May 18, 2024

MALNAD TV

HEART OF COFFEE CITY

ಜನ ಪ್ರತಿನಿಧಿ ಅಲ್ಲದವರಿಂದ ಏತ ನೀರಾವರಿಗೆ ಚಾಲನೆ: ಅಧಿಕಾರಿಗಳ ವಿರುದ್ಧ ಆಕ್ರೋಶ

1 min read

ಚಿಕ್ಕಮಗಳೂರು: ಜನಪ್ರತಿನಿಧಿ ಅಲ್ಲದವರಿಂದ ಕರಗಡ ಏತ ನೀರಾವರಿ ಮೂಲಕ ಕೆರೆ ತುಂಬಿಸುವ ಕಾರ್ಯಕ್ಕೆ ಚಾಲನೆ ನೀಡಲು ಅವಕಾಶ ಮಾಡಿಕೊಟ್ಟ ಸಣ್ಣ ನೀರಾವರಿ ಇಲಾಖೆ ಅಧಿಕಾರಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕೆಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ರವೀಶ್ ಬಸಪ್ಪ ಆಗ್ರಹಿಸಿದರು.
ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲಾಡಳಿತ ಬಿಜೆಪಿ ಮನೆ ಕಾಯು ತ್ತಿದೆ ಎಂದು ಟೀಕಿಸಿದ ಅವರು, ಕೆರೆ ತುಂಬಿಸುವ ಕಾರ್ಯಕ್ಕೆ ಚಾಲನೆ ನೀಡಿದ ಬಿಜೆಪಿ ಜಿಲ್ಲಾಧ್ಯಕ್ಷ ಎಚ್.ಸಿ.ಕಲ್ಮುರಡಪ್ಪ, ಪ್ರಧಾನ ಕಾರ್ಯದರ್ಶಿ ಬೆಳವಾಡಿ ರವೀಂದ್ರ, ಶಾಸಕ ಸಿ.ಟಿ.ರವಿ ಪತ್ನಿ ಪಲ್ಲವಿ, ಗ್ರಾಮಾಂತರ ಅಧ್ಯಕ್ಷ ಈಶ್ವರಹಳ್ಳಿ ಮಹೇಶ್ ಜನಪ್ರತಿ ನಿಧಿಗಳೇ ಎಂದು ಪ್ರಶ್ನಿಸಿದರು.

ಕೆರೆ ತುಂಬಿಸುವ ನೀರಾವರಿ ಯೋಜನೆ ಕಾರ್ಯಕ್ಕೆ ಚಾಲನೆ ನೀಡಿದವರಿಗೆ ಆತ್ಮಸಾಕ್ಷಿ ಇದೆ ಯೇ? ಯಾವ ಅರ್ಹತೆ ಮೇಲೆ ಚಾಲನೆ ನೀಡಿದರು? ಪಕ್ಷದ ಏಜೆಂಟರಂತೆ ವರ್ತಿಸಿರುವ ಅಧಿಕಾರಿ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಲು ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗುವುದು ಎಂದು ಹೇಳಿದರು.ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುವ ಶಾಸಕ ಸಿ.ಟಿ.ರವಿ ಅವರು ಮಾಡುತ್ತಿರುವ ಕೆಲಸವಾದರೂ ಏನು? ಇದು ಕುಟುಂಬ ರಾಜಕಾರಣವಲ್ಲವೇ? ಸಿ.ಟಿ.ರವಿ ಶಾಸಕರಾಗುವ ಮೊದಲು 1992 ರಲ್ಲಿಯೇ ನೀರಾವರಿ ಹೋರಾಟ ರೂಪಿಸಲಾಗಿತ್ತೆಂದು ಅರ್ಥ ಮಾಡಿಕೊಳ್ಳ ಬೇಕೆಂದರು.

ಕರಗಡ ಏತನೀರಾವರಿಗೆ ಮರುಚಾಲನೆ ಕೊಡಲು ಇವರ್ಯಾರು? ಕರಗಡ ಕುಡಿಯುವ ನೀರಿನ ಯೋಜನೆಯನ್ನು ಶಾಸಕರು ಏತನೀರಾವರಿ ಮಾಡಿದ್ದಾರೆ. ಇವರ ಹುನ್ನಾರ ಅರ್ಥ ವಾಗುತ್ತಿಲ್ಲ, ಪುನರ್ ಪರಿಶೀಲನೆ ಅಗತ್ಯವಿದೆ ಎಂದರು.
ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಎಸ್.ಕೊಪ್ಪಲು ನಟರಾಜ್ ಮಾತನಾಡಿ, ರೈತರ ಹೋರಾಟ ವನ್ನು ಮೊಟಲುಗೊಳಿಸಿದ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಮನೋಜ್‍ಕುಮಾರ್, ಕಾಂತರಾಜ್‍ಅರಸ್ ಇದ್ದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!