May 2, 2024

MALNAD TV

HEART OF COFFEE CITY

ಮಳೆಗಾಲದಲ್ಲಿ ಟಿಂಬರ್ ಸಾಗಾಟಕ್ಕೆ ಬ್ರೇಕ್ ಹಾಕುವಂತೆ ಸ್ಥಳೀಯರ ಒತ್ತಾಯ,

1 min read

ಚಿಕ್ಕಮಗಳೂರು : ಕಳೆದ ಮೂರ್ನಾಲ್ಕು ವರ್ಷಗಳಿಂದ ಮಳೆ ಅಬ್ಬರಕ್ಕೆ ಕಾಫಿನಾಡು ಅಕ್ಷರಶಃ ಕಂಗಾಲಾಗಿದೆ. ಬೆಟ್ಟಗುಡ್ಡಗಳ ಕುಸಿತಕ್ಕೆ ಎಗ್ಗಿಲ್ಲದೆ ಮರಗಳನ್ನ ಕಡಿದು ಜೆಸಿಬಿ-ಇಟಾಚಿಗಳಲ್ಲಿ ಕೆಲಸ ಮಾಡಿದ್ದೇ ಕಾರಣ ಭೂ ವಿಜ್ಞಾನಿಗಳು ಅಭಿಪ್ರಾಯ ಕೂಡ ಪಟ್ಟಿದ್ರು, ಹಾಗಾಗಿ ಮಳೆಗಾಲ ಮುಗಿಯೋವರೆಗೂ ಟಿಂಬರ್ ಸಾಗಾಟಕ್ಕೆ ಬ್ರೇಕ್ ಹಾಕಬೇಕೆಂದು ಜಿಲ್ಲಾಡಳಿತಕ್ಕೆ ಸ್ಥಳೀಯರು ಮನವಿ ಮಾಡಿದ್ದಾರೆ.ಮಲೆನಾಡಿನಾದ್ಯಂತ ಮರಗಳನ್ನ 8-10-12 ಚಕ್ರದ ಲಾರಿಗಳಲ್ಲಿ ಸಾಗಿಸಿದ್ರೆ ಮಳೆಗಾಲದಲ್ಲಿ ರಸ್ತೆ ಹಾಳಾಗುತ್ತವೆ ಎಂಬುದು ಪರಿಸರವಾದಿಗಳ ಅಭಿಪ್ರಾಯವಾಗಿದ್ದು ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆ ಮಲೆನಾಡು ಭಾಗದ ಯಾವುದೇ ಭಾಗದಲ್ಲಾಗಲಿ, ಯಾವುದೇ ಜಾಗದಲ್ಲಾಗಲಿ ಮಳೆಗಾಲದಲ್ಲಿ ಮರಗಳನ್ನ ಕಡಿದು ಸಾಗಾಟ ಮಾಡಲು ಸಂಪೂರ್ಣ ಬ್ರೇಕ್ ಹಾಕುವಂತೆ ಪರಿಸರವಾದಿಗಳು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

 

ಇನ್ನು ಮಳೆಗಾಲದಲ್ಲಿ ಭಾರೀ ಗಾತ್ರದ ಮರಗಳನ್ನ ಕಡಿಯುವುದರಿಂದ ಭೂಮಿಯ ತೇವಾಂಶ ಹೆಚ್ಚಾಗಿ ಬೆಟ್ಟ-ಗುಡ್ಡ-ರಸ್ತೆಗಳು ಬಿರುಕು ಬಿಡುವ ಸಾಧ್ಯತೆಯೂ ಇದೆ. ಬೆಟ್ಟ-ಗುಡ್ಡ-ಭೂಕುಸಿತಕ್ಕೆ ಕಾರಣವಾಗಬಹುದು. ಜೊತೆಗೆ, ಅತ್ಯಂತ ತೂಕದ ಕಾಡುಜಾತಿಯ ಮರಗಳನ್ನ ದೊಡ್ಡ-ದೊಡ್ಡ ಲಾರಿಗಳಲ್ಲಿ ಸಾಗಿಸುವುದು ಅಪಾಯವನ್ನ ಆಹ್ವಾನಿಸುವಂತೆ. ಇದರಿಂದ ರಸ್ತೆಗಳು ಡ್ಯಾಮೇಜ್ ಆಗಬಹುದು. ಗ್ರಾಮೀಣ ಭಾಗದ ಸಣ್ಣ-ಸಣ್ಣ ಸೇತುವೆಗಳು ಕೂಡ ಬಿರುಕು ಬಿಡಬಹುದು ಎಂಬುದು ಮಲೆನಾಡಿಗರ ಅಭಿಪ್ರಾಯವಾಗಿದ್ದು ಇದಕ್ಕೆ ಬ್ರೇಕ್ ಹಾಕಬೇಕು ಅಂತಾ ಒತ್ತಾಯ ಮಾಡಿದ್ದಾರೆ. ಇಷ್ಟು ದಿನ ಅನುಭವಿಸಿದ್ದೇ ಸಾಕು. ಮತ್ತೆ ಬೆಟ್ಟ-ಗುಡ್ಡ-ರಸ್ತೆ ಕುಸಿಯುವ ಪರಿಸ್ಥಿತಿ ಬರಬಹುದು. ಅದು ಬರುವುದು ಬೇಡ. ಹಾಗಾಗಿ, ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆ ಮಲೆನಾಡು ಭಾಗದ ಯಾವುದೇ ಭಾಗದಲ್ಲಾಗಲಿ, ಯಾವುದೇ ಜಾಗದಲ್ಲಾಗಲಿ ಮಳೆಗಾಲದಲ್ಲಿ ಮರಗಳನ್ನ ಕಡಿದು ಸಾಗಾಟ ಮಾಡಲು ಸಂಪೂರ್ಣ ಬ್ರೇಕ್ ಹಾಕುವಂತೆ ಮಲೆನಾಡಿಗರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

