May 17, 2024

MALNAD TV

HEART OF COFFEE CITY

ಶ್ರೀ ಸಾಯಿ ಏಂಜ ಲ್ಸ್ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ಜಿಲ್ಲೆಗೆ ಪ್ರಥಮಸ್ಥಾನ

1 min read

ಚಿಕ್ಕಮಗಳೂರು: ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶದಲ್ಲಿ ಸಿರ್ಗಾಪುರ ಶ್ರೀ ಸಾಯಿ ಏಂಜ ಲ್ಸ್ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ಎಂ.ಎಸ್.ಶರಣ್ಯ ವಿಜ್ಞಾನ ವಿಭಾಗದಲ್ಲಿ ಜಿಲ್ಲೆಗೆ ಪ್ರಥಮಸ್ಥಾನ ಪಡೆದಿದ್ದಾರೆ.ಸರ್ಕಾರಿ ಶಾಲೆ ದೈಹಿಕ ಶಿಕ್ಷಕ ಶಂಕರೇಗೌಡ ಹಾಗೂ ಖಾಸಗಿಶಾಲೆ ಶಿಕ್ಷಕಿ ಪ್ರಮೀಳಾ ಪುತ್ರಿ ಎಂ.ಎಸ್.ಶರಣ್ಯ ಭೌತಶಾಸ್ತ್ರ, ಜೀವಶಾಸ್ತ್ರ, ರಸಾಯನಶಾಸ್ತ್ರ ಹಾಗೂ ಗಣಿತದಲ್ಲಿ ನೂರಕ್ಕೆ ನೂರು ಅಂಕ, ಕನ್ನಡ 99, ಇಂಗ್ಲೀಷ್‍ನಲ್ಲಿ 95 ಸೇರಿದಂತೆ 600ಕ್ಕೆ 594 ಅಂಕಪಡೆದು ಜಿಲ್ಲೆಗೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ.
ಆಂಡ್ರಿಯಾ ಸಿಯಾನವಾಸ್, ಮೇದಶ್ರೀ ಎಂ ಜೋಯಿಸ್, ಕೆ.ವರ್ಷಿಣಿ 590 ದ್ವಿತೀಯ, ಸಿ.ಎಂ.ಘಾನಶ್ರೀ, ಎ.ಎನ್.ಕನ್ನಿಕಾ, ಮಿಸಬ್ ಕುನೈನ್, ಎಚ್.ಆರ್.ಯಶಸ್ವಿನಿ 587 ತೃತೀಯ, ಅರ್ಜುನ್ ಕೆ. ಪ್ರಸಾದ್, ಬಿ.ಎ.ಸುಜನ್ 585, ವಾಣಿಜ್ಯ ವಿಭಾಗದಲ್ಲಿ ಎ. ಎಸ್.ಸ್ಪಂದನಾ 585 ಅಂಗಳಿಸಿದ್ದಾರೆ.

ಸಂಸ್ಥೆ ಕಾರ್ಯದರ್ಶಿ ವಿಜಯಾನಾಗೇಶ್ ಮಾತನಾಡಿ, ಸಾಯಿ ಏಂಜಲ್ಸ್ ಕಾಲೇಜಿನ ವಿದ್ಯಾರ್ಥಿ ಜಿಲ್ಲೆಗೆ ಪ್ರಥಮ ಸ್ಥಾನಗಳಿಸಿರುವುದು ಹೆಮ್ಮೆಯ ವಿಷಯ. ವಿದ್ಯಾರ್ಥಿಗಳ ಪರಿಶ್ರಮ ಉಪನ್ಯಾಸಕರ ಶ್ರಮ ಹಾಗೂ ಉತ್ತೇಜನ, ಪಾಲಕರ ಸಹಕಾರದಿಂದ ಉತ್ತಮ ಫಲಿತಾಂಶ ಲಭಿಸಿದೆ ಎಂದರು.
ಈ ಸಂದರ್ಭದಲ್ಲಿ ಶರಣ್ಯ ಪಾಲಕರಾದ ಪ್ರಮೀಳಾ ಶಂಕರೇಗೌಡ, ಕಾಲೇಜಿನ ಜಂಟಿ ಕಾರ್ಯ ದರ್ಶಿ ಎಂ.ಜೆ.ಕಾರ್ತಿಕ, ಪ್ರಾಚಾರ್ಯರಾದ ಕೆ.ಕೆ.ನಾಗರಾಜ್, ಧರ್ಮಪ್ರಸಾದ್ ಸೇರಿದಂತೆ ಆಡಳಿತಮಂಡಳಿ ಸದಸ್ಯರು, ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಸಿಹಿಹಂಚಿ ಸಂಭ್ರಮಿಸಿದರು.

‘ಕಾಲೇಜಿನ ಉಪನ್ಯಾಸಕರು ಶ್ರಮಪಟ್ಟು ಪಾಠ ಮಾಡಿದ ಕಾರಣದಿಂದ ಉತ್ತೇಜನ ದೊರೆತಿದೆ. ಪಾಲಕರ ಪ್ರೋತ್ಸಾಹವೂ ಚೆನ್ನಾಗಿತ್ತು. ಜಿಲ್ಲೆಗೆ ಟಾಪರ್ ಆಗಬೇಕೆಂದಿತ್ತು ಆದರೆ ನಿರೀಕ್ಷೆ ಮಾಡಿರಲಿಲ್ಲ 594 ಅಂಕಗಳಿಸಿರುವುದು ಸಂತೋಷವಾಗಿದೆ. ನೀಟ್‍ಪರೀಕ್ಷೆಗೆ ತಯಾ ರಾಗುತ್ತಿದ್ದು ಎಂಬಿಬಿಎಸ್ ಮಾಡಿ ಸೇವೆ ಸಲ್ಲಿಸಬೇಕೆಂಬ ಗುರಿ ಹೊಂದಿದ್ದೇನೆ.’
– ಎಂ.ಎಸ್.ಶರಣ್ಯ.
.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!