ಜೂ.18 ಮಲ್ಲಿಗೆ ವಾರ್ಷಿಕ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ
1 min readಚಿಕ್ಕಮಗಳೂರು: ಮಲ್ಲಿಗೆ ಸುಗಮ ಸಂಗೀತ ಟ್ರಸ್ಟ್, ಸುಗಮ ಸಂಗೀತ ಗಂಗಾ, ಕಲ್ಕಟ್ಟೆ ಪುಸ್ತಕ ಮನೆ ಬೀರೂರು ಮಲ್ಲಿಗೆ ಬಳಗ ಸಂಯುಕ್ತಾಶ್ರಯದಲ್ಲಿ ಜೂ.18ರ ಶನಿವಾರ ಸಂಜೆ 5:30ಕ್ಕೆ ನಗರದ ಕುವೆಂಪು ಕಲಾಮಂದಿರದಲ್ಲಿ ಗಾನತರಂಗ ಗೀತಾಗಾಯನ ಹಾಗೂ ಮಲ್ಲಿಗೆ ವಾರ್ಷಿಕ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಲಿದೆ ಎಂದು ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಕಲ್ಕಟ್ಟೆ ನಾಗರಾಜ್ ತಿಳಿಸಿದರು.ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಕಾರದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಪಲ್ಲವಿ ಸಿ.ಟಿ.ರವಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸುಗಮ ಸಂಗೀತ ಗಂಗಾ ಅಧ್ಯಕ್ಷ ಡಾ|ಜೆ.ಪಿ.ಕೃಷ್ಣೇಗೌಡ ಅಧ್ಯಕ್ಷತೆವಹಿಸ ಲಿದ್ದಾರೆ ಎಂದರು.
ಖ್ಯಾತ ಗಾಯಕ ಶಿವಮೊಗ್ಗದ ಕೆ.ಯುವರಾಜ್ ಅವರಿಗೆ ಮಲ್ಲಿಗೆ ವಾರ್ಷಿಕ ಪುರಸ್ಕಾರ ವನ್ನು ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಪ್ರಧಾನ ಮಾಡಲಿದ್ದಾರೆ. ನಗರಸಭೆ ಉಪಾಧ್ಯಕ್ಷೆ ಉಮಾದೇವಿ ಕೃಷ್ಣಪ್ಪ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾ ಯಕ ನಿರ್ದೇಶಕ ಡಾ|ಸಿ.ರಮೇಶ್, ಸಮಾಜ ಸೇವಕ ತಮ್ಮಶೆಟ್ಟಿ, ಬೀರೂರಿನ ಸ್ವರ್ಣ ಗುರುನಾಥ್, ಕಲ್ಕಟ್ಟೆ ಪುಸ್ತಕಮನೆಯ ರೇಖಾನಾಗರಾಜ್ ರಾವ್, ಜಿ.ಪಂ. ಮಾಜಿ ಸದಸ್ಯೆ ಜಸಿಂತಾ ಅನಿಲ್ ಕುಮಾರ್, ಪಿಎಸ್ಐ ಕೆ.ಆರ್.ಸುನೀತಾ, ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿ.ಎಂ.ಅಶೋಕ್, ನಿರ್ದೇಶಕ ಎಸ್.ಎ.ಸಚಿನ್, ಸಾಹಿತಿ ರಾಜಪ್ಪಗೌಡ, ದಾವಣಗೆರೆ ಉದ್ಯಮಿ ಅಭಿಷೇಕ್ ಭಾರಟಕ್ಕಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಮಲ್ಲಿಗೆ ಸುಧೀರ್ ಸಾರಥ್ಯದಲ್ಲಿ ನಡೆಯಲಿರುವ ಗೀತಾಗಾಯನದಲ್ಲಿ ಎಚ್.ಎಂ.ನಾಗ ರಾಜ್ರಾವ್ ಕಲ್ಕಟ್ಟೆ, ಮಂಜುಳ ಮಹೇಶ್, ಅಭಿ ಮಲ್ಲಿಗೆ, ರೇವತಿರಾಜ್, ಸಚಿನ್ ಗಾಡಿಗ್, ವೈಷ್ಣವಿ ಎನ್.ರಾವ್, ಬೀರೂರು ಮಲ್ಲಿಗೆ ಬಳಗ ಕಲಾವಿದರು ಹಾಗೂ ಚಿಕ್ಕಮಗಳೂರು ಮಲ್ಲಿಗೆ ಬಳಗ ಕಲಾವಿದರು ಗೀತಾಗಾಯನ ಪ್ರಸ್ತುತಪಡಿಸುವರು ಎಂದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g