April 30, 2024

MALNAD TV

HEART OF COFFEE CITY

ಟಿಪ್ಪು ಬಾಬರ್ ರನ್ನು ಟೀಕಿಸಿದರೆ ಸಿದ್ದರಾಮಯ್ಯಗೆ ಏಕೆ ಉರಿ , ಸಿ. ಟಿ .ರವಿ

1 min read

ಚಿಕ್ಕಮಗಳೂರು: ಟಿಪ್ಪು ಸುಲ್ತಾನ್, ಬಾಬರ್, ಗಜನಿ, ಗೋರಿ ಮೊಘಲ್‍ರನ್ನು ಟೀಕೆ ಮಾಡಿ ದರೇ ಸಿದ್ಧರಾಮಯ್ಯ ಅವರು ಏಕೆ ಎದೆ ಬಡಿದುಕೊಳ್ಳುತ್ತಾರೆ ಇವರಿಗ್ಯಾಕೆ ಉರಿ ಹತ್ತಿದಂತೆ ಆಡಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ.ರವಿ ತಿರುಗೇಟು ನೀಡಿದರು.ಆರ್‍ಎಸ್‍ಎಸ್ ಬಗ್ಗೆ ಮಾತನಾಡಿದರೇ ಬಿಜೆಪಿಯವರು ಏಕೆ ಎದೆಬಡಿಕೊಳ್ಳುತ್ತಾರೆಂಬ ಸಿದ್ಧರಾಮಯ್ಯ ಟೀಕೆಗೆ ಪ್ರತಿಕ್ರಿಯಿಸಿದ ಅವರು, ಆರ್‍ಎಸ್‍ಎಸ್‍ಗೂ ಮತ್ತು ನಮಗೂ ವೈಚಾರಿಕ ಸಂಬಂಧವಿದೆ. ಆರ್‍ಎಸ್‍ಎಸ್‍ನಿಂದ ಪ್ರೇರಣೆಯಾಗಿದ್ದೇವೆ ಎಂದರು.
ಕಾಂಗ್ರೆಸ್‍ನವರಿಗೆ ಟಿಪ್ಪು, ಬಾಬಾರ್, ಔರಂಗಜೇಬ್, ಗಜನಿ ಜೊತೆ ಯಾವ ಸಂಬಂಧವಿದೆ ಎಂದು ಹೇಳಲಿ. ಟಿಪ್ಪು ಕಳ್ಳ, ಕನ್ನಡ ವಿರೋಧಿ, ಅತ್ಯಾಚಾರಿ ಎಂದರೇ, ಇವರ್ಯಾಕೆ ಮುಖ ಒರೆಸಿಕೊಳ್ಳುತ್ತಾರೆ. ಇವರಿಗೂ ಟಿಪ್ಪು ಔರಂಗಜೇಬ್‍ನಿಗೂ ಏನು ಸಂಬಂಧ ಎಂದು ಪ್ರಶ್ನಿಸಿದರು.

ರಾಜ್ಯ ಸಭೆಗೆ ಮೂರನೇ ಅಭ್ಯರ್ಥಿ ಆಯ್ಕೆ ಸಂಬಂಧ ಪ್ರತಿಕ್ರಿಯಿಸಿದ ಅವರು, ಹೆಚ್ಚುವರಿ 32 ಮತಗಳಿವೆ ಚುನಾವಣೆ ನಂಬರ್ ಗೇಮ್. ಬರಬಹುದು, ಬರದೇ ಇರಬಹುದು ನಾವು ನಮ್ಮನ್ನು ಪರೀಕ್ಷೆ ಮಾಡಿಕೊಳ್ಳೋಕೆ ವಿರೋಧಿಗಳು ಮಾತುಕೊಟ್ಟಂತೆ ನಡೆದುಕೊಳ್ಳುತ್ತಾರಾ ಎನ್ನುವುದು ತಿಳಿದುಕೊಳ್ಳಲು ಇದೊಂದು ಪರೀಕ್ಷೆಯಾಗಿದೆ ಎಂದರು.
ರಣನೀತಿಯನ್ನು ಮಾಧ್ಯಮದಲ್ಲಿ ಚರ್ಚೆ ಮಾಡೋಕೆ ಸಾಧ್ಯವಿಲ್ಲ. ಫಲಿತಾಂಶ ಬಂದ ನಂತರ ಯಾರು ಅಡ್ಡ ಮತ ಹಾಕಿದ್ದಾರೆ. ಉದ್ಧ ಮತ ಹಾಕಿದ್ದಾರೆ ಗೊತ್ತಾಗುತ್ತದೆ. ನಮ್ಮಗೂ 32 ಮತಗಳಿವೆ. ಜೆಡಿಎಸ್‍ಗೂ ಅಷ್ಟೇ ಮತಗಳಿವೆ. ಕಾಂಗ್ರೆಸ್ ಹೆಚ್ಚುವರಿ ಮತ ಏನು ಮಾಡು ತ್ತಾರೆ ಗೊತ್ತಿಲ್ಲ. ಚುನಾವಣೆ ಅಂದ ಮೇಲೆ ತಂತ್ರಗಾರಿಕೆ ಇದ್ದೇ ಇರುತ್ತದೆ ಎಂದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!