 

ಅರಣ್ಯ ಇಲಾಖೆ ವತಿಯಿಂದ ಅನುಮತಿ ಪಡೆದು ಸಾಗಿಸೋ ಮರಗಳನ್ನು ನಿಲ್ಲಿಸುವಂತೆ ಸೂಚಿಸುವಂತೆ ಅರಣ್ಯಾಧಿಕಾರಿಗಳು ಸೂಚನೆ ನೀಡಿದರು ಟಿಂಬರ್ ಸಾಗಾಟ ನಿಂತಿಲ್ಲ ಅನ್ನೋದು ಸಾರ್ವಜನಿಕರ ಪ್ರಶ್ನೆಯಾಗಿದೆ. ಅನುಮತಿ ಇಲ್ಲದೇ ಸಾಗಿಸೋ ಮರಗಳನ್ನ ಕಡಿಯೋದನ್ನ ನಿಲ್ಲಿಸೋಕೆ ಜಿಲಾಧಿಕಾರಿಗಳೇ ಸದ್ಯಕ್ಕೆ ಮೊಟಕುಗೊಳಿಸುವುದುಕ್ಕೆ ಆದೇಶ ಮಾಡುಬೇಕಿದೆ..

ಒಟ್ಟಾರೆ, ಕಾಫಿನಾಡಲ್ಲಿ ಮುಂಗಾರು ಚುರುಕುಗೊಂಡಿದೆ. ಮಲೆನಾಡು ಭಾಗದಲ್ಲಿ ಅಲ್ಲಲ್ಲೇ ಮಳೆ ಅಬ್ಬರವೂ ಜೋರಿದೆ. ಈ ಮಧ್ಯೆ ಕಳೆದ ಮೂರ್ನಾಲ್ಕು ವರ್ಷದ ಅನಾಹುತಗಳನ್ನ ನೋಡಿದರೆ ಮರಗಳನ್ನ ಕಡಿದು ಸಾಗಿಸೋದು ಸೂಕ್ತವಲ್ಲ ಅನ್ನೋದು ಸ್ಥಳಿಯರ ವಾದ. ಭೂಮಿಯ ಮಣ್ಣು ಸಡಿಲಗೊಳ್ಳುತ್ತೆ. ಮಣ್ಣನ್ನ ಹಿಡಿದಿರೋ ಮರಗಳೇ ಇಲ್ಲದಂತಾದರೆ ಬಹುಶಃ ಅಪಾಯ ಕಟ್ಟಿಟ್ಟ ಬುತ್ತಿ ಅನ್ನಿಸುತ್ತೆ. ಶತಮಾನಗಳಿಂದ ಕಾಡಿನಲ್ಲೇ ಬದುಕಿರೋರ ಊಹೆ ಸುಳ್ಳಾಗಲ್ಲ. ಹಳೆಯ ಅನಾಹುತಗಳಿಗೆ ಇನ್ನೂ ಸಮರ್ಪಕವಾದ ಪರಿಹಾರ ಸಿಕ್ಕಿಲ್ಲ. ಹಾಗಾಗಿ, ಸರ್ಕಾರ ಟಿಂಬರ್ ಸಾಗಾಟಕ್ಕೆ ಸಂಪೂರ್ಣ ಬ್ರೇಕ್ ಹಾಕುವುದು ಪ್ರಕೃತಿಯನ್ನ ಉಳಿಸೋ ನಿಟ್ಟಿನಲ್ಲಿ ಸೂಕ್ತ ಅನ್ನಿಸುತ್ತೆ…..

 

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!