ಎಸಿಬಿ ದಾಳಿ: ಚಿನ್ನಾಭರಣ, ನಗದು, ದಾಖಲೆ ವಶಕ್ಕೆ
1 min readಚಿಕ್ಕಮಗಳೂರು: ಅಜ್ಜಂಪುರ ಪಟ್ಟಣ ಪಂಚಾಯತ್ನಲ್ಲಿ ದ್ವಿತೀಯ ದರ್ಜೆ ಸಹಾಯಕನಾಗಿ ಕಾರ್ಯನಿರ್ವಹಿಸುತ್ತಿದ್ದ ಬಿ.ಜಿ.ತಿಮ್ಮಯ್ಯ ಅವರ ಮನೆ ಮೇಲೆ ಭ್ರಷ್ಟಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ದಾಳಿ ನಡೆಸಿ ಚಿನ್ನಾಭರಣ ಹಾಗೂ ಆಸ್ತಿ ದಾಖಲೆಪತ್ರಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.
ಶುಕ್ರವಾರ ಬೆಳಿಗ್ಗೆ ಭ್ರಷ್ಟಚಾರ ನಿಗ್ರಹ ದಳದ ಉಪಾಧೀಕ್ಷಕ ಎಚ್.ಟಿ.ಸುನೀಲ್ಕುಮಾರ್ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕರಾದ ವಿನಾಯಕ ಬಿಲ್ಲವ, ಎ.ಜಿ.ರಾಥೋಡ್, ಶ್ಯಾಮ್ ಸುಂದರ್ ಒಳಗೊಂಡ ತಂಡ ಮನೆ ಕಚೇರಿ ಮೇಲೆ ದಾಳಿ ನಡೆಸಿ ಸಂಜೆಯವರೆಗೂ ಶೋಧ ಕಾರ್ಯ ನಡೆಸಿದೆ.
ಏಕಕಾಲದಲ್ಲಿ ಕಡೂರು ಮತ್ತು ಬಾಸೂರಿನಲ್ಲಿರುವ ಮನೆ, ಕರ್ತವ್ಯ ನಿರ್ವಹಿಸುತ್ತಿರುವ ಅಜ್ಜಂಪುರ ಪಟ್ಟಣ ಪಂಚಾಯತ್ ಕಚೇರಿಯಲ್ಲಿ ಶೋಧಕಾರ್ಯ ನಡೆಸಿದ್ದು, 160 ಗ್ರಾಂ. ಚಿನ್ನಾಭರಣ, 1ಕೆ.ಜಿ.312 ಗ್ರಾಂ. ಬೆಳ್ಳಿ ಸಾಮಾಗ್ರಿ, 5.800 ನಗದು, ಕಡೂರು ಪಟ್ಟಣದಲ್ಲಿ 3ಖಾಲಿ ನಿವೇಶನ, ಬಾಸೂರಿನಲ್ಲಿ 20 ಎಕರೆ 27 ಗುಂಟೆ ಕೃಷಿ ಜಮೀನು ಹಾಗೂ ಕುರಿ ಶೆಡ್ಗೆ ಸಂಬಂಧಿಸಿದ ದಾಖಲೆ ಪತ್ರಗಳು ಪತ್ತೆಯಾಗಿವೆ.
ಬಿ.ಜಿ.ತಿಮ್ಮಯ್ಯ ಅವರು ಕಡೂರು ಪುರಸಭೆಯಲ್ಲಿ ದಿನಗೂಲಿ ಕೆಲಸಕ್ಕೆ 1996ರಲ್ಲಿ ಸೇರಿ ಕೊಂಡಿದ್ದು, 2006ರಲ್ಲಿ ಡಿ ದರ್ಜೆ ನೌಕರನಾಗಿ ಖಾಯಂ ಸರ್ಕಾರಿ ಹುದ್ದೆಗೆ ನಿಯೋಜನೆ ಗೊಂಡಿದ್ದರು. ಹಾಲಿ ಅಜ್ಜಂಪುರ ಪಟ್ಟಣ ಪಂಚಾಯತ್ನಲ್ಲಿ ದ್ವಿತೀಯ ದರ್ಜೆ ಸಹಾಯಕ ರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g