಡಿದ ಗುಂಡಿಗಳನ್ನೂ ನಾವೇ ತೋಡಿದ್ದು ಎಂದು ಅದನ್ನೇ ದಾಖಲೆ ಮಾಡಿ ಬಿಲ್ ಮಾಡಿಕೊಂಡಿದ್ದರು 37 ಕೆರೆಗಳ ಅಭಿವೃದ್ಧಿಗೆಂದು ಸುಮಾರು 25 ಲಕ್ಷಕ್ಕೂ ಹೆಚ್ಚು ಹಣ ಬಿಡುಗಡೆಯಾಗಿತ್ತು. ಆದರೆ, ಅಧಿಕಾರಿಗಳು ಸರಿಯಾದ ಕೆಲಸವನ್ನೇ ಮಾಡದೇ ಹಣ ಡ್ರಾ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಸಾಭೀತಾದ ಹಿನ್ನೆಲೆ ಸಿಇಓ ಎಇಇ ಮಂಜುನಾಥ್ರನ್ನ ಅಮಾನತು ಮಾಡಿದ್ದಾರೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g