May 17, 2024

MALNAD TV

HEART OF COFFEE CITY

ಈಚಲು ಮರದಲ್ಲಿ ಗಣಪತಿ ಉದ್ಭವ

1 min read

ಈಚಲು ಮರದಲ್ಲಿ ಗಣಪ ಉದ್ಭವವಾಗಿರೋದನ್ನ ಕಂಡು ಚಿಕ್ಕಮಗಳೂರಿನ ಜನ ಮೂಕವಿಸ್ಮಿತರಾಗಿದ್ದಾರೆ. ಚಿಕ್ಕಮಗಳೂರು ನಗರದ ಪಟಾಕಿ ಗ್ರೌಂಡ್ನ ಪಕ್ಕದಲ್ಲಿರೋ ಒಂದು ಹೊಲದ ಬಳಿ ಗಣಪನನೇ ಹೋಲುವ ಸೊಂಡಿಲ, ಕಣ್ಣು, ಕೈಗಳು, ದೇಹ ಎಲ್ಲವನ್ನೂ ನೋಡಿದ ಜನರು ಈಚಲು ಮರದಲ್ಲಿ ಗಣಪ ದರ್ಶನ ಕೊಟ್ಟಿರುವುದನ್ನ ಕಂಡು ಸಂತಸಗೊಂಡಿದ್ದಾರೆ. ಗಣಪನಿಗೆ ಪೂಜೆ ಸಲ್ಲಿಸಲು ಪ್ರಾರಂಭಿಸಿ, ತಮ್ಮ ಪ್ರಾರ್ಥನೆಗಳನ್ನ ಗಣೇಶನಿಗೆ ಸಲ್ಲಿಸಿದ್ದಾರೆ. ತಾವು ಅಂದುಕೊಂಡಿದ್ದೆಲ್ಲಾ ನೆರವೇರಿದ ಮೇಲೆ ಈ ಉದ್ಭವ ಗಣಪನ ಮೇಲೆ ಮತ್ತಷ್ಟು ಭಕ್ತಿ ಹೆಚ್ಚಾಗಿದೆ. ಇದೀಗ ದಿನನಿತ್ಯ ಗಣಪನಿಗೆ ಪೂಜೆ ಸಲ್ಲಿಸೋ ಭಕ್ತರು, ಈಚಲು ಮರದ ಗಣಪನಿಗೆ ಉಘೇ ಉಘೇ ಅನ್ನುತ್ತಿದ್ದಾರೆ

 

 

. ಈಚಲು ಮರದಲ್ಲಿ ಗಣೇಶ ದರ್ಶನ ಕೊಟ್ಟಿರುವುದು ಸ್ಥಳೀಯರಿಗೆ ನಿಜಕ್ಕೂ ಅಚ್ಚರಿ ತಂದಿದೆ. ಗಣೇಶನಿಗೆ ಕೈ ಮುಗಿಯಬೇಕು ಅಂತಾ ದೇವಸ್ಥಾನಗಳನ್ನ ಹುಡುಕಿಕೊಂಡು ಹೋಗುತ್ತಿದ್ದವರಿಗೆ ಇದೀಗ ಈಚಲು ಮರದ ಗಣೇಶನ ಸ್ಥಳ ಅಚ್ಚರಿ ಜೊತೆಗೆ ಸಂತಸ ಮೂಡಿಸಿದೆ. ಕಂಪ್ಲೀಟ್ ಗಣೇಶನ ಹೋಲುವ ಮೂರ್ತಿಯನ್ನ ನೋಡಿ ಜನರು ತಾ ಮುಂದು, ನಾ ಮುಂದು ಅಂತಾ ಪೂಜೆ ಮಾಡ್ತಿದ್ದಾರೆ, ಬೇಡಿಕೊಂಡ ಪ್ರಾರ್ಥನೆಗಳು ಫಲಿಸಲಿ ಅಂತಾ ಬೇಡಿಕೊಳ್ತಿದ್ದಾರೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!