9 ವರ್ಷದ ಪ್ರೀತಿಯನ್ನ ನಿರಾಕರಿಸಿದ ಯುವತಿ, ಯುವಕ ಆತ್ಮಹತ್ಯೆ
1 min read
ಚಿಕ್ಕಮಗಳೂರು. ಒಂಬತ್ತು ವರ್ಷದಿಂದ ಪ್ರೀತಿಸಿದ ಯುವತಿ ಮದುವೆಗೆ ನಿರಾಕರಿಸಿದಳು ಎಂಬ ಕಾರಣಕ್ಕೆ ಯುವಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಮುತ್ತಿನಕೊಪ್ಪ ಸಮೀಪದ ಶಂಕರಪುರ ಗ್ರಾಮದಲ್ಲಿ ನಡೆದಿದೆ. ಮೃತನನ್ನ 31 ವರ್ಷದ ಚೇತನ ಎಂದು ಗುರುತಿಸಲಾಗಿದೆ. ಮೃತ ಚೇತನ್ ಕಳೆದ 9 ವರ್ಷಗಳಿಂದ ಎನ್.ಆರ್. ಪುರ ತಾಲೂಕಿನ ಚಿಟ್ಟಿನಾಡು ಗ್ರಾಮದ ಗಾನವಿ ಎಂಬ ಯುವತಿಯನ್ನ ಪ್ರೀತಿಸುತ್ತಿದ್ದನು. ಇದೀಗ ಮದುವೆಗೆ ಯುವತಿ ಗಾನವಿ ನಿರಾಕರಿಸಿದಳು ಎಂಬ ಕಾರಣಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ನನಗೆ ಗಾನವಿ ಮೋಸ ಮಾಡಿದಳು ಎಂದು ಆರೋಪದ ವಾಯ್ಸ್ ಮೆಸೇಜ್ ಕಳಿಸಿ ನೇಣಿಗೆ ಶರಣಾಗಿದ್ದಾನೆ. ಆತ್ಮಹತ್ಯೆಗೂ ಮುನ್ನ ಕಳೆದ 9 ವರ್ಷಗಳಿಂದ ಗಾನವಿಗಾಗಿ ಆತ ಖರ್ಚು ಮಾಡಿರುವ ಹಣದ ಲೆಕ್ಕವನ್ನು ಬರೆದಿಟ್ಟಿದ್ದಾನೆ.
“ಪ್ರೇಮಿಗೆ ಮಾಡಿದ ಖರ್ಚಿನ ಲೆಕ್ಕ ಬರೆದಿಟ್ಟ ಯುವಕ”
ನಾನು ಗಾನವಿ ಒಂಬತ್ತು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದೇವು. ನಾನು ಅವಳಿಗಾಗಿ ಖರ್ಚು ಮಾಡಿರುವ ಹಣ ಹಾಗೂ ಆಕೆ ನನ್ನಿಂದ ಪಡೆದುಕೊಂಡಿರುವ ಹಣ ಸುಮಾರು ನಾಲ್ಕು ಲಕ್ಷ ಎಂದು ಬರೆದಿಟ್ಟಿದ್ದಾನೆ. ನನ್ನ ಸಾವಿಗೆ ನ್ಯಾಯ ಸಿಗಬೇಕಾದರೆ ಆಕೆಗೆ ಶಿಕ್ಷೆಯಾಗಬೇಕು. ನನ್ನ ಚಿತೆಗೆ ಗಾನವಿಯೇ ಬೆಂಕಿ ಇಡಬೇಕು, ಆಕೆ ಬರುವತನಕ ಮೃತದೆಹವನ್ನ ಕೆಳಗಿಳಿಸಬೇಡಿ ಎಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನನಗೆ ಗಾನವಿ ಹಾಗೂ ಅವಳ ಸಹೋದರ ಮಾನಸಿಕ ಕಿರುಕುಳ ನೀಡಿದ್ದರಿಂದ ಮನನೊಂದು ಆತ್ಮಹತ್ಯೆಗೆ ಶರಣಾಗುತ್ತಿದ್ದೇನೆ ಎಂದು ಸಂಬಂಧಿಕರಿಗೆ ವಾಯ್ಸ್ ಮೆಸೇಜ್ ಕಳುಹಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕಳೆದ ಒಂಬತ್ತು ವರ್ಷಗಳಿಂದ ಆಕೆ ಅವರಮ್ಮ ನನ್ನ ಬಳಿ ನಾಲ್ಕೂವರೆ ಲಕ್ಷ ಹಣ ಕಿತ್ತಿದ್ದಾರೆ ಎಂದು ಆರೋಪಿಸಿದ್ದಾನೆ. ಎನ್.ಆರ್.ಪುರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g